The New Indian Times | ದಿ ನ್ಯೂ ಇಂಡಿಯನ್ ಟೈಮ್ಸ್
No Result
View All Result
The New Indian Times | ದಿ ನ್ಯೂ ಇಂಡಿಯನ್ ಟೈಮ್ಸ್

ಅಪ್ಪು ನಿಧನದ ನೋವು ಇರುವಾಗಲೇ ಇದೆಲ್ಲಾ ಬೇಕಾ: ಸುಮಲತಾ

admin by admin
November 25, 2021
in ಎಲ್ಲೆಲ್ಲಿ ಏನೇನು.?
0
ಅಪ್ಪು ನಿಧನದ ನೋವು ಇರುವಾಗಲೇ ಇದೆಲ್ಲಾ ಬೇಕಾ: ಸುಮಲತಾ
0
SHARES
0
VIEWS
Share on FacebookShare on Twitter

ನಟ ಪುನೀತ್​ ರಾಜ್​ಕುಮಾರ್​ ಅಗಲಿಕೆ ನೋವು ಇನ್ನೂ ಹಸಿಯಾಗೆ ಇದೆ. ಅಪ್ಪು ನಿಧನದ ಬಳಿಕ ಅವರ ಹೆಸರಿನಲ್ಲಿ ಅಭಿಮಾನಿಗಳು ಅನೇಕ ಕೆಲಸಗಳನ್ನು ಮಾಡುತ್ತಿದ್ದಾರೆ. ತಮ್ಮೂರಿನ ರಸ್ತೆ, ಸರ್ಕಲ್​ಗಳಿಗೆ ಅಪ್ಪು ಹೆಸರನ್ನು ಇಡುತ್ತಿದ್ದಾರೆ.

ಮರಣೋತ್ತರ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನೂ ಘೋಷಣೆ ಮಾಡಲಾಗಿದ್ದು, ಪದ್ಮಶ್ರೀ ಪ್ರಶಸ್ತಿಗೂ ಪುನೀತ್​ ಹೆಸರನ್ನು ಶಿಫಾರಸು ಮಾಡುವಂತೆ ಆಗ್ರಹ ಕೇಳಿಬಂದಿದೆ. ಇದೀಗ ದಿವಂಗತ ಅಂಬರೀಷ್​ ಅವರಿಗೂ ಇಂಥ ಗೌರವ ಸಲ್ಲಬೇಕು. ಅದಕ್ಕಾಗಿ ಹೋರಾಟದ ಹಾದಿ ತುಳಿಯುವುದಾಗಿ ಅಂಬಿ ಫ್ಯಾನ್ಸ್​ ಹೇಳಿದ್ದಾರೆ.

Related posts

ಶ್ರೀನಿವಾಸನಿಗೆ ಧರ್ಮರಥ ಅರ್ಪಿಸಿಸ ಸುಧಾ ಮೂರ್ತಿ

ಶ್ರೀನಿವಾಸನಿಗೆ ಧರ್ಮರಥ ಅರ್ಪಿಸಿಸ ಸುಧಾ ಮೂರ್ತಿ

July 6, 2022
ವ್ಹೀಲಿಂಗ್ ವಿರುದ್ಧ ವಿಶೇಷ ಅಭಿಯಾನ

ವ್ಹೀಲಿಂಗ್ ವಿರುದ್ಧ ವಿಶೇಷ ಅಭಿಯಾನ

July 6, 2022

ಈ ವಿಚಾರ ತಿಳಿಯುತ್ತಿದ್ದಂತೆ ಸುಮಲತಾ ಅಂಬರೀಷ್​​ ಬೇಸರ ವ್ಯಕ್ತಪಡಿಸಿದ್ದಾರೆ. ಅಂಬಿ ಅಭಿಮಾನಿಗಳಿಗೆ ಬಹಿರಂಗ ಪತ್ರವನ್ನೂ ಬರೆದಿದ್ದಾರೆ. ಅದರ ವಿವರ ಹೀಗಿದೆ.
‘ನಮ್ಮ ಪ್ರೀತಿಯ ಡಾ. ಅಂಬರೀಷ್ ಅವರನ್ನು ಆರಾಧ್ಯ ದೈವದಂತೆ ಪ್ರೀತಿಸಿ, ಅವರ ನೆನಪನ್ನು ಚಿರಸ್ಥಾಯಿಯಾಗಿ ಬೆಳಗಿಸುತ್ತಿರುವ ನೆಚ್ಚಿನ ಅಭಿಮಾನಿ ಸಂಘಗಳು ಹಾಗೂ ಇನ್ನಿತರ ಸಂಘಟನೆಗಳು ಇಂದು ಅಂಬರೀಷ್ ಅವರ ಸ್ಮಾರಕ ಅಭಿವೃದ್ಧಿಗೊಳಸುವುದು, ಅವರ ಹೆಸರಿನಲ್ಲಿ ರಸ್ತೆಗಳನ್ನು ನಾಮಕರಣ ಮಾಡುವುದು ಮತ್ತು ಇನ್ನಿತರ ಬೇಡಿಕೆಗಳನ್ನು ಒತ್ತಾಯಿಸಿ ಹೋರಾಟ ಮಾಡುವುದಾಗಿ ಹೇಳಿರುವುದು ಸಾಮಾಜಿಕ ಜಾಲತಾಣಗಳ ಮೂಲಕ ನನ್ನ ಗಮನಕ್ಕೆ ಬಂದಿದೆ

ನಮ್ಮ ಕುಟುಂಬದೊಂದಿಗೆ ಅತಿ ಹೆಚ್ಚು ಒಡನಾಟ ಹೊಂದಿದ್ದ ಹಾಗೂ ನಮ್ಮ ಮನೆ ಮಗನಂತಿದ್ದ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡಿರುವ ಆಘಾತಕಾರಿ ಘಟನೆಯಿಂದ ನನಗಾಗಿರುವ ನೋವನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ಅಪ್ಪು ಅಗಲಿಕೆ ಚಿತ್ರರಂಗ, ಅಭಿಮಾನಿಗಳು ಹಾಗೂ ಕರ್ನಾಟಕ ರಾಜ್ಯದ ಜನತೆಗೆ ತುಂಬಲಾರದಂತ ನಷ್ಟ ಉಂಟಾಗಿದ್ದು, ಈ ಸಮಯದಲ್ಲಿ ತಾವುಗಳು ಹೋರಾಟ ಮಾಡುವ ನಿರ್ಧಾರ ಮಾಡಿರುವುದು ಎಲ್ಲರ ಹೃದಯದ ಮೇಲೆ ಆಗಿರುವ ಗಾಯದ ಮೇಲೆ ಬರೆ ಎಳೆದಂತೆ ಆಗುತ್ತದೆ. ಇಂತಹ ಸಮಯದಲ್ಲಿ ಈ ವಿಷಯ ಪ್ರಸ್ತಾಪಿಸುವುದು ಸಮಂಜಸವಲ್ಲ.

ನಿಮ್ಮ ಭಾವನೆಗಳನ್ನು ನಾನು ಗೌರವಿಸುತ್ತೇನೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪಿಸುವುದರಿಂದ ಅಂಬರೀಷ್ ಅವರ ಘನತೆ ಹಾಗೂ ಗೌರವಕ್ಕೆ ಧಕ್ಕೆಯಾಗುತ್ತದೆ. ಯಾವುದೇ ಪ್ರಶಸ್ತಿಯಾದರು ಕೇಳಿ ಪಡೆಯುವುದು ಅತಿಶಯೋಕ್ತಿಯಾಗಬಾರದು. ಎಲ್ಲ ಪ್ರಶಸ್ತಿಗಳನ್ನು ಮೀರಿದಂತಹ ಪ್ರೀತಿ ಮತ್ತು ಅಭಿಮಾನವನ್ನು ನೀವುಗಳು ನಮ್ಮ ಕುಟುಂಬಕ್ಕೆ ನೀಡಿದ್ದೀರಿ. ಅಂಬರೀಷ್ ಅವರು ತಮ್ಮ ಜೀವನದಲ್ಲಿ ಯಾವ ಪ್ರಶಸ್ತಿ, ಹುದ್ದೆ ಅಥವಾ ಸನ್ಮಾನವನ್ನೂ ಬಯಸಿದವರಲ್ಲ. ಹೀಗಾಗಿ ಅಂಬರೀಷ್​ ಅವರ ಅಭಿಮಾನಿಗಳಾಗಿ ತಾವುಗಳು ಸಹ ಅವರ ಹಾದಿಯಲ್ಲಿ ನಡೆಯಬೇಕು ಎನ್ನುವುದು ನನ್ನ ಆಶಯ. ಆದುದರಿಂದ, ಈ ಸಮಯದಲ್ಲಿ ಪ್ರಶಸ್ತಿ ಕೋರಿ ಹೋರಾಟ ಅಥವಾ ಪ್ರತಿಭಟನೆ ನಡೆಸುವುದು ಅಂಬರೀಷ್ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತರುವ ವಿಷಯವಾಗಿದೆ.

ಆದ್ದರಿಂದ, ತಮ್ಮೆಲ್ಲರ ಅಭಿಮಾನ ಮತ್ತು ಪ್ರೀತಿ-ವಾತ್ಸಲ್ಯಗಳನ್ನು ಗೌರವಿಸುತ್ತಾ ಹಾಗೂ ನಿಮ್ಮೆಲ್ಲರ ಆಸೆಯನ್ನು ಮುಂದಿನ ದಿನಗಳಲ್ಲಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಈಡೇರಿಸುತ್ತದೆ ಎಂದು ಮಾನ್ಯ ಮುಖ್ಯಮಂತ್ರಿಗಳ ಮೇಲೆ ಭರವಸೆಯನ್ನು ಇಡುತ್ತಾ, ತಾವು ತೆಗೆದುಕೊಂಡಿರುವ ಈ ಹೋರಾಟದ ನಿರ್ಧಾರವನ್ನು ಹಿಂಪಡೆದು ನವೆಂಬರ್ 24ನೇ ತಾರೀಖಿನಂದು ಅಂಬರೀಷ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆಯನ್ನು ಶಾಂತಿಯುತವಾಗಿ ನೆರವೇರಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರೋಣ ಎಂದು ತಮ್ಮಲ್ಲಿ ಕಳಕಳಿಯಿಂದ ಪ್ರಾರ್ಥಿಸುತ್ತೇನೆ’.
ವಂದನೆಗಳೊಂದಿಗೆ
ತಮ್ಮ ವಿಶ್ವಾಸಿ
ಸುಮಲತಾ ಅಂಬರೀಷ್

Tags: PuneethRajkumarsumalatha ambareesh
Previous Post

ಹೈಕೋರ್ಟ್ ನಲ್ಲಿ ಕೆಲಸ ಖಾಲಿ ಇದೆ; ಆಸಕ್ತರು ಅರ್ಜಿ ಹಾಕಿ

Next Post

ಗ್ರಾಹಕರಿಗೆ SBI ಬ್ಯಾಂಕ್‌ನಿಂದ ಎಚ್ಚರಿಕೆ!

Next Post
ಗ್ರಾಹಕರಿಗೆ SBI ಬ್ಯಾಂಕ್‌ನಿಂದ ಎಚ್ಚರಿಕೆ!

ಗ್ರಾಹಕರಿಗೆ SBI ಬ್ಯಾಂಕ್‌ನಿಂದ ಎಚ್ಚರಿಕೆ!

Leave a Reply Cancel reply

Your email address will not be published. Required fields are marked *

  • Home
  • Our Portfolio

© 2022 JNews - Premium WordPress news & magazine theme by Jegtheme.

No Result
View All Result
  •  Privacy Policy
  • All posts
  • Authors list
  • Coming soon
  • Contact
  • Home 1
  • Home 10
  • Home 11
  • Home 12
  • Home 2
  • Home 3
  • Home 4
  • Home 5
  • Home 6
  • Home 7
  • Home 8
  • Home 9
  • HomeF
  • Homepage – Big Slide
  • Homepage – Big Slide
  • Homepage – Blog
  • Homepage – Fashion
  • Homepage – Full Post Featured
  • Homepage – Infinite Scroll
  • Homepage – Loop
  • Homepage – Magazine
  • Homepage – Newsmag
  • Homepage – Newspaper
  • Homepage – Sport
  • Homepage – Tech
  • Homepage – Video
  • News
  • Page builder blocks – Content section
  • Page builder blocks – Full width section
  • Sample Page
  • Shortcodes
  • Single contest photo
  • terms of service
  • ಈ ಶಾಲೆ ವಿದ್ಯಾರ್ಥಿನಿಯರು ಒಂದೇ ಬಣ್ಣದ ಒಳ ಉಡುಪು ಧರಿಸ ಬೇಕಂತೆ…!
  • ಕರ್ನಾಟಕದಲ್ಲಿ ಒಂದೇ ದಿನದಲ್ಲಿ ಬರೋಬ್ಬರಿ 75 ಕೋಟಿರು ಮದ್ಯ ಮಾರಾಟ !?
  • ಕವರ್ ಪೇಜ್
  • ನಾನು ರಾಜೀನಾಮೆ ನೀಡಲು ಸಿಧ್ದ !? ರಮೇಶ್ ಜಾರಕಿಹೊಳಿ ಹೀಗೆ ಹೇಳಿದ್ದೇಕೆ ?
  • ಬೌಲರ್ ಗಳಿಗೂ ಹೆಲ್ಮೆಟ್…! ಯುವ ಆಟಗಾರನ ಬೌಲಿಂಗ್ ಶೈಲಿಯೇ ಇದಕ್ಕೆ ಕಾರಣ…!
  • ರುದ್ರಾಕ್ಷಿ ಮಾಲೆ ಧರಿಸಿದ ತುಮಕೂರಿನಲ್ಲಿ ಭಾಷಣ ಮಾಡಿದ್ರು ಮೋದಿ !?
  • ರೈತರ ಖಾತೆಗೆ 12 ಕೋಟಿ ಹಣ ಜಮಾ !? ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ.
  • ಸಿದ್ದರಾಮಯ್ಯ ಅವರು ನನ್ನ ಮಾರ್ಗದರ್ಶಕರು ! ಬಿಜೆಪಿ ಗೆ ಈ ಹೇಳಿಕೆ ಗೊಂದಲವುಂಟು ಮಾಡುತ್ತಾ?
  • ಹೊಸ ವರ್ಷದ ಆಚರಣೆಯನ್ನು ಇನ್ನು ಮುಂದೆ ಎಂಜಿ ರಸ್ತೆಯಲ್ಲಿ ಮಾಡುವಂತಿಲ್ಲ ! ಯಾಕೆ ಗೊತ್ತಾ ?

© 2022 JNews - Premium WordPress news & magazine theme by Jegtheme.

Go to mobile version