ಈಶ್ವರ್ ದೈತೋಟ ಅವರ ಬಗ್ಗೆ ನಿಮಗೆಷ್ಟುಗೊತ್ತು…?

1
176

ಕರ್ನಾಟಕದ ಅತಿಹೆಚ್ಚು ದಿನಪತ್ರಿಕೆಗಳನ್ನು ಮುನ್ನಡೆಸಿದ ಹಿರಿಮೆಯನ್ನೂ ಹೊಂದಿರುವ ಈಶ್ವರ ದೈತೋಟ 1991ರಿಂದ 2011 ರವರೆಗಿನ ಎರಡು ದಶಕಗಳಲ್ಲಿ ಅತ್ಯಂತ ಹೆಚ್ಚು ಆವೃತ್ತಿಗಳು ಮತ್ತು ಪ್ರಸಾರದ ವಿಜಯ ಕರ್ನಾಟಕದ ಫೌಂಡರ್ ಚೀಫ್ ಎಡಿಟರ್. ಮಣಿಪಾಲದ ಉದಯವಾಣಿ ರೆಸಿಡೆಂಟ್ ಎಡಿಟರ್, ಬೆನೆಟ್ ಕೋಲ್ಮನ್ ಗುಂಪಿನ ಟೈಮ್ಸ್ ಆಫ್ ಇಂಡಿಯಾ (ಕ) ಎಡಿಟರ್, ಕನ್ನಡದ ಸೀನಿಯರ್ ಮೋಸ್ಟ್ ದೈನಿಕ ಸಂಯುಕ್ತ ಕರ್ನಾಟಕದ ಚೀಫ್ ಎಡಿಟರ್ ಆಗಿ ಹೊಣೆ ಹೊತ್ತವರು.

ಮುದ್ರಣ ಮಾಧ್ಯಮ, ರೇಡಿಯೋ, ಟೆಲಿವಿಶನ್‍ನಲ್ಲಿ ಮೂರೂವರೆ ದಶಕಗಳಿಗೂ ಹೆಚ್ಚು ಅನುಭವ ಹೊಂದಿ ಪತ್ರಿಕೋದ್ಯಮ ಶಿಕ್ಷಣ, ಅಭ್ಯುದಯ ಪತ್ರಿಕೋದ್ಯಮ, ಮತ್ತು ಮೀಡಿಯಾ ಮ್ಯಾನೇಜ್ಮೆಂಟ್‍ನಲ್ಲಿಯೂ ಅಪಾರ ಸಾಧನೆಗಳನ್ನು ದಾಖಲಿಸಿರುವ ವಿಶಿಷ್ಟ ಪತ್ರಕರ್ತ ಈಶ್ವರ ದೈತೋಟ. ಯು.ಜಿ.ಸಿ ಮತ್ತು ಯೂನಿಸೆಫ್ ತರಬೇತಿ ಯೋಜನೆಗೆ ಡೆವೆಲ್ಮೆಂಟ್ ಕನ್ಸಲ್ಟೆಂಟ್ ಎಂದು ಅವರು ಮನ್ನಣೆ ಪಡೆದಿದ್ದಾರೆ.
ಅವರಿಗೆ 2016 ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2015 ರಲ್ಲಿ ಪ್ರತಿಷ್ಠಿತ ಟಿಎಸ್‍ಆರ್ ಪತ್ರಿಕೋದ್ಯಮ ಪ್ರಶಸ್ತಿ ಹಾಗು 1 ಲಕ್ಷ ರೂ. ನಗದು ಪ್ರಶಸ್ತಿ ನೀಡಿ ಕರ್ನಾಟಕ ಸರಕಾರ ಗೌರವಿಸಿದೆ. ಅಲ್ಲದೇ, 2015 ರಲ್ಲಿ ಮೂಡಬಿದ್ರೆಯ ಪ್ರತಿಷ್ಥಿತ ನುಡಿಸಿರಿ ಪ್ರಶಸ್ತಿಯೂ ಅವರ ಪಾಲಿಗೆ ಬಂದಿದೆ. 2012 ಮುಂಬಯಿನ ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪತ್ರಿಕೋದ್ಯಮ-ಸಾಹಿತ್ಯ ಪ್ರಶಸ್ತಿ, 2008 ರಲ್ಲಿ ಅಭ್ಯುದಯ ಪತ್ರಿಕೋದ್ಯಮ ರಾಜ್ಯ ಪ್ರಶಸ್ತಿಯೂ ಅವರಿಗೆ ಲಭ್ಯವಾಗಿತ್ತು.


ಹಾಗೆಯೇ, ಮೈಸೂರಿನ ಕುವೆಂಪು ಶಿಕ್ಷಣ ಸಂಸ್ಥೆಯಿಂದ ರಾಜ್ಯದ ಅತ್ಯುತ್ತಮ ಸಂಪಾದಕ ಪ್ರಶಸ್ತಿ (2006) ಹಾಗು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯಿಂದ ಅತ್ಯುತ್ತಮ ಕನ್ನಡ ಪುಸ್ತಕ ಪ್ರಶಸ್ತಿ, ಬೆಂಗಳೂರು ವರದಿಗಾರರ ಕೂಟದಿಂದ ಅತ್ಯುತ್ತಮ ಅಭ್ಯುದಯ ವರದಿ ಪ್ರಶಸ್ತಿ ಇತ್ಯಾದ ಪ್ರೊಫೆಶನಲ್ ಗೌರವಗಳಿಗೆ ಭಾಜನರಾಗಿದ್ದಾರೆ. 2008 ರಲ್ಲಿ ರಾಷ್ಟ್ರೀಯ ಝಿ ಟಿವಿ ಚಾನೆಲ್ ಅವರನ್ನು ಕರ್ನಾಟಕದಲ್ಲಿ ಇಲೆಕ್ಟ್ರಾನಿಕ್ ಮೀಡಿಯಂ ಮತ್ತು ಪತ್ರಿಕೋದ್ಯಮಕ್ಕೆ ಅತಿ ದೊಡ್ಡ ಸೇವೆ ಸಲ್ಲಿಸಿದ ಸಂಪಾದಕ ಮತ್ತು ಅತ್ಯಂತ ಜನಪ್ರಿಯ ಮೀಡಿಯಾ ಪರ್ಸನ್ ( ವೀಕ್ಷಕರ ಆಯ್ಕೆ) ಎಂಬೆರಡು ಪ್ರಶಸ್ತಿಗಳನ್ನೂ ನೀಡಿ ಸನ್ಮಾನಿಸಿದೆ.

ಎರಡೂವರೆ ದಶಕಗಳಿಂದ ಅವರ ಅಂಕಣಗಳು – ಅಂತರದೃಷ್ಟಿ, ಅನುಭಾವ ಮತ್ತು ಚಿಣ್ಣಚಿಣ್ಣ ಪಾಠ ಮತ್ತು ಮಾಧ್ಯಮ ಭ್ರಮರಿ, ಕಷಾಯ, ಕೂಕಿಲು (ಉದಯವಾಣಿ, ವಿಜಯ ಕರ್ನಾಟಕ, ಸಂಯುಕ್ತ ಕರ್ನಾಟಕ, ಟೈಮ್ಸ್ ಆಫ್ ಇಂಡಿಯಾ-ಕನ್ನಡ, ಹೊಸದಿಗಂತ, ಸುದ್ದಿಮೂಲ, ವಿಜಯವಾಣಿ ಹಾಗೂ ಕರ್ಮವೀರ, ಕನೆಕ್ಟ್.ಕನ್ನಡ ) ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಣೆ ಆಗಿವೆ, ಅಗುತ್ತಿವೆ.

8 ವರ್ಷ ದೂರದರ್ಶನದಲ್ಲಿ ಕನ್ನಡ ನ್ಯೂಸ್ ರೀಡರ್ ಆಗಿದ್ದುದಲ್ಲದೆ, ಆಕಾಶವಾಣಿ, ಉದಯ, ದೂರದರ್ಶನ, ಮತ್ತಿತರ ಟಿವಿ, ರೇಡಿಯೋಗಳಲ್ಲಿ ಪ್ರಚಲಿತ ವಿಷಯಗಳ ಬಗ್ಗೆ 2,000 ಕ್ಕೂ ಹೆಚ್ಚು ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಿ (ಮಂಥನ, ಪಂಚಾಯ್ತಿ ಕಟ್ಟೆ, ಸಂವೇದನೆ, ಮತಭೇರಿ) ಮನೆಮಾತಾಗಿದ್ದಾರೆ. ಸಮಯ ಟಿವಿಯಲ್ಲಿ ಪ್ರೈಮ್ ಟೈಮ್ ಬುಲೆಟಿನ್ ಗೆಸ್ಟ್ ಆಂಕರ್, ಪ್ರಜಾ ಟಿವಿಯಲ್ಲಿ ಚದುರಂಗ ಎಂಬ ವೀಕ್ಲಿ ಸಂದರ್ಶನದ ಆಂಕರ್, ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾ ಬಂದಿದ್ದಾರೆ.
ದೈತೋಟರ ಮಂಥನ ಸೀರಿಯಲ್ (5 ವರ್ಷ ದೂರದರ್ಶನ) ಪಂಚಾಯ್ತಿಕಟ್ಟೆ- ಡೆವಲಪ್‍ಮೆಂಟ್ ಟಿಬೇಟ್ (ಉದಯ ನ್ಯೂಸ್ ಚಾನೆಲ್ 5 ವರ್ಷ) ಹಾಗೂ ಸಂವೇದನೆ-ಶೇರಿಂಗ್ ವಿದ್ ಕನ್ಸರ್ನ್ ಇಂಟರ್ ವ್ಯೂ (ಉದಯ ಚಾನೆಲ್‍ನಲ್ಲಿ ವಾರಕ್ಕೆ ಐದು ದಿನ 3 ವರ್ಷ) ಜನಪ್ರಿಯತೆ ಹೊಂದಿತ್ತು.

ವಾಯ್ಸ್ ಆಫ್ ಅಮೇರಿಕಾ ಮತ್ತು ಕೆನೆಡಿಯನ್ ರೇಡಿಯೋಗಳಲ್ಲಿ ಅವರ ಕಾರ್ಯಕ್ರಮಗಳು ಪ್ರಸಾರವಾಗಿವೆ. ಹಲವು ಇಂಟರ್‍ನ್ಯಾಶನಲ್ ಜರ್ನಲ್‍ಗಳಿಗೂ ಲೇಖನ ಬರೆದಿದ್ದಾರೆ.

ಜಗತ್ತಿನ ಐದು ಭೂಖಂಡಗಳಿಗೆ ಭೇಟಿ ನೀಡಿರುವ ದೈತೋಟ, ಪ್ರಧಾನಿಗಳಾದ ರಾಜೀವ್ ಗಾಂಧಿ, ವಿ.ಪಿ. ಸಿಂಗ್ ಮತ್ತು ಪಿ.ವಿ. ನರಸಿಂಹರಾವ್ ಜೊತೆಗೆ ಸ್ವೀಡನ್, ರಶಿಯಾ ಮತ್ತು ದಕ್ಷಿಣ ಅಮೆರಿಕಾ ಪ್ರವಾಸ ಮಾಡಿದ್ದಾರೆ. ಶ್ರೀಲಂಕಾದ ಅಧ್ಯಕ್ಷೆ ಚಂದ್ರಿಕಾ ಕುಮಾರತುಂಗೆ, ಫ್ರಾನ್ಸ್‍ನ ಮಿತ್ತೆರಾಂ, ಜರ್ಮನಿಯ ಹೆಲ್ಮೆಟೆ ಕೋಲ್, ರಶಿಯಾದ ಕೊಸಿಗಿನ್, ಸ್ವೀಡನಿನ ಒಲೋಫ್ ಪಾಮೆ ಮುಂತಾಗಿ ಅಂತಾರಾಷ್ಟ್ರೀಯ ಪ್ರಮುಖರನ್ನೂ ಭೇಟಿಯಾಗಿರುವುದಲ್ಲದೆ, ರಿಯೋ ಭೂಶೃಂಗದಲ್ಲಿ ಅಮೇರಿಕದ ಜಾರ್ಜ್ ಬುಶ್ ಮತ್ತು ಕ್ಯೂಬಾದ ಫೀಡೆಲ್ ಕಾಸ್ಟ್ರೋ ಅವರ ಜೋಡಿ ಭಾಷಣಗಳನ್ನು ಪ್ರತ್ಯಕ್ಷ ವರದಿ ಮಾಡಿದ ಅನುಭವವೂ ಹೊಂದಿದ್ದಾರೆ.

ಡೈಲಿ ಜರ್ನಲಿಸಂನಲ್ಲಿ ದಿನಕ್ಕೊಂದು ವಿಶೇಷ ಪುರವಣಿ ಮತ್ತು ಪುಟಾಣಿಗಳಿಗೆ ಮತ್ತು ಮಹಿಳೆಯರಿಗಾಗಿ ವೀಕ್ಲಿ ಸಪ್ಲಿಮೆಂಟ್ಸ್-ಹಾಗೆಯೇ ಕೃಷಿ, ಯುವಜನತೆಗಾಗಿ ವಿಶೇಷ ಪುರವಣಿಗಳೆಂಬ ವೈಶಿಷ್ಟ್ಯವನ್ನು ಮೊದಲಬಾರಿಗೆ ಅಳವಡಿಸಿದವರು. ಅಲ್ಲದೆ, ಭಾರತೀಯ ಪತ್ರಿಕೋದ್ಯಮದಲ್ಲಿ ಕುಗ್ರಾಮ ಗುರುತಿಸಿ ಎಂಬ ಡೆವೆಲಪ್‍ಮೆಂಟ್ ಜರ್ನಲಿಸಂ ಎಕ್ಸಪರಿಮೆಂಟ್ ನೇತೃತ್ವ (1981-87) ವಹಿಸುವುದರೊಂದಿಗೆ ಮುದ್ರಣ ಮಾಧ್ಯಮದಲ್ಲಿ ಅನೇಕ ಹೊಸ ಪ್ರಯೋಗಗಳನ್ನು ಮಾಡಿದ್ದಾರೆ.

ಮೈಸೂರು ಯೂನಿವರ್ಸಿಟಿ ಜರ್ನಲಿಸಂ ಎಂ.ಎ., (1973) ಫಿಲಿಪ್ಪೀನ್ಸ್‍ನ ಪ್ರೆಸ್ ಫೌಂಡೇಶನ್ ಆಫ್ ಏಶಿಯಾದಲ್ಲಿ ಸ್ನಾತಕೋತ್ತರ ಡೆವಲಪ್‍ಮೆಂಟ್ ಜರ್ನಲಿಸಂ ಶಿಕ್ಷಣ (1979-80) ಪಡೆದವರು. ಆಸ್ಟ್ರೇಲಿಯಾದ ವಿಕ್ಟೋರಿಯ ಮತ್ತು ನ್ಯೂಸೌತ್ ವೇಲ್ಸ್ ರಾಜ್ಯಗಳ ಕಮ್ಯುನಿಟಿ ನ್ಯೂಸ್‍ಪೇಪರ್‍ಗಳಲ್ಲಿ ತರಬೇತಿ ಪಡೆದಿದ್ದಾರೆ. ಅಮೇರಿಕಾದ ವಿವಿಧ ಅಧ್ಯಯನ ಸಂಸ್ಥೆಗಳು ಮತ್ತು ಸಾಮಾಜಿಕ ಸಂಘಟನೆಗಳ ಆಶ್ರಯದಲ್ಲಿ ಅಭ್ಯುದಯ ಸಂಬಂಧಿತ ಭಾಷಣ, ಸಮಾಲೋಚನೆಗಳಲ್ಲಿ ಭಾಗಿಯಾಗಿದ್ದಾರೆ.

ಬ್ರಿಟಿಷ್ ಸರಕಾರದಿಂದ ಆರ್ಥಿಕ ಮತ್ತು ಪರಿಸರ ಸಂಬಂಧಿತವಾಗಿ (1988,91,97 ಮತ್ತು 98 ರಲ್ಲಿ) ಮತ್ತು ಯು.ಎಸ್.ನಿಂದ ಕಾನ್‍ಫ್ಲಿಕ್ಟ್ ರೆಸೊಲ್ಯೂಷನ್ ಮತ್ತು ಮೀಡಿಯಾ ಸ್ಟಡೀಸ್‍ಗೆ (1992 ಮತ್ತು 1998) ಹಾಗೂ 2008 ರಲ್ಲಿ ಯುರೋಪ್‍ಗೆ ಆಹ್ವಾನಿತರಾಗಿದ್ದರು.

ಅಭ್ಯುದಯ ಪತ್ರಿಕೋದ್ಯಮ ಸಂಬಂಧಿತ ಅನೇಕ ಡಾಕ್ಯುಮೆಂಟರಿಗಳನ್ನು, ರೇಡಿಯೋ ರೂಪಕಗಳನ್ನು ತಯಾರಿಸಿರುವ ಅನುಭವ ಅವರಿಗಿದೆ. ಏಶಿಯನ್ ಮೀಡಿಯ ಬ್ಯಾರೋಮೀಟರ್ ಎಂಬ ಜರ್ಮನಿಯ ಎಫ್. ಇ.ಎಸ್. ಸಂಸ್ಥೆ ಪ್ರಕಾಶಿತ 2009 ಮತ್ತು 14 ರ ಸಂಶೋಧನಾ ಪ್ರಕಟಣೆಗಳ (ಇಂಗ್ಲೀಷ್) ಸಂಪಾದಕೀಯ ಹೊಣೆಯಲ್ಲಿ ಅವರು ಭಾಗವಹಿಸಿದ್ದರು.

ಅವರು ಪತ್ರಿಕೋದ್ಯಮ ಮತ್ತಿತರ ವಿಷಯಗಳ ಬಗ್ಗೆ ಬರೆದಿರುವ, ಅನುವಾದಿಸಿರುವ ಪುಸ್ತಕಗಳ ಸಂಖ್ಯೆ 75 ಕ್ಕೂ ಹೆಚ್ಚು. ದಿ ಎಯ್ಟೀಂತ್ ಎಲಿಫೆಂಟ್, (ಇಂಗ್ಲೀಷ್), ಮಾಧ್ಯಮ ಬ್ರಹ್ಮಾಂಡ, ವಿಧಾನಮಂಡ¯ ವರದಿಗಾರಿಕೆ, ಅಭ್ಯುದಯ ಪತ್ರಿಕೋದ್ಯಮ, ಸೂಜಿಮಲ್ಲಿಗೆ, ಕನ್ನಡ ಕಷಾಯ, ನಾಡು ನುಡಿ, ಸಂಸ್ಕøತಿ ಮತ್ತು ಫ್ಯಾಶನ್, ಪ್ರೆಸ್ ಅಂಡ್ ಪೊಲೀಸ್, ಡೆವೆಲಪ್‍ಮೆಂಟ್ ಆಫ್ ಜರ್ನಲಿಸಂ ಇನ್ ಸೌತ್ ಕೆನರಾ (ಇಂಗ್ಲೀಷ್-ಮೈಸೂರು ವಿವಿ) ಅಂತರದೃಷ್ಟಿ ಪ್ರಮುಖವಾದವು.

ಭಾರತದ ರಾಷ್ಟ್ರಪತಿಗಳಾಗಿದ್ದ ಎ.ಪಿ.ಜೆ. ಅಬ್ದುಲ್ ಕಲಾಂ (ಎ ಮ್ಯಾನಿಫೆಸ್ಟೋ ಫಾರ್ ಚೇಂಜ್) ಝಕೀರ್ ಹುಸೈನ್ ಅವರ ಪುಸ್ತಕಗಳನ್ನಲ್ಲದೆ ಪಿರಮಿಡ್-ವಾಸ್ತು, ನನ್ನದೂ ಒಂದು ಪ್ರೇಮಕಥೆ, ಮುಳುಗುತ್ತಿದ್ದೀರಾ, ಸಬ್ಮೆರೀನ್ ಆಗಿ – ಎಂದು ಹಲವಾರು ಪುಸ್ತಕಗಳನ್ನು ಕನ್ನಡೀಕರಿಸಿದ್ದಾರೆ. 20 ಕ್ಕೂ ಹೆಚ್ಚು ಮಹತ್ವದ ಪುಸ್ತಕಗಳ ಸಹ – ಲೇಖಕರಾಗಿಯೂ ದುಡಿದಿದ್ದಾರೆ.

ರಮೇಶ್ ರಾಮನಾಥನ್ ಅವರ ಜನಾಗ್ರಹದ ಸಹಭಾಗಿತ್ವ ಸರಕಾರ ಚಳವಳಿಯ ಮೀಡಿಯಾ ಅಡ್‍ವೈಸರ್ ಹಾಗೂ ಜಾಗತಿಕ ದಾಖಲೆ ಮಾಡಿರುವ ರೋಹಿಣಿ ನಿಲೇಕಣಿಯವರ ಮಕ್ಕಳ ಪುಸ್ತಕ ಪ್ರಕಟಣಾ ಸಂಸ್ಥೆ – ಪ್ರಥಮ್ ಟ್ರಸ್ಟಿನ ಕಂಟೆಂಟ್ ಕನ್ಸಲ್ಟೆಂಟ್ ಆಗಿ ತಲಾ ಮೂರು ವರ್ಷ ವಾಲೆಂಟಿಯರ್ ಆಗಿ ದುಡಿದಿದ್ದಾರೆ.

ಯೂನಿವರ್ಸಿಟಿ ಗ್ರಾಂಟ್ ಕಮೀಶನ್‍ನ ಡೆವೆಲಪ್‍ಮೆಂಟ್ ಕಮ್ಯುನಿಕೇಶನ್ ಕನ್ಸಲ್ಟೆಂಟ್ ಆಗಿ ಯು.ಪಿ.ಇ, ಮತ್ತು ಯೂನಿಸೆಫ್ ಜರ್ನಲಿಸಂ ಟ್ರೈನಿಂಗ್‍ಗೆ ಸಂಪನ್ಮೂಲ ವ್ಯಕ್ತಿಯಾಗಿಯೂ ಕೊಡುಗೆ ಕೊಡುತ್ತಿದ್ದಾರೆ. ಪಾರ್ಟಿಸಿಪಟರಿ ಗವರ್ನೆನ್ಸ್ ಸಂಬಂಧಿತ ಹಲವು ಇಂಗ್ಲೀಷ್ ಮತ್ತು ಕನ್ನಡ ಪುಸ್ತಕಗಳ ಪ್ರಕಟಣೆಗಳ ಸಂಪಾದಕೀಯ ತಂಡದಲ್ಲಿ ಕೆಲಸ ಮಾಡಿದ್ದಾರೆ. ಹೆಸರಾಂತ ಪರಿತಜ್ಞ ಡಾ. ಅನಿಲ್ ಅಗರ್‍ವಾಲ್ ಅವರ ಹೊಸದಿಲ್ಲಿಯ ಸೆಂಟರ್ ಫಾರ್ ಸಯನ್ಸ್ ಅಂಡ್ ಎನ್‍ವಯರ್ನ್‍ಮೆಂಟ್ ಸಂಸ್ಥೆಯ ಹಲವು ಪ್ರಕಟಣೆಗಳಿಗೆ ಅವರು ಕೊಡುಗೆ ನೀಡಿದ್ದಾರೆ.

ಗ್ರೇಟ್ ಈಸ್ಟರ್ನ್ ಮ್ಯಾನೇಜ್ಮೆಂಟ್ ಸ್ಕೂಲ್, ಬ್ರಿಟನಿನ ಡಬ್ಲುಎಲ್ಸಿ ಮೀಡಿಯಾ ಸ್ಕೂಲ್, ಜಿಸಿಸಿ ಯೂನಿವರ್ಸಿಟಿ, ಸುರಾನಾ ಇನ್ಸಟಿಟ್ಯೂಟ್ ಆಫ್ ಹೈಯರ್ ಎಜುಕೇಶನ್, ಬೆಂಗಳೂರು ಯೂನಿವರ್ಸಿಟಿ, ಮೀಡಿಯಾ ಇನ್‍ಫಾರ್ಮೇಶನ್ ಅಂಡ್ ಕಮ್ಯುನಿಕೇಶನ್ ಸೆಂಟರ್ ಆಫ್ ಇಂಡಿಯಾ ಮುಂತಾಗಿ ಹತ್ತಾರು ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಮೀಡಿಯಾ ಮ್ಯಾನೇಜ್‍ಮೆಂಟ್, ಡೆವೆಲಪ್‍ಮೆಂಟ್ ಕಮ್ಯುನಿಕೇಶನ್, ರಿಪೋರ್ಟಿಂಗ್, ಮೀಡಿಯಾ ಬಿಸಿನೆಸ್, ಎಥಿಕ್ಸ್ ಅಂಡ್ ಮೀಡಿಯಾ ಲಾ ಇತ್ಯಾದಿ ವಿಷಯಗಳ ವಿಸಿಟಿಂಗ್ ಫಾಕಲ್ಟಿ ಅಲ್ಲದೆ, ಮಣಿಪಾಲದ ಮಾಹೆ ಯೂನಿವರ್ಸಿಟಿ, ಬೆಂಗಳೂರು ಮತ್ತು ಮೈಸೂರು ಯೂನಿವರ್ಸಿಟಿಗಳ ಕಮ್ಯುನಿಕೇಶನ್ ಮತ್ತು ಜರ್ನಲಿಸಂ ಅಧ್ಯಯನದ ಬೋರ್ಡ್ ಆಫ್ ಸ್ಟಡೀಸ್ ಸದಸ್ಯರಾಗಿಯೂ, ಸಿಲೆಬಸ್ ರಚನೆಗೂ ಕೊಡುಗೆ ಕೊಟ್ಟಿದ್ದಾರೆ.

1 COMMENT

LEAVE A REPLY

Please enter your comment!
Please enter your name here