ತನ್ನನ್ನು ಗುರುತಿಸದ ಪೇದೆಗೆ ಶಿಕ್ಷೆ ವಿಧಿಸಿದ ಡಿಸಿಪಿ..!

Date:

ತಿರುವನಂತಪುರಂ: ಅಧಿಕಾರ ತಮ್ಮ ಕೈಗೆ ಬರುತ್ತಿದ್ದಂತೆಯೇ ಜನ ಬದಲಾಗುತ್ತಾರೆ. ದರ್ಪದಿಂದ ಮೆರೆಯಲು ಆರಂಭಿಸುತ್ತಾರೆ ಎಂಬುದಕ್ಕೆ ಕೇರಳದ ಕೊಚ್ಚಿಯಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ.

ಹೌದು. ಐಶ್ವರ್ಯಾ ಡೊಂಗ್ರೆ ಎಂಬವರು ಜನವರಿ 1 ರಂದು ಕೇರಳದ ಕೊಚ್ಚಿಯಲ್ಲಿ ಡಿಸಿಪಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆ ಬಳಿ ತಾನು ನಿಷ್ಠೆಯಿಂದ ಕೆಲಸ ಮಾಡುವುದಾಗಿ ಹೇಳಿ ಭಾನುವಾರ ಸ್ಥಳಿಯ ಪೊಲೀಸ್ ಠಾಣೆಗೆ ತೆರಳಿದ್ದಾರೆ.

ಇನ್ ಸ್ಪೆಕ್ಷನ್ ಗೆ ಎಂದು ತೆರಳಿದಾಗ ಡಿಸಿಪಿ ಸಮವಸ್ತ್ರ ಧರಿಸಿರಲಿಲ್ಲ. ಸಾಮಾನ್ಯರಂತೆ ಡ್ರೆಸ್ ಮಾಡಿದ್ದ ಡಿಸಿಪಿ ಠಾಣೆಯಿಂದ ಸ್ವಲ್ಪ ದೂರದಲ್ಲಿಯೇ ಕಾರು ನಿಲ್ಲಿಸಿ, ಮಾಸ್ಕ್ ಧರಿಸಿ ಹೋಗಿದ್ದಾರೆ. ಡಿಸಿಪಿ ಠಾಣೆಯತ್ತ ತೆರಳುತ್ತಿದ್ದಂತೆಯೇ ಮಹಿಳಾ ಪೇದೆಯೊಬ್ಬರು ಅವರನ್ನು ತಡೆದಿದ್ದಾರೆ. ಅಲ್ಲದೆ ಏನಾಗಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.

ಇದರಿಂದ ಸಿಟ್ಟಿಗೆದ್ದ ಡಿಸಿಪಿ, ಉನ್ನತ ಹುದ್ದೆಯಲ್ಲಿರುವ ನನ್ನನ್ನು ಗುರುತಿಸದೆ ದಾರಿಯಲ್ಲೇ ತಡೆದರು ಎಂದು ಕೋಪಗೊಂಡು ಆಕೆಗೆ ಎರಡು ದಿನಗಳ ಕಾಲ ಟ್ರಾಫಿಕ್ ಕೆಲಸ ಮಾಡುವಂತೆ ಸೂಚಿಸಿದ್ದಾರೆ. ಪೊಲೀಸರೆಂದರೆ ಯಾವಾಗಲೂ ಅಲರ್ಟ್ ಆಗಿರಬೇಕು. ಉನ್ನತ ಅಧಿಕಾರಿಗಳ ಬಗ್ಗೆ ಮಾಹಿತಿ ತಿಳಿದಿರಬೇಕು. ಆದರೆ ಆ ಮಹಿಳಾ ಪೇದೆಗೆ ಮಾಹಿತಿ ಇಲ್ಲದಿರುವುದರಿಂದ ಶಿಕ್ಷೆ ನೀಡಿರುವುದಾಗಿ ಡಿಸಿಪಿ ಹೇಳಿದ್ದಾರೆ.

ಒಟ್ಟಿನಲ್ಲಿ ಮಹಾಮಾರಿ ಕೊರೊನಾ ಬಂದ ಬಳಿಕ ಅವಾಂತರಗಳ ಮೇಲೆ ಅವಾಂತರಗಳು ಆಗುತ್ತಿವೆ. ಈ ಮಾಸ್ಕ್ ಧರಿಸದರೆ ನಮ್ಮವರನ್ನೇ ಗುರುತಿಸುವುದು ಕಷ್ಟ. ಹೀಗಿರುವಾಗ ಆಗ ತಾನೇ ಅಧಿಕಾರ ಸ್ವೀಕರಿಸಿರುವ ಡಿಸಿಪಿಯನ್ನು ಪೇದೆ ಗುರುತಿಸಲು ಕಷ್ಟವಾಗಿತ್ತು. ಅಧಿಕಾರ ವಹಿಸಿಕೊಂಡು 15 ದಿನಗಳೊಳಗೆ ಇಂತಹ ಶಿಕ್ಷೆ ನೀಡಿರುವುದು ತಪ್ಪು ಎಂದು ಹಿರಿಯ ಅಧಿಕಾರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಖಾಲಿ ಹೊಟ್ಟೆಯಲ್ಲಿ ಲವಂಗ ತಿಂದರೆ ಏನು ಆಗುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ ಪ್ರಾಚೀನ...

ನಿಷ್ಠೆಯಿಂದ ಕೆಲಸ ಮಾಡಿದರೆ ಅಧಿಕಾರ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ: ಲಕ್ಷ್ಮೀ ಹೆಬ್ಬಾಳಕರ್

ನಿಷ್ಠೆಯಿಂದ ಕೆಲಸ ಮಾಡಿದರೆ ಅಧಿಕಾರ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ: ಲಕ್ಷ್ಮೀ ಹೆಬ್ಬಾಳಕರ್ ಬೆಂಗಳೂರು:...

ಅಂಬೇಡ್ಕರ್ ಫೋಟೋಗೆ ಅವಮಾನ ಆರೋಪ: ಬಾನು ಮುಷ್ತಾಕ್ ವಿರುದ್ಧ ಕ್ರಮಕ್ಕೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

ಅಂಬೇಡ್ಕರ್ ಫೋಟೋಗೆ ಅವಮಾನ ಆರೋಪ: ಬಾನು ಮುಷ್ತಾಕ್ ವಿರುದ್ಧ ಕ್ರಮಕ್ಕೆ ಛಲವಾದಿ...

ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿ: ಇಂಧನ ಟ್ಯಾಂಕ್‌ಗೆ ಬೆಂಕಿ, ವಿಮಾನ ಹಾರಾಟ ತಾತ್ಕಾಲಿಕ ಸ್ಥಗಿತ

ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿ: ಇಂಧನ ಟ್ಯಾಂಕ್‌ಗೆ ಬೆಂಕಿ,...