ಜಮ್ಮು-ಕಾಶ್ಮೀರದಲ್ಲಿ 350 ಅಡಿ ಆಳದ ಕಂದಕಕ್ಕೆ ಬಿದ್ದ ಸೇನಾ ವಾಹನ: ಐವರು ಯೋಧರ ದುರ್ಮರಣ
ಜಮ್ಮುಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧಾರ್ನ ಬಲ್ನೋಯಿ ಪ್ರದೇಶದಲ್ಲಿ ಭೀಕರ ಅಪಘಾತ ಸಂಭವಿಸಿದೆ. 300 ಅಡಿ ಆಳದ ಕಣಿವೆಗೆ ಸೇನಾ ವಾಹನ ಬಿದ್ದ ಪರಿಣಾಮ 5 ಯೋಧರು ಹುತಾತ್ಮರಾಗಿದ್ದಾರೆ. ಕರ್ನಾಟಕ ಮೂಲದ ಮೂರು ಜನ ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಮಾಹಿತಿ ದೊರೆತಿದೆ.ಮೆಂಧಾರ್ನ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಈ ಘಟನೆ ನಡೆದಿತ್ತು.
ಈ ಅಪಘಾತದಲ್ಲಿ ಮರಾಠ ರೆಜಿಮೆಂಟ್ನ ಐವರು ಸೈನಿಕರು ಸಾವನ್ನಪ್ಪಿದ್ದರು. ಇವರಲ್ಲಿ ಮೂರು ಜನ ಕರ್ನಾಟಕ ಮೂಲದ ಸೈನಿಕರಿದ್ದು, ಬೆಳಗಾವಿಯ ಪಂತ ಬಾಳೆಕುಂದ್ರಿಯ ದಯಾನಂದ ತಿರಕನ್ನವರ್, ಉಡುಪಿಯ ಕುಂದಾಪುರದ, ಜಿಜಾಡಿಯ ಯೋದ ಅನೂಪ್ ಹಗೂ ಬಾಗಲಕೋಟೆ ಮೂಲದ ಒಬ್ಬ ಯೋದರು ಸಾವನ್ನಪ್ಪಿದ್ದಾರೆ.
ಇವರ ಜೊತೆಗೆ ಮಹರಾಷ್ಟ್ರದ ನಾಗ್ಪೂರ್ ಮತ್ತು ಸಾತಾ ಜಿಲ್ಲೆಯ ಯೋಧರು ಹುತಾತ್ಮರಾಗಿದ್ದಾರೆ. ವರದಿ ಪ್ರಕಾರ, ಸೇನಾ ವಾಹನಲ್ಲಿ 18 ಯೋಧರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇದರಲ್ಲಿ 5 ಮಂದಿ ಹುತಾತ್ಮರಾಗಿದ್ದು, ಉಳಿದವರಿಗೆ ಗಂಭೀರ ಗಾಯಗಳಾಗಿದ್ದಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.