ಬಿಜೆಪಿಯ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪನಿಗೆ ಬ್ರೈನ್ಗೂ ಬಾಯಿಗೂ ಲಿಂಕ್ ತಪ್ಪೋಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಲ್ಪತರು ನಾಡು ಎಂದು ಪ್ರಸಿದ್ಧವಾಗಿರುವ ತುಮಕೂರಿನಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಪರ ಪ್ರಚಾರ ಮಾಡಿದ ಸಿದ್ದರಾಮಯ್ಯ ಅವರು ಮಾಮೂಲಿಯಂತೆ ಬಿಜೆಪಿ ವಿರುದ್ಧ ಕೆಂಡಾಮಂಡಲರಾಗಿ ಮಾತನಾಡಿದರು. ಕೆಎಸ್ ಈಶ್ವರಪ್ಪ ವಿರುದ್ಧವಂತೂ ಭಾರೀ ಕಿಡಿಕಾರಿದರು.
ಈಶ್ವರಪ್ಪನಿಗೆ ಬ್ರೈನ್ಗೆ ಬಾಯಿಗೆ ಲಿಂಕ್ ತಪ್ಪೋಗಿದೆ ಎಂದರು. ಒಬ್ಬನೇ ಒಬ್ಬ ಕುರುಬರಿಗೆ ಟಿಕೆಟ್ ಕೊಡಿಸೋ ಯೋಗ್ಯತೆ ಇಲ್ಲದ ಈಶ್ವರಪ್ಪ ಬಿಜೆಪಿ ಬಿಟ್ಟು ಸನ್ಯಾಸತ್ವ ಸ್ವೀಕರಿಸಲು ಎಂದು ಟಾಂಗ್ ನೀಡಿದರು.
ಗುರು ದೇವೇಗೌಡರ ಮೇಲಿನ ಹಿಂದಿನ ಕೋಪ-ತಾಪ ಎಲ್ಲಾ ಬಿಟ್ಟು ಅವರ ಪರವಾಗಿ ಮತ ಯಾಚನೆ ಮಾಡಿ ಸಿದ್ದರಾಮಯ್ಯ ಗಮನ ಸೆಳೆದರು.
ಈಶ್ವರಪ್ಪನಿಗೆ ಬ್ರೈನ್ಗೂ ಬಾಯಿಗೂ ಲಿಂಕ್ ತಪ್ಪಿದೆ ಎಂದ ಮಾಜಿ ಮುಖ್ಯಮಂತ್ರಿ..!
Date: