ಕೊರೋನಾದಿಂದ ಐಪಿಎಲ್ ರದ್ದಾದ್ರೆ ಬಿಸಿಸಿಐಗೆ ಎಷ್ಟು ನಷ್ಟ ಆಗುತ್ತೆ ಗೊತ್ತಾ?

Date:

ಕೊರೋನಾ, ಕೊರೋನಾ , ಕೊರೋನಾ.. ಎಲ್ಲೆಲ್ಲೂ ಮಹಾಮಾರಿ ಕೊರೋನಾದ್ದೇ ಕೋಲಾಹಲ… ಮಾಲ್ಗಳು, ಶಾಲಾ-ಕಾಲೇಜುಗಳು, ಸಾರ್ವಜನಿಕ ಸಭೆ, ಸಮಾರಂಭಗಳು ಎಲ್ಲವೂ ಕೊರೋನಾದಿಂದ ಬಂದ್ ಆಗಿವೆ! ಸದಾ ಜಿಗಿ ಜಿಗಿ ಅಂತಿದ್ದ ಸಾರ್ವಜನಿಕ ಸ್ಥಳಗಳು ಬಿಕೋ ಎನ್ನುತ್ತಿವೆ. ವ್ಯಾಪಾರ ವಹಿವಾಟುಗಳು ಪಾತಾಳಕ್ಕೆ ಕುಸಿದಿವೆ.. ಜನ ಸ್ವಯಂ ಪ್ರೇರಿತರಾಗಿ ಗೃಹಬಂಧನ ವಿಧಿಸಿಕೊಂಡಿದ್ದಾರೆ. ಹೆಮ್ಮಾರಿ ಕೊರೋನಾ ಭೀತಿ ಕ್ರೀಡೆಗೂ ತಟ್ಟಿದೆ.


ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ, ಈಗಾಗಲೇ ನಿವೃತ್ತಿ ಘೋಷಿಸಿರುವ ಕ್ರಿಕೆಟ್ ಲೋಕದ ದಿಗ್ಗಜರ ಸಮಾಗಮದ ರೋಡ್ಸೇಫ್ಟಿ ಟಿ20 ಸರಣಿ ಸೇರಿದಂತೆ ಅನೇಕ ಕ್ರಿಕೆಟ್ ಪಂದ್ಯಾವಳಿಗಳು, ನಾನಾ ಕ್ರೀಡಾಕೂಟಗಳು ರದ್ದಾಗಿವೆ.
ಪ್ರತಿಷ್ಠಿತ ಕ್ರಿಕೆಟ್ ಲೀಗ್ ಇಂಡಿಯನ್ ಕ್ರಿಕೆಟ್ ಲೀಗ್ ಮೇಲೂ ಕೊರೋನಾ ಕರಿನೆರಳು ಬೀರಿದೆ. ಬಿಸಿಸಿಐ ಐಪಿಎಲ್ ಅನ್ನು ಮುಂದೂಡಿದೆ. ಮಾರ್ಚ್ 29ರಿಂದ ನಡೆಯೇ ಬೇಕಿದ್ದ ಐಪಿಎಲ್ ಸದ್ಯದ ಮಟ್ಟಿಗೆ ಏಪ್ರಿಲ್ 19ರವರೆಗೆ ಮುಂದೂಡಲ್ಪಟ್ಟಿದೆ. ಆದರೆ ಅಂದಿನಿಂದ ಕೂಡ ನಡೆಯುವುದು ಅನುಮಾನ. ಕೊರೋನಾ ಅಟ್ಟಹಾಸದ ಅವಲೋಕನದ ಬಳಿಕ ದಿನಾಂಕ ನಿಗಧಿ ಆಗಲಿದೆ. ಬಹುತೇಕ ಟೂರ್ನಿ ರದ್ದಾಗುವ ಸಾಧ್ಯತೆಯೇ ಹೆಚ್ಚಿದೆ.


ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸುರಕ್ಷತೆಗೆ ಮೊದಲ ಆದ್ಯತೆ ಎಂದಿದ್ದಾರೆ. ಸಾಂಕ್ರಮಿಕ ರೋಗ ಕೊರೋನಾ ಭೀತಿಯಿಂದ ಈ 13ನೇ ಆವೃತ್ತಿಯ ಐಪಿಎಲ್ ರದ್ದಾಗುವ ಸಾಧ್ಯತೆಯೇ ಹೆಚ್ಚಿದೆ. ಒಂದು ವೇಳೆ ಐಪಿಎಲ್ ರದ್ದಾದಲ್ಲಿ ಬಿಸಿಸಿಐಗೆ ಕೋಟಿ ಕೋಟಿ ರೂ ನಷ್ಟವಾಗಲಿದೆ.
ಐಪಿಎಲ್ ರದ್ದಾಗುವುದರಿಂದ ಕಡಿಮೆ ಅಂದ್ರೂ 10 ಕೋಟಿ ರೂ ನಷ್ಟ ಸಂಭವಿಸಲಿದೆ ಎಂದು ವರದಿಯಾಗಿದೆ.
ಒಟ್ಟಿನಲ್ಲಿ ಕೊರೋನಾ ಬೇರೆ ಬೇರೆ ಉದ್ಯಮಕ್ಕೆ ನಷ್ಟ ಉಂಟು ಮಾಡಿದಂತೆ ಕ್ರಿಕೆಟ್ಗೂ ಭಾರಿ ನಷ್ಟ ಉಂಟು ಮಾಡುತ್ತಿದೆ. ಈಗಾಗಲೇ ಐಪಿಎಲ್ ಗುಂಗಿಗೆ ಹೋಗಿದ್ದ ಜನ ಇದೀಗ ಬೇಸರಗೊಂಡಿದ್ದಾರೆ.

Share post:

Subscribe

spot_imgspot_img

Popular

More like this
Related

ಸಮಾಜದಲ್ಲಿ ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ FIR: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ಸಮಾಜದಲ್ಲಿ ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ FIR: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ಮಂಗಳೂರು:...

ನಡು ರಸ್ತೆಯಲ್ಲೇ ಹಲ್ಲೆ; ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಳಿಯನ ಮೇಲೆ ದಾಳಿ!

ನಡು ರಸ್ತೆಯಲ್ಲೇ ಹಲ್ಲೆ; ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಳಿಯನ ಮೇಲೆ...

ಕರ್ನಾಟಕದಲ್ಲಿ ವರುಣಾರ್ಭಟ: ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್​ ಘೋಷಣೆ

ಕರ್ನಾಟಕದಲ್ಲಿ ವರುಣಾರ್ಭಟ: ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್​ ಘೋಷಣೆ ಬೆಂಗಳೂರು: ರಾಜ್ಯದಾದ್ಯಂತ...

ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ!

ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ! ಬೆಂಗಳೂರು:...