ಹರೆಯದ ಸಮಯ ಹೀಗೇಕೆ?

Date:

ಹದಿಹರೆಯದ ಸಮಯದಲ್ಲಿ ಹುಡುಗ – ಹುಡುಗಿಯರು ಭಾವೋದ್ವೇಗಕ್ಕೊಳಗಾಗುವುದು ಸಾಧಾರಣವಾಗಿ ಕಂಡುಬರುತ್ತದೆ. ಅಧ್ಯಯನವೊಂದರ ಪ್ರಕಾರ ಹದಿಹರೆಯದ ಸಂದರ್ಭದಲ್ಲಿ ಸ್ವಯಂ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮಾನವರು ಹಾಗೂ ಇತರ ಸಸ್ತನಿಗಳ ಮೆದಳಿನಲ್ಲಿ ಒಂದು ತೆರನಾದ ಬದಲಾವಣೆಯನ್ನು ಗಮನಿಸಬಹುದು ಎನ್ನಲಾಗಿದೆ.

ಬಹುತೇಕ ಮಂದಿ ತಿಳಿದಿರುವಂತೆ ಹದಿಹರೆಯವು ಉದ್ವೇಗ ಮತ್ತು ಸಂವೇದನೆ ಬೇಡಿಕೆಯ ಸಮಯವಾಗಿದೆ. ಇದು ಪ್ರಶ್ನಾರ್ಹವೆನಿಸುವ ನಿರ್ಧಾರಗಳಿಗೆ ಕಾರಣವಾಗುತ್ತದೆ ಎಂದು ಅಮೆರಿಕಾದ ಪಿಟ್ಸ್ ಬರ್ಗ್ ವಿಶ್ವವಿದ್ಯಾಲಯದ ಬೀಟ್ರಿಜ್ ಲೂನಾ ಹೇಳಿದ್ದಾರೆ. ಈ ನಡವಳಿಕೆಯ ಪ್ರವೃತ್ತಿಯು ಹೊಂದಾಣಿಕೆಯ ಪ್ರಕ್ರಿಯೆಯನ್ನು ಆಧರಿಸಿದೆ, ಇದು ಹೊಸ ಅನುಭವಗಳನ್ನು ಪಡೆಯುವುದರ ಆಧಾರದ ಮೇಲೆ ಮೆದುಳನ್ನು ರೂಪಿಸಲು ನಿರ್ಣಾಯಕವಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಂಗಗಳು ಮಾನವನಿಗೆ ಹತ್ತಿರವಾಗುವ ಅತ್ಯಂತ ಶಕ್ತಿಶಾಲಿ ಪ್ರಾಣಿ ಮಾದರಿಯಾಗಿದೆ ಎಂದು ಅಮೆರಿಕಾದ ವೇಕ್ ಫಾರೆಸ್ಟ್ ಸ್ಕೂಲ್ ಆಫ್ ಮೆಡಿಸನ್ ನ ಕ್ರಿಸ್ಟೋಸ್ ಕಾನ್ಸಿಂಟಿನಿಡಿಸ್ ಹೇಳಿದ್ದಾರೆ. ಅವುಗಳು ಕೂಡಾ ಹದಿಹರೆಯದ ಮತ್ತು ಪ್ರೌಢ ವ್ಯವಸ್ಥೆಯ ನಡುವಿನ ಪಕ್ವತೆಯ ಮಾದರಿಗಳೊಂದಿಗೆ ಇದೇ ಪಥದಲ್ಲಿ ಸಾಗುತ್ತವೆ ಎಂದು ಅವರು ತಿಳಿಸಿದ್ದಾರೆ.

ಈ ಅವಧಿಯಲ್ಲಿ ಅಪಾಯಗಳನ್ನು ತೆಗೆದುಕೊಳ್ಳುವುದು ಮತ್ತು ರೋಮಾಂಚಕ ಸಾಹಸಗಳನ್ನು ಮಾಡುವುದು ಕೆಟ್ಟ ವಿಷಯವಲ್ಲ ಎಂದು ಟ್ರೆಂಡ್ಸ್ ಇನ್ ನ್ಯೂರೋ ಸೈನ್ಸಸ್ ಜರ್ನಲ್ ನಲ್ಲಿ ವರದಿಯೊಂದನ್ನು ಪ್ರಕಟಿಸಲಾಗಿದೆ. ಹದಿಹರೆಯದಲ್ಲಿ ಪರಿಪೂರ್ಣ ಪ್ರತಿಬಂಧಕ ನಿಯಂತ್ರಣ ವ್ಯವಸ್ಥೆಯನ್ನು ಹೊಂದದಿರುವುದು ಇದಕ್ಕೆ ಕಾರಣವಾಗುತ್ತದೆ ಎಂದು ಲೂನ್ಸಾ ಹೇಳಿದ್ದಾರೆ.

ಈ ಸಮಯದಲ್ಲಿ ಮಾನವನ ನರವ್ಯೂಹ ಬೆಳವಣಿಗೆಯು ರಚನಾತ್ಮಕ ಅಂಗ ರಚನಾಶಾಸ್ತ್ರದಲ್ಲಿನ ಬದಲಾವಣೆಗಳಿಂದ ನಿರೂಪಿಸಲ್ಪಟ್ಟಿರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಹದಿಹರೆಯದ ಹೊತ್ತಿಗೆ ಮೆದುಳಿನ ಎಲ್ಲಾ ಅಡಿಪಾಯದ ಅಂಶಗಳಿದ್ದು, ಪರಿಷ್ಕರಣೆಗೊಳಗಾಗುತ್ತವೆ ಮತ್ತು ಅವರ ನಿರ್ದಿಷ್ಟ ಪರಿಸರದ ಬೇಡಿಕೆಗಳನ್ನು ಎದುರಿಸಲು ಕಾರ್ಯನಿರ್ವಹಿಸಲು ಅತ್ಯಂತ ಸೂಕ್ತವಾದ ಮಾರ್ಗವನ್ನು ಶಕ್ತಗೊಳಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ನರ ಚಟುವಟಿಕೆ ಮಾದರಿಗಳ ಅಭಿವೃದ್ಧಿಯು ಈ ಹಂತದ ಅಭಿವೃದ್ಧಿಯ ಪ್ರಮುಖ ಅಂಶವೆಂದು ತೋರುತ್ತದೆ ಮತ್ತು ಸ್ವಯಂ ನಿಯಂತ್ರಣ ಕಾರ್ಯಗಳಲ್ಲಿ ಯಶಸ್ವಿ ಕಾರ್ಯಕ್ಷಮತೆಗೆ ಇದು ಅವಶ್ಯಕವಾಗಿದೆ. ಸ್ವಯಂ ನಿಯಂತ್ರಣ, ನಡವಳಿಕೆಯನ್ನು ತಡೆಯುವ ಸಾಮರ್ಥ್ಯವಲ್ಲ ಎಂಬುದು ಈ ಎಲ್ಲಾ ಅಂಶಗಳಿಂದ ತಿಳಿದುಬರುತ್ತದೆ..

ಅವಳ ಪ್ರೀತಿಗಾಗಿ ಐದು ವರ್ಷ ಕಾದ..!
ಕೈಯಲ್ಲಿದೆ ಪ್ರೀತಿಯ ಗುಟ್ಟು…!‌ಅದೇನು ಅನ್ನೋದನ್ನು ತಿಳಿಯೋಕೆ ಇದನ್ನು ಓದಲೇ ಬೇಕು…!ಪ್ರೀತಿಸಿದ ಹುಡಗ ಪ್ರೇಮಿಯಲ್ಲ..? ಇಂಟ್ರೆಸ್ಟಿಂಗ್ ರಿಯಲ್ ಲವ್ ಸ್ಟೋರಿ..!

Share post:

Subscribe

spot_imgspot_img

Popular

More like this
Related

ನಿಮ್ಮದು ಲೂಟಿ ಮಾಡುವ ಚಪಲ, ನನ್ನದು ಜನರ ಜೊತೆ ನಿಲ್ಲುವ ಚಪಲ: ಹೆಚ್.ಡಿ.ಕುಮಾರಸ್ವಾಮಿ ಟಾಂಗ್

ನಿಮ್ಮದು ಲೂಟಿ ಮಾಡುವ ಚಪಲ, ನನ್ನದು ಜನರ ಜೊತೆ ನಿಲ್ಲುವ ಚಪಲ:...

ಒಕ್ಕೂಟ ವ್ಯವಸ್ಥೆ ಹಾಳು ಮಾಡುವ ಕುತಂತ್ರ ನಡೆಸಿದ ಸಿಎಂ: ಬಿ.ವೈ.ವಿಜಯೇಂದ್ರ ವಾಗ್ದಾಳಿ

ಒಕ್ಕೂಟ ವ್ಯವಸ್ಥೆ ಹಾಳು ಮಾಡುವ ಕುತಂತ್ರ ನಡೆಸಿದ ಸಿಎಂ: ಬಿ.ವೈ.ವಿಜಯೇಂದ್ರ ವಾಗ್ದಾಳಿ ಬೆಳಗಾವಿ:...

ಮತ್ತೊಮ್ಮೆ ಹದಗೆಟ್ಟ ಬೆಂಗಳೂರಿನ ಗಾಳಿ: ಏರ್ ಕ್ವಾಲಿಟಿ ಇನ್ನೂ ಅನಾರೋಗ್ಯಕರ ಹಂತದಲ್ಲೇ

ಮತ್ತೊಮ್ಮೆ ಹದಗೆಟ್ಟ ಬೆಂಗಳೂರಿನ ಗಾಳಿ: ಏರ್ ಕ್ವಾಲಿಟಿ ಇನ್ನೂ ಅನಾರೋಗ್ಯಕರ ಹಂತದಲ್ಲೇ ಬೆಂಗಳೂರು:...

ಪತಿ-ಪತ್ನಿ ಕಲಹ: ನಾಲ್ಕು ವರ್ಷದ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ

ಪತಿ-ಪತ್ನಿ ಕಲಹ: ನಾಲ್ಕು ವರ್ಷದ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ ಬೆಂಗಳೂರು:...