ಲವ್ ಮಾಡ್ತೀನಿ ಬಾ ಅಂತ ಕರೆದು ವ್ಯಕ್ತಿಗೆ ಚಾಕು ಇರಿತ: ಯುವತಿ ಸೇರಿ ಇಬ್ಬರು ಅರೆಸ್ಟ್!

Date:

ಲವ್ ಮಾಡ್ತೀನಿ ಬಾ ಅಂತ ಕರೆದು ವ್ಯಕ್ತಿಗೆ ಚಾಕು ಇರಿತ: ಯುವತಿ ಸೇರಿ ಇಬ್ಬರು ಅರೆಸ್ಟ್!

ಬೆಂಗಳೂರು:- ಸದ್ದಗುಂಟೆ ಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಯುವತಿಯೋರ್ವಳು ತಾನು ಪ್ರೀತಿ‌ ಮಾಡುವುದಾಗಿ ಸುಳ್ಳು ಹೇಳಿ ವ್ಯಕ್ತಿಯನ್ನು ತಾನಿರುವ ಜಾಗಕ್ಕೆ ಕರೆಸಿ ತನ್ನ ಸ್ನೇಹಿತನ ಕೈಯಿಂದ ಚಾಕು ಇರಿಸಿದ ಘಟನೆ ಜರುಗಿದೆ.

ತನ್ನ ಪ್ರೀತಿಗೆ ಯುವತಿ ಒಪ್ಪಿಕೊಂಡಿದ್ದಾಳೇ ಎಂದು ಖುಷಿಯಲ್ಲಿ ಭೇಟಿಯಾಗಲು ಬಂದ ವ್ಯಕ್ತಿ ಮೇಲೆ ಕೊಲೆ ಯತ್ನ ನಡೆದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಬಟ್ಟೆ ಅಂಗಡಿ ವ್ಯಾಪಾರಿ 59 ವರ್ಷದ ಹಿತೇಂದ್ರ ಕುಮಾರ್ ಎಂಬಾತನ ಮೇಲೆ ಕೊಲೆ ಯತ್ನ ನಡೆದಿದೆ. ಜಯನಗರದಲ್ಲಿ ಬಟ್ಟೆ ಅಂಗಡಿ ನಡೆಸ್ತಿರೋ ಗಾಯಾಳು ಹಿತೇಂದ್ರ ಕುಮಾರ್ ಅವರ ಬಟ್ಟೆ ಅಂಗಡಿಗೆ ಜೂನ್ ತಿಂಗಳಲ್ಲಿ ಕೆಲಸಕ್ಕೆಂದು ಓರ್ವ ಯುವತಿ ಸೇರಿಕೊಂಡಿದ್ದಳು. ಎರಡು ಮೂರು ತಿಂಗಳು ಕೆಲಸ ಮಾಡಿ ನಂತರ ಕೆಲಸ ಬಿಟ್ಟಿದ್ದಳು. ಕಳೆದ ಸೆ. 14ರಂದು ಭೇಟಿಯಾಗೋಣಾ ಎಂದು ಯುವತಿ ಫೋನ್ ಮಾಡಿ ಹಿತೇಂದ್ರ ಅವರನ್ನು ಕರೆಸಿಕೊಂಡಿದ್ದಳು. ಬಿಟಿಎಂ ಲೇಔಟ್ ನ ಪಾರ್ಕ್ ವೊಂದರಲ್ಲಿ ಯುವತಿಯನ್ನ ಭೇಟಿಯಾಗಲು ಹಿತೇಂದ್ರ ಅವರು ತೆರಳಿದ್ದಳು.

ಈ ವೇಳೆ ಹಿತೇಂದ್ರ ಕುಮಾರ್ ತನ್ನ ಪಾರ್ಕ್​ನ ಬೆಂಚ್ ಮೇಲೆ ಕೂತು ಪ್ರೀತಿಯ ನಿವೇದನೆಯನ್ನು ಯುವತಿ ಬಳಿ ಹೇಳಿಕೊಂಡಿದ್ದ. ಯುವತಿ ಕೂಡ ಈ ಪ್ರೀತಿಗೆ ಒಕೆ ಅಂತಾ ಹೇಳಿದ್ದಳು. ಇದೇ ಖುಷಿಯಲ್ಲಿ ಮಾರನೇ ದಿನ ಮತ್ತೆ ಭೇಟಿ ಮಾಡಲು ಹಿತೇಂದ್ರ ಯುವತಿಯನ್ನು ಕರೆದಿದ್ದ. ಅದೇ ಪಾರ್ಕ್ ನಲ್ಲಿ, ಅದೇ ಬೆಂಚ್ ಮೇಲೆ ಕೂತು ಇಬ್ಬರೂ ಮಾತನಾಡಿದ್ದರು. ಈ‌ ವೇಳೆ ಯುವತಿ ಸ್ನೇಹಿತ ಸಿದ್ದು ಚಾಕು ಸಮೇತ ಏಕಾಏಕಿ ಎಂಟ್ರಿ ಕೊಟ್ಟಿದ್ದ. ಯುವತಿ ಹಾಗೂ ಹಿತೇಂದ್ರ ಮಾತನಾಡುತ್ತ ಕೂತಿದ್ದನ್ನು ಕಂಡ ಸಿದ್ದು ಜಗಳ ಶುರು ಮಾಡಿದ್ದ. ಈ ವೇಳೆ ಮೂವರ ಮಧ್ಯೆ ಜಗಳವಾಗಿ ಕೊನೆಗೆ ಸಿದ್ದು ಹಿತೇಂದ್ರಗೆ ಚಾಕು ಇರಿದಿದ್ದಾನೆ.

ಹಿತೇಂದ್ರ ಕುಮಾರ್ ಹೊಟ್ಟೆ, ಬೆನ್ನು ಸೇರಿ ಕೆಲವೆಡೆ ಇರಿಯಲಾಗಿದೆ. ಘಟನೆ ಸಂಬಂಧ ತಾನು ಪ್ರೀತಿಸ್ತಿದ್ದ ಯುವತಿ ಹಾಗೂ ಆಕೆಯ ಸ್ನೇಹಿತ ಸಿದ್ದು ವಿರುದ್ಧ ಗಾಯಾಳು ಹಿತೇಂದ್ರ ಅವರು ದೂರು ದಾಖಲಿಸಿದ್ದಾರೆ. ಉದ್ದೇಶ ಪೂರ್ವಕವಾಗಿ ಕೊಲೆ ಯತ್ನ ಮಾಡಿದ್ದಾರೆ ಎಂದು ಸದ್ದಗುಂಟೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...