ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ರಿಲೀಸ್ ಆಗಿದೆ. ಸೆಟ್ಟೇರಿದಲ್ಲಿಂದಲೂ ಸೌಂಡು ಮಾಡಿದ್ದ ಈ ಸಿನಿಮಾ ನಿರೀಕ್ಷೆಗೂ ಮೀರಿ ಅಬ್ಬರಿಸುತ್ತಿದೆ.
ಹಿಂದೆ ಸಂಗೊಳ್ಳಿ ರಾಯಣ್ಣನ ಪಾತ್ರಕ್ಕೆ ಜೀವ ತುಂಬಿ ಸಂಗೊಳ್ಳಿ ರಾಯಣ್ಣನ ದರ್ಶನ ನೀಡಿದ್ದ ದರ್ಶನ್ ಈ ಬಾರಿ ದುರ್ಯೋಧನನ ಪಾತ್ರವನ್ನು ತಾನೇ ದುರ್ಯೋಧನ ಎನ್ನುವಂತೆ ನಟಿಸಿದ್ದಾರೆ. ಡಿ.ಬಾಸ್ ದುರ್ಯೋಧನ ಬಾಸ್ ಆಗಿದ್ದಾರೆ. ದಶರ್ನ್ ಫ್ಯಾನ್ಸ್ ಸಂಭ್ರಮ ಮುಗಿಲು ಮುಟ್ಟಿದೆ.
ಸಿನಿಮಾವನ್ನು ನೋಡಿರುವ ಗಣ್ಯರಲ್ಲಿ ಸುಮಲತಾ ಅಂಬರೀಶ್ ಕೂಡ ಒಬ್ಬರು. ದರ್ಶನ್ ಅವರೊಡನೆ ಕುರುಕ್ಷೇತ್ರ ನೋಡಿದ ಸುಮಲತಾ ಸುದ್ದಿಗಾರರೊಂದಿಗೆ ಮಾತನಾಡಿದರು. ಸುಮಲತಾ ಅವರ ಮೊದಲ ಪ್ರಕ್ರಿಯೆಯೇ ಶಾಕಿಂಗ್ ಆಗಿದೆ..! ಕುರುಕ್ಷೇತ್ರ ಸಿನಿಮಾವೇ ಅಲ್ಲ ಎಂದಿದ್ದಾರೆ.
ಅಚ್ಚರಿಯಾದ್ರು ಈ ಹೇಳಿಕೆ ಸುಮಲತಾ ನೀಡಿರುವುದು ಸತ್ಯ.. ಆದರೆ ಇದರ ಅಸಲಿಯತ್ತೇ ಬೇರೆ. ದರ್ಶನ್ ಅವರನ್ನು, ಸಿನಿಮಾವನ್ನುಸುಮಲತಾ ಕೊಂಡಾಡಿದ ಪರಿ ಇದು. ಕುರುಕ್ಷೇತ್ರ ಸಿನಿಮಾ ಎಂದರೆ ತಪ್ಪಾಗುತ್ತದೆ. ಅದು ಒಂದು ಪಯಣ, ಜರ್ನಿ.. ಎಕ್ಸ್ಪಿರಿಯನ್ಸ್, ಅನುಭವ ಎಂದು ಸಂಸದೆ ಸುಮಲತಾ ಬಣ್ಣಿಸಿದ್ದಾರೆ.
ದುರ್ಯೋಧನನೇ ದರ್ಶನ್ ದರ್ಶನ್ನೇ ದುರ್ಯೋಧನ ಎನ್ನುವಂತೆ ದರ್ಶನ್ ಅಭಿನಯಿಸಿದ್ದಾರೆ. ಇದು ಸಂಗೊಳ್ಳಿ ರಾಯಣ್ಣ ಸಿನಿಮಾ ಬಳಿಕ ದರ್ಶನ್ ಅವರ ಸಿನಿ ಪಯಣದ ಮೈಲುಗಲ್ಲು ಎಂದು ಸುಮಲತಾ ವರ್ಣಿಸಿದ್ದಾರೆ.
ಕುರುಕ್ಷೇತ್ರ ರೆಬೆಲ್ ಸ್ಟಾರ್ ಅಂಬರೀಶ್ ವಿಷಯಕ್ಕೂ ಮುಖ್ಯವಾಗುತ್ತದೆ. ಅಂಬರೀಶ್ ಅವರನ್ನು ಕೊನೆಯ ಸಲ ಬೆಳ್ಳಿ ಪರದೆಯಲ್ಲಿ ನೋಡ ಬಹುದಾದ ಸಿನಿಮಾ ಕುರುಕ್ಷೇತ್ರ. ಈ ಸಿನಿಮಾದಲ್ಲಿ ಅಂಬಿ ಭೀಷ್ಮನ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನುಳಿದಂತೆ ಕ್ರೇಜಿಸ್ಟಾರ್ ರವಿಚಂದ್ರನ್ ಶ್ರೀ ಕೃಷ್ಣನಾಗಿ, ಬಾಲಿವುಡ್ ನಟ ಸೋನು ಸೂದ್ ಅರ್ಜುನನಾಗಿ, ನಿಖಿಲ್ ಅಭಿಮನ್ಯವಾಗಿ ನಟಿಸಿದ್ದಾರೆ.