ಬೆಂಗಳೂರು ನಗರಾದಾದ್ಯಂತ ಪೊಲೀಸ್ ಬಿಗಿಬಂದೋಬಸ್ತ್
ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ನಡೆದ ಹಲ್ಲೆ ಖಂಡಿಸಿ ಬೆಂಗಳೂರು ನಗರದಾದ್ಯಂತ ಪ್ರತಿಭಟನೆಯ ಕಿಚ್ಚು ತಾರಕಕ್ಕೇರಿದ್ದು, ಹಲವು ಕನ್ನಡ ಪರ ಸಂಘಟನೆಗಳು ಹಲವಾರು ಅಂಗಡಿನ ಮುಂಗಟ್ಟುಗಳು ಹಾಗೂ ವಾಹನಗಳಿಗೆ ಬೆಕ್ಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇನ್ನು ಪ್ರತಿಭಟನಾಕಾರರನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬೆಂಗಳೂರಿನ ಕೆಲವು ಭಾಗಗಳಲ್ಲಿ ನಿಷೇಧಾಜ್ಞೆ (ಸೆ.144)ಜಾರಿ ಮಾಡಲಾಗಿದ್ದು, ಅಲ್ಲಿನ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಪೊಲೀಸರು ಆದೇಶ ನೀಡಿದ್ದಾರೆ. ಸುಮಾರು 11 ಗಂಟೆಯಿಂದ ಆರಂಭವಾದ ಪ್ರತಿಭಟನೆಯ ಬಿಸಿ ಇನ್ನೂ ಕೂಡ ಮುಂದುವರೆದ ಹಿನ್ನಲೆಯಲ್ಲಿ ಪ್ರತಿಭಟನೆ ಹಿಂಸಾ ರೂಪಕ್ಕೆ ತಿರುಗಿದೆ. ಇನ್ನೊಂದೆಡೆ ತಮಿಳುನಾಡಿನ ವಾಹನಗಳನ್ನು ಕಂಡ ಕಂಡಲ್ಲೇ ನಿಲ್ಲಿಸಿ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತ ಪಡಿಸುತ್ತಿರುವ ಹಿನ್ನಲೆಯಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡಲಾಗ್ತಾ ಇದೆ.
ಇನ್ನು ಬೆಂಗಳೂರಿನ ಸ್ಯಾಟಲೈಟ್, ಇಂದಿರಾನಗರ, ಸೇರಿದಂತೆ ಹಲವು ಭಾಗಗಳಲ್ಲಿ ಪ್ರತಿಭಟನಾಕಾರನ್ನು ನಿಯಂತ್ರಿಸಲು ನಿಷೇಧಾಜ್ಞೆ ಹೊರಡಿಸಿ ಆಧೇಶ ನೀಡಿದೆ.
ಮೆಟ್ರೋ ಸ್ಥಗಿತ..!
ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಬಟನೆಯ ಕಾವು ಮಿತಿ ಮೀರುತ್ತಿರುವ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಾಯಂಡಳ್ಳಿಯಿಂದ ತೆರಳಲಿರುವ ಮೆಟ್ರೋವನ್ನು ನಿಲ್ಲಿಸಲಾಗಿದ್ದು, ಈಗಾಗಲೇ ಮಟ್ರೋ ನಿಲ್ದಾಣಗಳಿಗೆ ಬೀಗ ಜಡಿಯಲಾಗಿದೆ.
POPULAR STORIES :
ಮತ್ತೆ ಕಿಚ್ಚು ಹಚ್ಚಿದೆ ಕಾವೇರಿ ತೀರ್ಪು.!
ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆಗೆ ತೀವ್ರಗೊಂಡ ಆಕ್ರೋಶ..!
ತಮಿಳರಿಂದ #Wehatekarnataka ಟ್ವಿಟರ್ ಟ್ರೆಂಡ್…!
ಸೀದಾ ಮನೆಗೆ ಬಂದ ನಾನು ನಡೆದ ಘಟನೆಯನ್ನೆಲ್ಲಾ ನನ್ನ ಮಗನ ಬಳಿ ಹೇಳಿಕೊಂಡೆ..
ಬರ್ತ್ ಡೇ ದಿನ ನನ್ನ ಜೊತೆ ಸ್ವಿಮ್ ಮಾಡಲು ಬರ್ತೀರಾ: ಕ್ರಿಸ್ ಗೇಲ್..!
ಈ ಪ್ರಾಧ್ಯಾಪಕರ ವಯಸ್ಸು 55.. ಆದ್ರೆ ಅವರು ಪಡೆದಿರುವ ಪದವಿಗಳ ಸಂಖ್ಯೆ ಎಷ್ಟು ಗೊತ್ತಾ…?
ಗಣಪತಿ ವಿಸರ್ಜನಾ ಸಮಯದ ದುರಂತದಲ್ಲಿ 12 ಮಂದಿ ಕಣ್ಣೆದುರೇ ಮುಳುಗಿದ ಹೃದಯವಿದ್ರಾವಕ ವಿಡಿಯೋ…