ಮಹೇಂದ್ರ ಸಿಂಗ್ ಧೋನಿ ಬೆನ್ನಲ್ಲೆ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಿಸಲು ಕಾರಣವೇನುಂಬುದನ್ನು ಟೀಮ್ ಇಂಡಿಯಾ ಮಾಜಿ ಆಲ್ರೌಂಡರ್ ಸುರೇಶ್ ರೈನಾ ಬಹಿರಂಗಪಡಿಸಿದ್ದಾರೆ.
ಭಾರತೀಯ ಕ್ರಿಕೆಟ್ಗೆ ಮಹತ್ವದ ಕೊಡುಗೆ ನೀಡಿರುವ ಎಂಎಸ್ ಧೋನಿ, ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದು ಎಲ್ಲರಿಗೂ ಆಘಾತ ತಂದಿತ್ತು. ಟೀಮ್ ಇಂಡಿಯಾ ಮಾಜಿ ನಾಯಕ ಹಠಾತ್ ನಿವೃತ್ತಿ ಘೋಷಿಸುತ್ತಾರೆಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಧೋನಿ ವಿದಾಯ ಹೇಳಿದ ಕೆಲವೇ ನಿಮಿಷಗಳಲ್ಲಿ ರೈನಾ ಕೂಡ ತಮ್ಮ ನಾಯಕನ ಹಾದಿಯನ್ನೇ ತುಳಿದಿದ್ದರು.
2011ರ ಐಸಿಸಿ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಸುರೇಶ್ ರೈನಾ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು. ಒಟ್ಟಾರೆ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ ಎಡಗೈ ಆಟಗಾರ 300 ಸೀಮಿತ ಓವರ್ಗಳ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಶಾರ್ಟ್ ಪಿಚ್ ಎಸೆತಗಳಲ್ಲಿ ದೌರ್ಬಲ್ಯ ಹೊಂದಿದ್ದ ಕಾರಣ ರೈನಾ ಹೆಚ್ಚು ಪಂದ್ಯಗಳಲ್ಲಿ ಮುಂದುವರಿಯಲಿಲ್ಲ.
ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮುಂದುವರಿಯುವ ಸುರೇಶ್ ರೈನಾ, 2021ರ ಆವೃತ್ತಿಯಲ್ಲಿ ಯಾವ ಫ್ರಾಂಚೈಸಿ ಪರ ಆಡಲಿದ್ದಾರೆಂಬ ಬಗ್ಗೆ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಇದಕ್ಕೂ ಮುನ್ನ 2020ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಎಂಎಸ್ ಧೋನಿ ಜತೆ ರೈನಾ ಆಡಬೇಕಾಗಿತ್ತು. ಆದರೆ, ಟೂರ್ನಿ ಆರಂಭಕ್ಕೂ ಮೊದಲೇ ವೈಯಕ್ತಿಕ ಕಾರಣಗಳಿಂದ ರೈನಾ ಯುಎಇಯಿಂದ ತವರಿಗೆ ಮರಳಿದ್ದರು.
ಆಗಸ್ಟ್ 15 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಲು ಸೂಕ್ತ ಸಮಯವಾಗಿತ್ತು. ಆದರೆ ಎಂ ಎಸ್ ಧೋನಿ ಅವರೊಂದಿಗಿನ ಸ್ನೇಹ ಇದಕ್ಕಿಂತಲೂ ವಿಭಿನ್ನವಾದದ್ದು. ನಾವಿಬ್ಬರೂ ಭಾರತ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳಲ್ಲಿ ಹಲವು ಪ್ರಶಸ್ತಿಗಳನ್ನು ಒಟ್ಟಾಗಿ ಗೆದ್ದಿದ್ದೇವೆ. ಮುಂದಿನ ದಿನಗಳಲ್ಲಿ ಯೋಜನೆಗೆ ತಕ್ಕಂತೆ ಎಲ್ಲವೂ ನಡೆಯಲಿದೆ ಎಂದು ಸುರೇಶ್ ರೈನಾ ಭಾವಿಸಿದ್ದಾರೆ.
“ಇಂಟರ್ ನ್ಯಾಷನಲ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಲು ಸೂಕ್ತ ಸಮಯ ಎಂಬ ಭಾವನೆ ನನ್ನಲ್ಲಿ ಉಂಟಾಗಿತ್ತು. ದೇಶಕ್ಕೆ ಹಾಗೂ ಐಪಿಎಲ್ನಲ್ಲಿ ಇಬ್ಬರೂ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದೇವೆ. ಖಚಿತವಾಗಿಯೂ ಮುಂದೆ ನಾವು ಭೇಟಿಯಾಗಲು ಯೋಜನೆ ರೂಪಿಸುತ್ತೇವೆ. ಸಂಗತಿಗಳು ಉತ್ತಮವಾಗಿರುತ್ತವೆ ಮತ್ತು ಯೋಜನೆಯ ಪ್ರಕಾರ ಎಲ್ಲವೂ ನಡೆಯುತ್ತದೆ ಎಂದು ನಾನು ಭಾವಿಸುತ್ತೇನೆ,” ಎಂದು ಸುರೇಶ್ ರೈನಾ ತಿಳಿಸಿದ್ದಾರೆ.
ಬಾಲಿವುಡ್ನ ಜನಪ್ರಿಯ ನಟಿ ಕಂಗನಾ ರಣಾವತ್ ಅವರು ಈಗ ಊರ್ಮಿಳಾ ಮಾತೋಂಡ್ಕರ್ ವಿರುದ್ಧ ಕಿಡಿಕಾಡಿದ್ದಾರೆ. ವ್ಯಂಗ್ಯದ ಧಾಟಿಯಲ್ಲಿ ಟ್ವೀಟ್ ಮಾಡಿರುವ ಕಂಗನಾ, ರಾಜಕೀಯದ ವಿಚಾರಗಳನ್ನು ಎಳೆದುತಂದಿದ್ದಾರೆ. ಊರ್ಮಿಳಾ ಖರೀದಿಸಿರುವ 3 ಕೋಟಿ ರೂ. ಆಸ್ತಿಯೇ ಇಷ್ಟಕ್ಕೆಲ್ಲ ಕಾರಣ!
ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದು ಊರ್ಮಿಳಾ ಗಮನಕ್ಕೂ ಬಂದಿದೆ. ಅದಕ್ಕೆ ಅವರು ತಿರುಗೇಟು ನೀಡಿದ್ದಾರೆ. ‘ನಮಸ್ಕಾರ ಕಂಗನಾ ಅವರೇ. ನೀವು ನನ್ನ ಬಗ್ಗೆ ಹೇಳಿದ್ದನ್ನು ನಾನು ಮಾತ್ರವಲ್ಲದೆ ಇಡೀ ದೇಶವೇ ಕೇಳಿಸಿಕೊಂಡಿದೆ. ನಾನು ಇಡೀ ದೇಶದ ಮುಂದೆ ಈ ಮಾತು ಹೇಳುತ್ತಿದ್ದೇನೆ. ಜಾಗ ಮತ್ತು ಸಮಯವನ್ನು ನೀವು ನಿರ್ಧರಿಸಿ. ಅಲ್ಲಿಗೆ ನಾನೇ ದಾಖಲೆಗಳನ್ನು ಹಿಡಿದುಕೊಂಡು ಬರುತ್ತೇನೆ’ ಎಂದಿದ್ದಾರೆ.
‘ಹೆಚ್ಚೇನೂ ಅಲ್ಲ, ನನ್ನ 20-30 ವರ್ಷಗಳ ಕರಿಯರ್ನಲ್ಲಿ ಕಷ್ಟಪಟ್ಟು ಸಂಪಾದಿಸಿದ ಹಣದಲ್ಲಿ 2011ರಲ್ಲಿ ಅಂಧೇರಿಯಲ್ಲಿ ಫ್ಲಾಟ್ ಖರೀದಿಸಿದೆ. ಅದಕ್ಕೆ ದಾಖಲೆ ಇದೆ. ಅದನ್ನೇ ನಾನು ಮಾರ್ಚ್ ತಿಂಗಳಲ್ಲಿ ಮಾರಿದ್ದೇನೆ. ಅದರಿಂದ ಬಂದ ಹಣದಿಂದಲೇ ನಾನು ಈಗ ಕಷ್ಟಪಟ್ಟು ಆಫೀಸ್ ಖರೀದಿಸಿದ್ದೇನೆ. ಅದಕ್ಕೂ ನನ್ನ ಬಳಿ ದಾಖಲೆ ಇದೆ. ಇದೆಲ್ಲವೂ ಆಗಿದ್ದು ನಾನು ರಾಜಕೀಯಕ್ಕೆ ಬರುವುದಕ್ಕೂ ಮುಂಚೆ. ಅದನ್ನೆಲ್ಲ ನಾನು ನಿಮಗೆ ತೋರಿಸುತ್ತೇನೆ. ಅದಕ್ಕೆ ಪ್ರತಿಯಾಗಿ ನೀವು ಎನ್ಸಿಬಿಗೆ ನೀಡುತ್ತೇನೆ ಎಂದು ಹೇಳಿರುವ ಕೆಲವರ ಹೆಸರನ್ನು ನಮಗೆ ತಿಳಿಸಿ’ ಎಂದು ಊರ್ಮಿಳಾ ಸವಾಲು ಹಾಕಿದ್ದಾರೆ.