ಇಂದು ಅಕ್ಷಯ ತೃತೀಯ.. ನೀವು ಏನೆಲ್ಲಾ ಮಾಡಲೇ ಬೇಕು?

Date:

ವೈಶಾಖ ಮಾಸದ ಮೂರನೇ ದಿನ ಅಕ್ಷಯ ತೃತೀಯ.ಇದು ಕ್ಷಯ ವಿಲ್ಲದ ಶುಭದಿನ ಇಂದು ಬಂಗಾರ ಖರೀದಿ ಮಾಡಿದ್ರೆ ಅದು ಅಕ್ಷಯ ಅಂದರೆ ಹೆಚ್ಚಾಗುತ್ತಲೇ ಹೋಗುತ್ತದೆ. ಹೊಸ ಉದ್ಯೋಗ ಆರಂಭಿಸಲು ಇದು ಸುದಿನ. ಈ ಶುಭದಿನದಂದು ನೀವು ಏನು ಮಾಡಬೇಕು ಎನ್ನುವುದರ ಬಗ್ಗೆ ಇಲ್ಲಿದೆ,
ಇದು ಪುರಾಣ, ಇತಿಹಾಸದಲ್ಲಿಯೂ ಬಹಳ ಮುಖ್ಯವಾದ ದಿನ ಪಾಂಡವರ ಪತ್ನಿ ದ್ರೌಪದಿಗೆ ಸೂರ್ಯದೇವನಿಂದ ಅಕ್ಷಯಪಾತ್ರೆ ದೊರೆತ ಶುಭ ದಿನ ಇಂದು. ಪರಶುರಾಮ ಅವತರಿಸಿದ ಸುದಿನವೂ ಸಹ ಇಂದೇ. ಇದೇ ದಿನ ಮಾಹಾಭಾರತ ಕೂಡ ರಚನೆಯಾಗಿದ್ದು.
ಈ ದಿನ ಏನ್ ಮಾಡಿದರೆ ಒಳ್ಳೆಯದು?
* ಶ್ರೀಕೃಷ್ಣನ ಅವತಾರ ಪರಶುರಾಮರು ಇಂದು ಅವತರಿಸಿದ ದಿನ. ಈ ದಿನ ಪರಶುರಾಮನನ್ನು ನೆನೆದರೆ ಒಳ್ಳೆಯದು. ಹರೇಕೃಷ್ಣ ಮಹಾ ಮಂತ್ರವನ್ನು 108 ಸಲ ಜಪಿಸಿರಿ.
* ಇದೇ ದಿನ ಮಹಾಭಾರತವು ವ್ಯಾಸದೇವರಿಂದ ರಚಿಸಲ್ಪಟ್ಟಿತು. ಮಹಾಭಾರತದಲ್ಲಿರುವ ಭಗವದ್ಗೀತೆ ಇದೆಯಲ್ಲಾ ಅದು ಸಮಸ್ತ ವೇದಗಳ ಸಾರ. ಆದ್ದರಿಂದ ಭಗವದ್ಗೀತೆಯನ್ನು ನಿಯಮಿತವಾಗಿ ಪಾರಾಯಣ ಮಾಡುತ್ತಾರೋ ಅವರ ಪಾಪಗಳೆಲ್ಲವೂ ನಿವಾರಣೆಯಾಗುತ್ತದೆ. ಇಂದಾದರೂ ಪೂರ್ಣ ಭಗವದ್ಗೀತೆಯನ್ನು ಓದಿ. ಅದು ಸಾಧ್ಯವಾಗದೆ ಇದ್ದರೆ ಕನಿಷ್ಠ 18ನೇ ಅದ್ಯಾಯವನ್ನಾದರೂ ಓದಿ.
* ಹಿರಿಯರನ್ನು, ಪೂರ್ವಿಕರನ್ನು ಸ್ಮರಿಸಿ, ಪೂಜಿಸಿ.. ಅಗಲಿದವರಿಗೆ ಇಂದು ತರ್ಪಣ ನೀಡಬಹುದು.
* ಅನ್ನದಾನ ಮಾಡಿ. ಬಡವರಿಗೆ ಕೈಲಾದಷ್ಟು ಸಹಾಯ ಮಾಡಿ.

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...