ಈ ಬಾರಿ SSLC , PUC ಪರೀಕ್ಷೆ ಯಾವಾಗ?

Date:

ಪ್ರತಿವರ್ಷ ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್‌ನಲ್ಲಿ ನಡೆಯುತ್ತವೆ. ಆದರೆ ಈ ವರ್ಷ ಕೊರೊನಾ ಪರಿಣಾಮದಿಂದಾಗಿ ಇನ್ನೂ ಶಾಲೆಗಳೇ ಪುನರಾರಂಭಗೊಂಡಿಲ್ಲ. ಆನ್‌ಲೈನ್‌ ತರಗತಿಗಳ ಮೂಲಕ ಕಲಿಯುತ್ತಿರುವ ವಿದ್ಯಾರ್ಥಿಗಳು ಮಾರ್ಚ್‌ನಲ್ಲೇ ಪರೀಕ್ಷೆ ನಡೆಯಬಹುದಾ? ಅಥವಾ ಪರೀಕ್ಷೆ ಯಾವಾಗಿನಿಂದ ಆರಂಭವಾಗಬಹುದು ಎಂಬುದನ್ನು ತಿಳಿಯಲು ಕಾತುರರಾಗಿದ್ದಾರೆ. ವಿದ್ಯಾರ್ಥಿಗಳ ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ಎಂದಿನಂತೆ ಈ ವರ್ಷ ಮಾರ್ಚ್‌ ತಿಂಗಳಲ್ಲಿ ನಡೆಯುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್ ಖಚಿತಪಡಿಸಿದ್ದಾರೆ.

“ಈ ಬಾರಿ ಕೋವಿಡ್-19 ಶಿಕ್ಷಣ ಕ್ಷೇತ್ರಕ್ಕೆ ಬಾರೀ ಹೊಡೆತ ಉಂಟುಮಾಡಿದೆ. ಈ ಹಿನ್ನೆಲೆ ಶೈಕ್ಷಣಿಕ ವರ್ಷ ಕಡಿತವಾಗಿದೆ. ಜನವರಿ 1 ರಿಂದ ಶಾಲೆ-ಕಾಲೇಜುಗಳು ಆರಂಭ ಆಗುತ್ತಿರುವುದರಿಂದ ಈ ಬಾರಿ ಎಂದಿನಂತೆ ಮಾರ್ಚ್‌ನಲ್ಲಿ ಪರೀಕ್ಷೆ ನಡೆಸಲಾಗುವುದಿಲ್ಲ. ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆ ವಿಚಾರದಲ್ಲಿ ಆತಂಕಪಡುವ ಅಗತ್ಯವಿಲ್ಲವೆಂದು ಮಾಧ್ಯಮದವರಿಗೆ ತಿಳಿಸಿದ್ದಾರೆ”.

ಈ ಎರಡು ಪರೀಕ್ಷೆಗಳ ವೇಳಾಪಟ್ಟಿ ಕುರಿತು, ಮುಂದಿನ ಒಂದು ವಾರದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ವಾರ್ಷಿಕ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಲಾಗುತ್ತದೆ. ಸದ್ಯ ವೇಳಾಪಟ್ಟಿ ರೂಪಿಸುವ ಕೆಲಸ ಪ್ರಗತಿಯಲ್ಲಿದೆ. ಅಲ್ಲದೆ, ಶೈಕ್ಷಣಿಕ ಅವಧಿಯ ಅನುಗುಣವಾಗಿ ಪಠ್ಯಕ್ರಮ ಕಡಿತ ಮಾಡಲಾಗುತ್ತದೆ ಎಂದಿದ್ದಾರೆ.

ಇನ್ನೂ ಶಾಲೆಗಳ ಆರಂಭ ವಿಚಾರ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಇಲ್ಲದಿರುವ ತಾಲೂಕುಗಳಲ್ಲಿ ಹಂತ ಹಂತವಾಗಿ ಎಂದಿನಂತೆಯೇ ಶಾಲೆಗಳನ್ನು ಪುನರಾರಂಭಿಸುವ ವಿಚಾರ ಪರಿಗಣಿಸುವಂತೆ ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿದೆ.

ಹೇಗಿದೆ ಗೊತ್ತಾ ಐಸಿಸಿ ಟಿ20, ಒಡಿಐ, ಟೆಸ್ಟ್ ಟೀಮ್..!

2010ರ ದಶಕ ಇನ್ನೇನು ಮುಕ್ತಾಯಗೊಳ್ಳುವ ಸಮಯ ಬಂದಾಗಿದೆ. ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ತನ್ನ ಆಯ್ಕೆಯ ದಶಕದ ಶ್ರೇಷ್ಠ ಟೆಸ್ಟ್‌, ಟಿ20-ಐ ಮತ್ತು ಒಡಿಐ ತಂಡಗಳನ್ನು ರಚನೆ ಮಾಡಿದೆ.
ಐಸಿಸಿ ತನ್ನ ಈ ತಂಡ ರಚಿಸುವ ಸಲುವಾಗಿ ಶೇ. 10ರಷ್ಟು ಅಭಿಪ್ರಾಯವನ್ನು ಅಭಿಮಾನಿಗಳಿಂದ ವೋಟಿಂಗ್‌ ಮೂಲಕ ಸ್ವೀಕರಿಸಿದ್ದು, ಉಳಿದ 90ರಷ್ಟು ಭಾಗವನ್ನು ತನ್ನ ಪರಿಣತರಿಂದ ಪಡೆದುಕೊಂಡಿದೆ.
ಈ ರೀತಿ ಅಂತಿಮ ಗೊಳಿಸಲಾದ ಟೆಸ್ಟ್, ಟಿ20-ಐ ಮತ್ತು ಒಡಿಐ ತಂಡಗಳನ್ನು ಐಸಿಸಿ ಭಾನುವಾರ ತನ್ನ ಅಧಿಕೃತ ಟ್ವಿಟರ್‌ ಖಾತೆಯ ಮೂಲಕ ಬಹಿರಂಗ ಪಡಿಸಿದೆ. ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್‌ ಧೋನಿಗೆ ಟಿ20-ಐ ಮತ್ತು ಒಡಿಐ ತಂಡಗಳನ್ನು ಮುನ್ನಡೆಸುವ ಅವಕಾಶ ಸಿಕ್ಕರೆ, ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ನಾಯಕತ್ವ ಪಡೆದುಕೊಂಡಿದ್ದಾರೆ.
ಎಂಎಸ್‌ ಧೋನಿ ಐಸಿಸಿ ಆಯೋಜಿಸುವ ಟೂರ್ನಿಗಳಾದ ಟಿ20 ಕ್ರಿಕೆಟ್ ವಿಶ್ವಕಪ್‌, ಏಕದಿನ ಕ್ರಿಕೆಟ್ ವಿಶ್ವಕಪ್ ಮತ್ತು ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗಳಲ್ಲಿ ಟ್ರೋಫಿ ಎತ್ತಿ ಹಿಡಿದ ವಿಶ್ವದ ಏಕಮಾತ್ರ ನಾಯಕ ಎಂಬ ವಿಶೇಷ ದಾಖಲೆ ಹೊಂದಿದ್ದಾರೆ.
ಅದರಲ್ಲೂ 2011ರಲ್ಲಿ ಭಾರತ ತಂಡ 2ನೇ ಬಾರಿ ಒಡಿಐ ವಿಶ್ವಕಪ್‌ ಗೆದ್ದ ಸಂದರ್ಭದಲ್ಲಿ ಫೈನಲ್‌ನಲ್ಲಿ ಶ್ರೀಲಂಕಾ ಎದುರು ಧೋನಿ ಮ್ಯಾಚ್‌ ವಿನ್ನಿಂಗ್ ಅಜೇಯ 91 ರನ್‌ಗಳನ್ನು ಚೆಚ್ಚಿ ಮಿಂಚಿದ್ದರು. ಧೋನಿ 2020ರ ಆಗಸ್ಟ್‌ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.
ಒಟ್ಟಾರೆ ಐಸಿಸಿ ಪ್ರಕಟಿಸಿದ ಟೆಸ್ಟ್‌, ಟಿ20-ಐ ಮತ್ತು ಒಡಿಐ ತಂಡಗಳ ಸಂಪೂರ್ಣ ವಿವರ ಈ ಕೆಳಗಿನಂತಿದೆ.
ಐಸಿಸಿ ದಶಕದ ಏಕದಿನ ಕ್ರಿಕೆಟ್‌ ತಂಡ
1. ರೋಹಿತ್ ಶರ್ಮಾ (ಓಪನರ್‌)
2. ಡೇವಿಡ್‌ ವಾರ್ನರ್‌ (ಓಪನರ್‌)
3. ವಿರಾಟ್ ಕೊಹ್ಲಿ (ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್)
4. ಎಬಿ ಡಿ’ವಿಲಿಯರ್ಸ್‌ (ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್)
5. ಶಕಿಬ್ ಅಲ್‌ ಹಸನ್ (ಆಲ್‌ರೌಂಡರ್‌)
6. ಎಂಎಸ್‌ ಧೋನಿ (ವಿಕೆಟ್‌ಕೀಪರ್‌/ನಾಯಕ)
7. ಬೆನ್‌ ಸ್ಟೋಕ್ಸ್‌ (ಆಲ್‌ರೌಂಡರ್‌)
8. ಮಿಚೆಲ್‌ ಸ್ಟಾರ್ಕ್ (ಎಡಗೈ ವೇಗಿ)
9. ಟ್ರೆಂಟ್ ಬೌಲ್ಟ್‌ (ಎಡಗೈ ವೇಗಿ)
10. ಇಮ್ರಾನ್‌ ತಾಹಿರ್‌ (ಲೆಗ್‌ ಸ್ಪಿನ್ನರ್‌)
11. ಲಸಿತ್‌ ಮಾಲಿಂಗ (ಬಲಗೈ ವೇಗಿ)
ಐಸಿಸಿ ದಶಕದ ಅಂತಾರಾಷ್ಟ್ರೀಯ ಟಿ20 ತಂಡ
1. ರೋಹಿತ್‌ ಶರ್ಮಾ (ಓಪನರ್‌)
2. ಕ್ರಿಸ್‌ ಗೇಲ್‌ (ಓಪನರ್‌)
3. ಆರೊನ್‌ ಫಿಂಚ್‌ (ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್)
4. ವಿರಾಟ್‌ ಕೊಹ್ಲಿ (ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್)
5. ಎಬಿ ಡಿ’ವಿಲಿಯರ್ಸ್‌ (ಐದನೇ ಕ್ರಮಾಂಕದ ಬ್ಯಾಟ್ಸ್‌ಮನ್)
6. ಗ್ಲೆನ್‌ ಮ್ಯಾಕ್ಸ್‌ವೆಲ್‌ (ಬ್ಯಾಟಿಂಗ್‌ ಆಲ್‌ರೌಂಡರ್‌)
7. ಎಂಎಸ್‌ ಧೋನಿ (ವಿಕೆಟ್‌ಕೀಪರ್‌/ನಾಯಕ)
8. ಕೈರೊನ್ ಪೊಲಾರ್ಡ್‌ (ಆಲ್‌ರೌಂಡರ್‌
9. ರಶೀದ್‌ ಖಾನ್ (ಲೆಗ್‌ ಸ್ಪಿನ್ನರ್‌)
10. ಜಸ್‌ಪ್ರೀತ್ ಬುಮ್ರಾ (ಬಲಗೈ ವೇಗಿ)
11. ಲಸಿತ್‌ ಮಾಲಿಂಗ (ಬಲಗೈ ವೇಗಿ)

ಐಸಿಸಿ ದಶಕದ ಟೆಸ್ಟ್‌ ತಂಡ
1. ಅಲಸ್ಟೈರ್ ಕುಕ್ (ಓಪನರ್)
2. ಡೇವಿಡ್‌ ವಾರ್ನರ್‌ (ಓಪನರ್)

3. ಕೇನ್ ವಿಲಿಯಮ್ಸನ್ (ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್)
4. ವಿರಾಟ್ ಕೊಹ್ಲಿ (ನಾಯಕ/4ನೇ ಕ್ರಮಾಂಕದ ಬ್ಯಾಟ್ಸ್‌ಮನ್)
5. ಸ್ಟೀವ್ ಸ್ಮಿತ್‌ (ಐದನೇ ಕ್ರಮಾಂಕದ ಬ್ಯಾಟ್ಸ್‌ಮನ್)

6. ಕುಮಾರ ಸಂಗಕ್ಕಾರ (ವಿಕೆಟ್‌ಕೀಪರ್‌)
7. ಬೆನ್‌ ಸ್ಟೋಕ್ಸ್‌ (ಆಲ್‌ರೌಂಡರ್‌)
8. ಆರ್‌ ಅಶ್ವಿನ್‌ (ಆಫ್‌ ಸ್ಪಿನ್ನರ್‌)
9. ಡೇಲ್‌ ಸ್ಟೇನ್ (ಬಲಗೈ ವೇಗಿ)
10. ಸ್ಟುವರ್ಟ್‌ ಬ್ರಾಡ್‌ (ಬಲಗೈ ವೇಗಿ)
11. ಜೇಮ್ಸ್‌ ಆಂಡರ್ಸನ್ (ಬಲಗೈ ವೇಗಿ)

 

Share post:

Subscribe

spot_imgspot_img

Popular

More like this
Related

ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್‌ ಸಿಗ್ನಲ್!‌ 

ನ.16ಕ್ಕೆ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಹೈಕೋರ್ಟ್ ಗ್ರೀನ್‌ ಸಿಗ್ನಲ್!‌  ಕಲಬುರಗಿ: ಕಲಬುರಗಿ ಜಿಲ್ಲೆಯ...

ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡುತ್ತೇನೆ: ಕೆ.ಎನ್. ರಾಜಣ್ಣ

ನಾನು ಯಾವ ಬಾವುಟ ಹಿಡಿಬೇಕು ಅಂತ ಮುಂದೆ ತೀರ್ಮಾನ ಮಾಡುತ್ತೇನೆ: ಕೆ.ಎನ್....

Gold Price Today: ಮತ್ತೆ ಏರಿಕೆಯತ್ತ ಚಿನ್ನದ ಬೆಲೆ! ಹೀಗಿದೆ ಇಂದಿನ ಗೋಲ್ಡ್ ರೇಟ್

Gold Price Today: ಮತ್ತೆ ಏರಿಕೆಯತ್ತ ಚಿನ್ನದ ಬೆಲೆ! ಹೀಗಿದೆ ಇಂದಿನ...

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್ ಬೆಂಗಳೂರು: ಮುಸ್ಲಿಮರ ಪರವಾದ...