ಮದುವೆ ಮುಗಿಸಿಕೊಂಡು ಕಾರಿನಲ್ಲಿ ಹಿಂದಿರುಗುತ್ತಿದ್ದ ವೇಳೆ ಕಂಟೈನರ್ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟು, ಮತ್ತಿಬ್ಬರು ಗಾಯಗೊಂಡಿರುವ ಘಟನೆ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಳೆಕೆರೆ ಗ್ರಾಮದ ಜಯಲಕ್ಷ್ಮಮ್ಮ (46) , ಕಾಮಸಂದ್ರದ ಕುಮಾರ್(28), ಶ್ರೀಪತಿ ಹಳ್ಳಿಯ ನರಸಮ್ಮ (45) ಮೃತಪಟ್ಟಿದ್ದು , ಗಂಗಲಕ್ಷ್ಮಮ್ಮ , ಪ್ರಶಾಂತ್ ಗಂಭೀರ ಗಾಯಗೊಂಡಿದ್ದಾರೆ.
ಕರೇನಹಳ್ಳಿಯಲ್ಲಿ ನಡೆದ ಮದುವೆಗೆ ತೆರಳಿದ್ದ ಈ ಐವರು ಹಿಂದಿರುಗುವಾಗ ನಿನ್ನೆ ರಾತ್ರಿ ಇವರು ಪ್ರಯಾಣಿಸುತ್ತಿದ್ದ ಕಾರಿಗೆ ಕಂಟೈನರ್ ಡಿಕ್ಕಿ ಹೊಡೆದಿದೆ.ಈ ವೇಳೆ ನಿಯಂತ್ರಣ ಕಳೆದುಕೊಂಡ ಕಾರು ಮಾಗಡಿ-ಕುಣಿಗಲ್ ರಸ್ತೆಯ ಜನತಾ ಕಾಲೋನಿ ತಿರುವಿನಲ್ಲಿ ಬಿದ್ದಾಗ ಈ ದುರ್ಘಟನೆ ಸಂಭವಿಸಿದೆ