ಮೂರು ಕ್ಷೇತ್ರಗಳಲ್ಲಿ ಭಾರೀ ಅಕ್ರಮ ನಡೆದಿರುವುದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ವರದಿಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತ ಅನಿಲ್ಕುಮಾರ್ 25 ಮಂದಿ ಇಂಜಿನಿಯರ್ಗಳನ್ನು ಸೇವೆಯಿಂದ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪಿಡಬ್ಲ್ಯೂಡಿ ಮಾತೃ ಇಲಾಖೆಯಿಂದ ಪಾಲಿಕೆಗೆ ಎರವಲು ಸೇವೆ ಮೇಲೆ ಬಂದು ಕಾರ್ಯನಿರ್ವಹಿಸುತ್ತಿದ್ದ ಶಿರಾಮೇಗೌಡ, ಎನ್.ಆರ್. ಮಹೇಶ್, ಧರ್ಮರಾಜ್ ಜಿ. ನಾಯಕ್, ಎಚ್.ಪಿ. ನಾಗರಾಜು, ಎಂ.ಜೆ.ಸಿದ್ದಿಕ್, ಪಿ.ರಾಮರಾವ್, ರವೀಂದ್ರನಾಥ್, ಎಂ.ಕೃಷ್ಣ, ಪಿ.ರವಿರಾಜ್, ಜಿ.ಎಲ್. ಕೇಶವಮೂರ್ತಿ, ಎಲ್.ರಘು, ಹರೀಶ್ ಎಂ.ಕೆ., ಚನ್ನವೀರಯ್ಯ, ಎಂ.ಎನ್. ಕಿಶೋರ್, ಎಚ್.ಕೆ. ಶ್ರೀನಿವಾಸ್, ಇನ್ನು ಇತರರನ್ನು ಸೇವೆ ಇಂದ ಕೆಳಗಿಳಿಸಿದ್ದಾರೆ.