ಅಭಿನಯ ಚಕ್ರವರ್ತಿ ಸುದೀಪ್ ಅವರಿಗೆ ಶಾಕ್ ಎದುರಾಗಿದೆ. ಸುದೀಪ್ ಅವರಿಗೆ ಚಿಕ್ಕಮಗಳೂರು ಜೆಎಎಂಎಫ್ ಸಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಸುದೀಪ್ ವಾರಸ್ದಾರ ಎನ್ನುವ ಧಾರವಾಹಿಯೊಂದನ್ನು ನಿರ್ಮಿಸಿದ್ದರು. ಈ ಧಾರವಾಹಿಗೆ ಚಿಕ್ಕಮಗಳೂರಲ್ಲಿ ಸ್ಥಳ ಬಾಡಿಗೆಗೆ ಪಡೆದಿದ್ದರು.3 ತಿಂಗಳು ಬಾಡಿಗೆ ನೀಡಿಲ್ಲ ಹಾಗೂ ಶೂಟಿಂಗ್ ವೇಳೆ ತೋಟ ಹಾಳಾಗಿದೆ ಎಂದು ಮನೆ, ತೋಟದ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ವಿಚಾರಣಗೆ ಹಾಜರಾಗಿ ಎಂದು ಸುದೀಪ್ ಅವರಿಗೆ ಸಮನ್ಸ್ ನೀಡಿದೆ.
ಸುದೀಪ್ ಅವರು ಈ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಸುದೀಪ್ ಸಿನಿಮಾ ಚಿತ್ರೀಕರಣದಲ್ಲಿದ್ದರೂ ಕೋರ್ಟ್ ಗೆ ವಿಚಾರಣೆಗೆ ಹಾಜರಾಗಲೇ ಬೇಕಿದೆ.
ವಿಚಾರಣೆ ನಂತರ ಸುದೀಪ್ ದು ತಪ್ಪೇ ಅಥವಾ ದೀಪಕ್ ಅವರದ್ದು ತಪ್ಪೇ ಎಂಬುದು ತೀರ್ಮಾನವಾಗಲಿದೆ.