ನಟ ದರ್ಶನ್ ವಿರುದ್ಧ ದೂರು ಪ್ರಕರಣದ ಬಗ್ಗೆ ಹೆಚ್ಚುವರಿ ಕಮಿಷನರ್ ಸಂದೀಪ್ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೆಂಗೇರಿ ಠಾಣೆಯಲ್ಲಿ ದೂರು ಎನ್ ಸಿಆರ್ ದಾಖಲಾಗಿದೆ.
ದೂರಿನ ಸಂಬಂಧವನ್ನು ಪರಿಶೀಲಿಸಲು, ಕಾನೂನು ಪ್ರಕಾರ ತನಿಖೆ ನಡೆಸುವಂತೆ ಹೇಳಲಾಗಿದೆ. ಇದು ಒಂದೂವರೆ ವರ್ಷದ ಹಿಂದೆ ನಡೆದ ಘಟನೆ. ಈಗ ದೂರು ದಾಖಲಾಗಿದೆ. ತನಿಖೆ ನಂತರ ಕ್ರಮ ಆಗುತ್ತೆ. ಭಗವಾನ್ ಶ್ರೀಕೃಷ್ಣ ಪರಮಾತ್ಮ ನಿರ್ಮಾಪಕ ಭರತ್ ದೂರು ನೀಡಿದ್ದಾರೆಂದು ಹೇಳಿದ್ದಾರೆ.