ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ನಿರ್ಮಾಪಕ ಕೊರೊನಾಗೆ ಬಲಿ

admin
1 Min Read

ಕೊರೊನಾ ವೈರಸ್‌ನ ಎರಡನೇ ಅಲೆ ದಿನದಿಂದ ದಿನಕ್ಕೆ ಪರಿಸ್ಥಿತಿಯನ್ನು ಭೀಕರಗೊಳಿಸುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ಸ್ಥಿತಿ ಸಿಕ್ಕಾಪಟ್ಟೆ ಗಂಭೀರವಾಗಿದೆ. ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂದು (ಏ.18) ನಟ, ನಿರ್ಮಾಪಕ ಡಾ. ಡಿ.ಎಸ್‌. ಮಂಜುನಾಥ್ ಅವರು ಕೂಡ ಕೊರೊನಾದಿಂದ ನಿಧನರಾಗಿದ್ದಾರೆ! ಅವರಿಗೆ 41 ವರ್ಷ ವಯಸ್ಸಾಗಿತ್ತು.

2019ರಲ್ಲಿ ತೆರೆಕಂಡ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರವನ್ನು ಮಂಜುನಾಥ್ ನಿರ್ಮಾಣ ಮಾಡಿದ್ದರು. ಆ ಸಿನಿಮಾ ದೊಡ್ಡ ಯಶಸ್ಸನ್ನು ತಂದುಕೊಟ್ಟಿತ್ತು. ಕುಮಾರ್ ನಿರ್ದೇಶನ ಮಾಡಿದ್ದ ಆ ಸಿನಿಮಾದಲ್ಲಿ ತಬಲಾ ನಾಣಿ, ಚಂದನ್‌ ಆಚಾರ್, ಸಂಜನಾ ಆನಂದ್ ಮುಂತಾದವರು ನಟಿಸಿದ್ದರು. ‘ಕೆಮಿಸ್ಟ್ರಿ ಆಫ್‌ ಕರಿಯಪ್ಪ’ ಸಿನಿಮಾಕ್ಕೂ ಮೊದಲು ಅವರು ‘ಸಂಯಕ್ತ 2’ ಸಿನಿಮಾಕ್ಕೂ ಬಂಡವಾಳ ಹೂಡಿದ್ದರು ಮಂಜುನಾಥ್‌.

ನಿರ್ಮಾಣ ನಂತರ ನಟನಾಗಬೇಕೆಂಬ ಹಂಬಲ ಮಂಜುನಾಥ್‌ ಅವರಲ್ಲಿತ್ತು. ಹಾಗಾಗಿ, ಅವರು ‘present ಪ್ರಪಂಚ ೦% ಲವ್’ ಎಂಬ ಸಿನಿಮಾ ಮೂಲಕ ಹೀರೋ ಆಗಿದ್ದರು. ಈ ಸಿನಿಮಾದಲ್ಲಿ ಇಂದಿನ ಕಾಲಘಟ್ಟದ ಕಥೆಯಿದ್ದು, ಈಗಿನವರು ಸಮಯದ ಹಿಂದೆ, ಹಣದ ಹಿಂದಷ್ಟೇ ಓಡುತ್ತಿದ್ದಾರೆ. ತಮ್ಮ ಅಮೂಲ್ಯವಾದ ಜೀವನ ಎಲ್ಲಿ ಕಳೆದು ಹೋಗುತ್ತಿದೆ? ಹೇಗೆ ಮಾಯವಾಗುತ್ತಿದೆ ಎಂಬುದನ್ನು ಮರೆಯುತ್ತಿದ್ದಾರೆ. ಅದನ್ನೇ ಮುಖ್ಯವಾಗಿಟ್ಟುಕೊಂಡು ಈ ಸಿನಿಮಾ ಮಾಡಿದ್ದರು ನಿರ್ದೇಶಕ ಅಭಿರಾಮ್‌. ಆದರೆ, ಹೀರೋ ಆಗಿ ನಟಿಸಿದ ಮೊದಲೇ ಸಿನಿಮಾ ತೆರೆಕಾಣುವ ಮೊದಲೇ ಮಂಜುನಾಥ್‌, ಮಹಾಮಾರಿ ಕೊರೊನಾಗೆ ಬಲಿಯಾಗಿರುವುದು ನಿಜಕ್ಕೂ ಬೇಸರದ ಸಂಗತಿ

Share This Article
Leave a Comment