ಸಾಲ ಪಡೆದವನ ಕಿವಿ ಕಚ್ಚಿ ಕತ್ತರಿಸಿದ ವ್ಯಕ್ತಿ: ಹಣಕ್ಕಾಗಿ ಹಿಂಗೂ ಮಾಡ್ತಾರಾ?
ಪಶ್ಚಿಮ ಬಂಗಾಳ:- ಇಲ್ಲಿನ ಉತ್ತರ 24 ಪರಗಣದಲ್ಲಿ ಹಣದ ವಿಚಾರದಲ್ಲಿ ನಡೆದ ಜಗಳ ತಾರಕಕ್ಕೇರಿ ವ್ಯಕ್ತಿಯೊಬ್ಬ ಸಾಲ ಪಡೆದವನ ಕಿವಿ ಕಚ್ಚಿ ಕತ್ತರಿಸಿರುವ ಘಟನೆ ಜರುಗಿದೆ.
ಗುರುವಾರ ಸಂಜೆ 5 ಗಂಟೆ ಸುಮಾರಿಗೆ ಹಿಂಗಲ್ಗಂಜ್ ಪಟ್ಟಣದ ಸ್ವರೂಪ್ಕಥಿ ಬಜಾರ್ನಲ್ಲಿ ಈ ಘಟನೆ ನಡೆದಿದೆ. ಸಾಲದ ವಿಚಾರದಲ್ಲಿ ಆರಂಭವಾದ ಕಲಹ ಈ ರೀತಿ ಅಂತ್ಯ ಕಂಡಿದೆ. ಮಾರುಕಟ್ಟೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿರುವ ಗೋವಿಂದ ಮಂಡಲ್, ಹಿಮಾದ್ರಿ ಬರ್ಮನ್ ಅವರಿಗೆ ಹಣ ಬಾಕಿ ಇದೆ ಎಂದು ಹೇಳಿದ್ದಕ್ಕಾಗಿ ವಾಗ್ವಾದ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬರ್ಮನ್ ಸ್ವಲ್ಪ ಸಮಯದ ಹಿಂದೆ ಹಣವನ್ನು ಸಾಲವಾಗಿ ಪಡೆದಿದ್ದ ಎನ್ನಲಾಗಿದೆ. ಈ ಜಗಳವು ಕೇವಲ ಕೂಗಾಟದಿಂದ ಹಲ್ಲೆಯವರೆಗೆ ಹೋಗಿತ್ತು.
ವಾಗ್ವಾದ ಮುಂದುವರೆದಂತೆ, ಮಂಡಲ್ ಇದ್ದಕ್ಕಿದ್ದಂತೆ ಬರ್ಮನ್ ಅವರನ್ನು ಹಿಡಿದು ಅವರ ಹೊರ ಕಿವಿಯ ಒಂದು ಭಾಗವನ್ನು ಕಚ್ಚಿಹಾಕಿದ್ದಾನೆ. ತೀವ್ರ ರಕ್ತಸ್ರಾವದಿಂದ ಬರ್ಮನ್ ಸ್ಥಳದಲ್ಲೇ ಕುಸಿದು ಬಿದ್ದಿದ್ದರು
ಸ್ಥಳೀಯ ನಿವಾಸಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಓಡಿ ಬಂದರು. ಮಂಡಲ್ ಅವರನ್ನು ಬಲವಂತವಾಗಿ ತಳ್ಳಿ, ಪೊಲೀಸರು ಬರುವವರೆಗೂ ಅವರನ್ನು ಹಿಡಿದುಕೊಂಡಿದ್ದರು. ನಾವು ಅಧಿಕಾರಿಗಳಿಗೆ ಮಾಹಿತಿ ನೀಡಿ ಮಂಡಲ್ ಅವರನ್ನು ಪೊಲೀಸರಿಗೆ ಹಸ್ತಾಂತರಿಸಿದ್ದೇವೆ. ಕಾನೂನು ತನ್ನ ದಾರಿಯಲ್ಲಿ ಸಾಗಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಸ್ಥಳೀಯ ನಿವಾಸಿ ಓರ್ವರು ಹೇಳಿದ್ದಾರೆ.