ಕುರುಕ್ಷೇತ್ರದ ಬಗ್ಗೆ ಸುಮಲತಾ ಶಾಕಿಂಗ್ ಹೇಳಿಕೆ..! ಇದರ ಅಸಲಿಯತ್ತೇ ಬೇರೆ..!

Date:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ರಿಲೀಸ್ ಆಗಿದೆ. ಸೆಟ್ಟೇರಿದಲ್ಲಿಂದಲೂ ಸೌಂಡು ಮಾಡಿದ್ದ ಈ ಸಿನಿಮಾ ನಿರೀಕ್ಷೆಗೂ ಮೀರಿ ಅಬ್ಬರಿಸುತ್ತಿದೆ.
ಹಿಂದೆ ಸಂಗೊಳ್ಳಿ ರಾಯಣ್ಣನ ಪಾತ್ರಕ್ಕೆ ಜೀವ ತುಂಬಿ ಸಂಗೊಳ್ಳಿ ರಾಯಣ್ಣನ ದರ್ಶನ ನೀಡಿದ್ದ ದರ್ಶನ್ ಈ ಬಾರಿ ದುರ್ಯೋಧನನ ಪಾತ್ರವನ್ನು ತಾನೇ ದುರ್ಯೋಧನ ಎನ್ನುವಂತೆ ನಟಿಸಿದ್ದಾರೆ. ಡಿ.ಬಾಸ್ ದುರ್ಯೋಧನ ಬಾಸ್​ ಆಗಿದ್ದಾರೆ. ದಶರ್ನ್ ಫ್ಯಾನ್ಸ್ ಸಂಭ್ರಮ ಮುಗಿಲು ಮುಟ್ಟಿದೆ.
ಸಿನಿಮಾವನ್ನು ನೋಡಿರುವ ಗಣ್ಯರಲ್ಲಿ ಸುಮಲತಾ ಅಂಬರೀಶ್​ ಕೂಡ ಒಬ್ಬರು. ದರ್ಶನ್ ಅವರೊಡನೆ ಕುರುಕ್ಷೇತ್ರ ನೋಡಿದ ಸುಮಲತಾ ಸುದ್ದಿಗಾರರೊಂದಿಗೆ ಮಾತನಾಡಿದರು. ಸುಮಲತಾ ಅವರ ಮೊದಲ ಪ್ರಕ್ರಿಯೆಯೇ ಶಾಕಿಂಗ್ ಆಗಿದೆ..! ಕುರುಕ್ಷೇತ್ರ ಸಿನಿಮಾವೇ ಅಲ್ಲ ಎಂದಿದ್ದಾರೆ.
ಅಚ್ಚರಿಯಾದ್ರು ಈ ಹೇಳಿಕೆ ಸುಮಲತಾ ನೀಡಿರುವುದು ಸತ್ಯ.. ಆದರೆ ಇದರ ಅಸಲಿಯತ್ತೇ ಬೇರೆ. ದರ್ಶನ್ ಅವರನ್ನು, ಸಿನಿಮಾವನ್ನುಸುಮಲತಾ ಕೊಂಡಾಡಿದ ಪರಿ ಇದು. ಕುರುಕ್ಷೇತ್ರ ಸಿನಿಮಾ ಎಂದರೆ ತಪ್ಪಾಗುತ್ತದೆ. ಅದು ಒಂದು ಪಯಣ, ಜರ್ನಿ.. ಎಕ್ಸ್​ಪಿರಿಯನ್ಸ್, ಅನುಭವ ಎಂದು ಸಂಸದೆ ಸುಮಲತಾ ಬಣ್ಣಿಸಿದ್ದಾರೆ.


ದುರ್ಯೋಧನನೇ ದರ್ಶನ್ ದರ್ಶನ್ನೇ ದುರ್ಯೋಧನ ಎನ್ನುವಂತೆ ದರ್ಶನ್​ ಅಭಿನಯಿಸಿದ್ದಾರೆ. ಇದು ಸಂಗೊಳ್ಳಿ ರಾಯಣ್ಣ ಸಿನಿಮಾ ಬಳಿಕ ದರ್ಶನ್ ಅವರ ಸಿನಿ ಪಯಣದ ಮೈಲುಗಲ್ಲು ಎಂದು ಸುಮಲತಾ ವರ್ಣಿಸಿದ್ದಾರೆ.
ಕುರುಕ್ಷೇತ್ರ ರೆಬೆಲ್ ಸ್ಟಾರ್ ಅಂಬರೀಶ್ ವಿಷಯಕ್ಕೂ ಮುಖ್ಯವಾಗುತ್ತದೆ. ಅಂಬರೀಶ್ ಅವರನ್ನು ಕೊನೆಯ ಸಲ ಬೆಳ್ಳಿ ಪರದೆಯಲ್ಲಿ ನೋಡ ಬಹುದಾದ ಸಿನಿಮಾ ಕುರುಕ್ಷೇತ್ರ. ಈ ಸಿನಿಮಾದಲ್ಲಿ ಅಂಬಿ ಭೀಷ್ಮನ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಕ್ರೇಜಿಸ್ಟಾರ್ ರವಿಚಂದ್ರನ್ ಶ್ರೀ ಕೃಷ್ಣನಾಗಿ, ಬಾಲಿವುಡ್ ನಟ ಸೋನು ಸೂದ್ ಅರ್ಜುನನಾಗಿ, ನಿಖಿಲ್ ಅಭಿಮನ್ಯವಾಗಿ ನಟಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..?

ಸಿಎಂ–ಡಿಸಿಎಂ ಜೊತೆ ರಾಹುಲ್ ಗಾಂಧಿ ಮಾತುಕತೆ: ಶರಣು ಪ್ರಕಾಶ್ ಪಾಟೀಲ್ ಹೇಳಿದ್ದೇನು..? ಬೆಂಗಳೂರು:...

ವಾಲ್ಮೀಕಿ ಹಗರಣದಲ್ಲಿ ಬಿ. ನಾಗೇಂದ್ರಗೆ ರಿಲೀಫ್: ನಿರೀಕ್ಷಣಾ ಜಾಮೀನು ಮಂಜೂರು

ವಾಲ್ಮೀಕಿ ಹಗರಣದಲ್ಲಿ ಬಿ. ನಾಗೇಂದ್ರಗೆ ರಿಲೀಫ್: ನಿರೀಕ್ಷಣಾ ಜಾಮೀನು ಮಂಜೂರು ಬೆಂಗಳೂರು: ವಾಲ್ಮೀಕಿ...

ರಾಹುಲ್ ಗಾಂಧಿ ಭೇಟಿ ಶಿಷ್ಟಾಚಾರದ ಭಾಗ ಮಾತ್ರ – ಗೊಂದಲ ಸೃಷ್ಟಿಸಬೇಡಿ: ಡಿಸಿಎಂ ಡಿ.ಕೆ.ಶಿವಕುಮಾರ್

ರಾಹುಲ್ ಗಾಂಧಿ ಭೇಟಿ ಶಿಷ್ಟಾಚಾರದ ಭಾಗ ಮಾತ್ರ – ಗೊಂದಲ ಸೃಷ್ಟಿಸಬೇಡಿ:...

ಕಾಂಗ್ರೆಸ್ ನ ಕುರ್ಚಿ ಕಾದಾಟದಿಂದ ರಾಜ್ಯಕ್ಕೆ ಅಭಿವೃದ್ಧಿ ಇಲ್ಲ: ಬಿ.ವೈ. ವಿಜಯೇಂದ್ರ

ಕಾಂಗ್ರೆಸ್ ನ ಕುರ್ಚಿ ಕಾದಾಟದಿಂದ ರಾಜ್ಯಕ್ಕೆ ಅಭಿವೃದ್ಧಿ ಇಲ್ಲ: ಬಿ.ವೈ. ವಿಜಯೇಂದ್ರ ಚಿತ್ರದುರ್ಗ:...