ಖ್ಯಾತ ಪತ್ರಕರ್ತ ಅರ್ನಬ್ ಗೋಸ್ವಾಮಿ ಅರೆಸ್ಟ್ ..!

Date:

ಖ್ಯಾತ ಪತ್ರಕರ್ತ ಅರ್ನಬ್ ಗೋಸ್ವಾಮಿ ಅರೆಸ್ಟ್ ..!

ಮುಂಬೈ : ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಖ್ಯಾತ ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರನ್ನು ಬಂಧಿಸಲಾಗಿದೆ.
ಮುಂಬೈಯಲ್ಲಿ ನಡೆದ ಹಠಾತ್ ಹಬೆಳವಣಿಗೆಯಲ್ಲಿ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಯವರನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
53 ವರ್ಷದ ಇಂಟೀರಿಯರ್ ಡಿಸೈನರ್ ಅವರ ಆತ್ಮಹತ್ಯೆಗೆ ಅರ್ನಬ್ ಗೋಸ್ವಾಮಿಯವರು ಪ್ರಚೋದನೆ ನೀಡಿರುವ ಆರೋಪದ ಮೇಲೆ ಮುಂಬೈ ಪೊಲೀಸರು ಅವರನ್ನು ಇಂದು ಬೆಳಗ್ಗೆ ಅವರ ನಿವಾಸದಲ್ಲಿ ಬಂಧಿಸಿದ್ದಾರೆ.
ಸುಮಾರು ಎಂಟು ಪೊಲೀಸ್ ವಾಹನಗಳು, ಕನಿಷ್ಠ 40-50 ಪೊಲೀಸ್ ಸಿಬ್ಬಂದಿ ಅರ್ನಬ್ ಅವರ ಮನೆಯ ಸುತ್ತಲೂ ನೆರೆದಿದ್ದರು. ಅವರಲ್ಲಿ ಹೆಚ್ಚಿನವರು ಶಸ್ತ್ರಸಜ್ಜಿತರಾಗಿದ್ದರು. ಪತ್ರಕರ್ತನ ಬಂಧನಕ್ಕೆ ಇಷ್ಟೆಲ್ಲ ತಯಾರಿ ಮಾಡಿರುವುದು ಮತ್ತು ಅವರನ್ನು ಭಯೋತ್ಪಾದಕನಂತೆ ನಡೆಸಿಕೊಂಡಿರುವುದು ಮಹಾರಾಷ್ಟ್ರ ಸರ್ಕಾರ ಹಾಗೂ ಪೊಲೀಸರ ದೌರ್ಜನ್ಯದ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ವಾಹಿನಿ ಆರೋಪಿಸಿದೆ.

ಕಪಿಲ್ ದೇವ್ ಸಾವಿನ ಸುದ್ದಿ ಸುಳ್ಳು ; ಅವರು ಆರೋಗ್ಯವಾಗಿದ್ದಾರೆ..!

ಈ ಸೋಶಿಯಲ್ ಮೀಡಿಯಾದಲ್ಲಿ ಮಾಡಲು ಕೆಲಸ ಇಲ್ಲದ ಅವಿವೇಕಿಗಳು ಏನೇನೋ ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಲೇ ಇರುತ್ತಾರೆ. ಅವರು ಸತ್ತರಂತೆ ಇವರು ಸತ್ತರಂತೆ ಎಂದು ಸುಳ್ಳು ಸುಳ್ಳು ಪೋಸ್ಟ್ ಗಳನ್ನು ಹಾಕುವುದರಲ್ಲಿ ಕೆಲವು ಕೆಟ್ಟ ಮನಸ್ಥಿತಿಗಳಿಗೆ ಅದೇನು ಸಿಗುತ್ತಾ ಆ ಪರಮಾತ್ಮನೇ ಬಲ್ಲ.
ಈಗ ಅಂತಹದ್ದೇ ಸುದ್ದಿಯೊಂದು ಭಾರತಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ನಾಯಕ ಕಪಿಲ್ ದೇವ್ ಅವರ ಬಗ್ಗೆ ಕೇಳಿಬರುತ್ತಿದೆ.
ಅಂದಹಾಗೆ ಕಳೆದವಾರ ಹೃದಯಾಘಾತಕ್ಕೆ ಒಳಗಾಗಿದ್ದ ಕಪಿಲ್ ದೇವ್ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರು ಗುಣಮುಖರಾಗಿದ್ದಾರೆ.

ನಾವೆಲ್ಲರೂ ಬಹಳ ಬೇಗನೆ ಭೇಟಿಯಾಗುತ್ತೇವೆ ಎಂದು ಆಶಿಸುತ್ತಿದ್ದೇನೆ. ಸಾಧ್ಯವಾದಷ್ಟು ಬೇಗ ನಿಮ್ಮೆಲ್ಲರನ್ನೂ ಭೇಟಿಯಾಗಲು ಪ್ರಯತ್ನಿಸುತ್ತೇನೆ. ನಾವು ವರ್ಷದ ಅಂತ್ಯವನ್ನು ತಲುಪಿದ್ದೇವೆ ಮತ್ತು ಮುಂದಿನ ವರ್ಷಕ್ಕೆ ನಾವು ಉತ್ತಮ ಆರಂಭವನ್ನು ಪಡೆಯುತ್ತೇವೆ ಎಂಬ ವಿಶ್ವಾಸವಿದೆ. ಲವ್ ಯು ಆಲ್” ಎಂದು ಕಪಿಲ್ ದೇವ್ ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದಾರೆ.

SRH- MI : ಟಾಸ್ ಗೆದ್ದ SRH ; MI ಬ್ಯಾಟಿಂಗ್

ಶಾರ್ಜಾ : ಸನ್ ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿ ಆಗುತ್ತಿವೆ. ಟಾಸ್ ಗೆದ್ದ ಸನ್ ರೈಸರ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಎಸ್‌ಆರ್‌ಎಚ್ XI: ಡೇವಿಡ್ ವಾರ್ನರ್ (ನಾಯಕ), ವೃದ್ಧಿಮಾನ್ ಸಹಾ (ವಿಕೆಟ್‌ಕೀಪರ್‌), ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ಪ್ರಿಯಮ್ ಗರ್ಗ್, ಜೇಸನ್ ಹೋಲ್ಡರ್, ಅಬ್ದುಲ್ ಸಮದ್, ರಶೀದ್ ಖಾನ್, ಶಹಬಾಝ್ ನದೀಮ್, ಸಂದೀಪ್ ಶರ್ಮಾ, ಟಿ ನಟರಾಜನ್.

ಎಂಐ XI: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ’ಕಾಕ್ (ವಿಕೆಟ್‌ಕೀಪರ್‌), ಸೂರ್ಯಕುಮಾರ್ ಯಾದವ್, ಸೌರಭ್ ತಿವಾರಿ, ಇಶಾನ್ ಕಿಶನ್, ಕ್ರುಣಾಲ್ ಪಾಂಡ್ಯ, ಕೈರೊನ್ ಪೊಲಾರ್ಡ್, ನೇಥನ್ ಕೌಲ್ಟರ್-ನೈಲ್, ರಾಹುಲ್ ಚಹರ್, ಜೇಮ್ಸ್ ಪ್ಯಾಟಿನ್ಸನ್, ಧವಲ್ ಕುಲಕರ್ಣಿ.

 

ರಾಗಿಣಿ, ಸಂಜನಾಗೆ ಜೈಲೇ ಗತಿ

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ಮಂಗಳವಾರ ತಿರಸ್ಕರಿಸಿದೆ.
ಜಾಮೀನು ಕೋರಿ ರಾಗಿಣಿ, ಸಂಜನಾ ಹಾಗೂ ಇತರೆ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಅರ್ಜಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರ ಪೀಠ, ಅಕ್ಟೋಬರ್ 24 ರಂದು ತೀರ್ಪು ಕಾಯ್ದಿರಿಸಿದ್ದರು.
ಇಂದು ತೀರ್ಪು ಪ್ರಕಟಿಸಿದ್ದು, ಎಲ್ಲಾ ಆರು ಆರೋಪಿಗಳಿಗೆ ಜಾಮೀನು ನಿರಾಕರಿಸಿದ್ದಾರೆ. ಇದರಿಂದ ಜಾಮೀನು ನಿರೀಕ್ಷೆಯಲ್ಲಿದ್ದ ನಟಿಯವರಿಗೆ ತೀವ್ರ ನಿರಾಶೆಯಾಗಿದೆ.
ಕಳೆದ ಎರಡು ತಿಂಗಳಿಂದ ಜೈಲಿನಲ್ಲಿರುವ ನಟಿಮಣಿಯರು ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ.

ನೀವು ಹುಟ್ಟಿದ ತಿಂಗಳ ಆಧಾರದ ಮೇಲೆ ನಿಮ್ಮ ಲವ್ ಮತ್ತು ಮದುವೆ ಲೈಫ್ ಹೇಗಿರುತ್ತದೆ ಅಂತ ತಿಳಿದುಕೊಳ್ಳಲು ಸಾಧ್ಯವಿದೆ.

ಜನವರಿ : ಇವರು ಆಕರ್ಷಣೀಯರು. ಇತರರನ್ನು ಬಹುಬೇಗ ಆಕರ್ಷಿಸುತ್ತಾರೆ. ತಮ್ಮ ಎದುರಿನವರನ್ನು ಅಳೆದು ತೂಗದೆ ಹತ್ತಿರ ಇಟ್ಟುಕೊಳ್ತಾರೆ.‌ ಪ್ರೀತಿ ನೀಡ್ತಾರೆ. ಸಂಗಾತಿಯನ್ನು ತುಂಬಾ ಚೆನ್ನಾಗಿ ನೋಡಿಕೊಳ್ತಾರೆ.

ಫೆಬ್ರವರಿ : ಈ ತಿಂಗಳಲ್ಲಿ ಹುಟ್ಟಿದವರು ತುಂಬಾ ಅಟ್ರಾಕ್ಟೀವ್. ಎಲ್ಲರೊಡನೆ ಅಷ್ಟು ಬೇಗ ಹೊಂದಿಕೊಳ್ಳೋದಿಲ್ಲ. ತುಂಬಾ ರೊಮ್ಯಾಂಟಿಕ್ ವ್ಯಕ್ತಿತ್ವ ಇವರದ್ದು. ಇವರಿಗೆ ಸಂಕೋಚ ತುಂಬಾ ಜಾಸ್ತಿ. ಪ್ರೀತಿಯನ್ನು ಬಹುಬೇಗ ವ್ಯಕ್ತಪಡಿಸಲ್ಲ.

ಮಾರ್ಚ್ : ಈ ತಿಂಗಳಲ್ಲಿ ಹುಟ್ಟಿದವರಿಗೆ ಪ್ರವಾಸ ಅಂದ್ರೆ ತುಂಬಾನೇ ಇಷ್ಟ. ಸ್ವಲ್ಪ ನಾಚಿಕೆ ಸ್ವಭಾವದವರು. ಪ್ರೀತಿಯ ನಂಬಿಕೆಯಲ್ಲಿ ಎತ್ತಿದ ಕೈ.

ಏಪ್ರಿಲ್ : ಈ ಮಾಸದಲ್ಲಿ ಹುಟ್ಟಿದವರು ಡೈನಾಮಿಕ್ ಅಂಡ್ ಅಟ್ರಾಕ್ಟೀವ್. ತನ್ನ ಸಮಸ್ಯೆಗಳನ್ನು ಬಗೆಹರಿಸಲು ಸ್ನೇಹಿತರ ಸಹಾಯ ಪಡೆಯುತ್ತಾರೆ. ಮೂಗಿನ ಮೇಲೆ ಕೋಪ…ಆದರೆ ತುಂಬಾ ಪ್ರೀತಿ ಇರುತ್ತದೆ.

ಮೇ : ಇವರು ಸ್ವಂತ ನಿರ್ಣಯಕ್ಕೆ ಹೆಚ್ಚಿನ ಮಹತ್ವ ನೀಡುವವರು.‌ ಶ್ರಮ ಜೀವಿಗಳು. ಕುಟುಂಬವನ್ನು ತುಂಬಾನೇ ಪ್ರೀತಿಸ್ತಾರೆ.

ಜೂನ್ : ಲವ್ ಗೆ ಹೇಳಿ ಮಾಡಿಸಿದ ವ್ಯಕ್ತಿತ್ವದವರು.‌ ಇವರಿಗೆ ರೊಮ್ಯಾಂಟಿಕ್ ಮೂಡ್ ಜಾಸ್ತಿ. ಬಹು ಬೇಗ ಬೇರೆಯವರ ಜೊತೆ ಹೊಂದಿ‌ಕೊಳ್ತಾರೆ. ಕೋಪ ಮಾತ್ರ ಮೂಗಿನ ತುದಿಯಲ್ಲೇ ಇರುತ್ತದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡ್ತಾರೆ.

ಜುಲೈ : ಈ ತಿಂಗಳಲ್ಲಿ ಹುಟ್ಟಿದವರು ತುಂಬಾನೇ ನಿಯತ್ತಿನ ವ್ಯಕ್ತಿಗಳು. ಇತರರನ್ನು ಬಹುಬೇಗವ ಅರ್ಥ ಮಾಡಿಕೊಳ್ಳುತ್ತಾರೆ. ಆದರೆ, ಇವರನ್ನು ಅರ್ಥ ಮಾಡಿಕೊಳ್ಳೋದು ಕಷ್ಟ. ಇವರು ಮುನಿಸಿಕೊಂಡರೆ ತಕ್ಷಣಕ್ಕೆ ಸಹಜ ಸ್ಥಿತಿಗೆ ಬರೋದು ಕಷ್ಟ.

ಆಗಸ್ಟ್ : ಸಮಾಜದಲ್ಲಿ ತುಂಬಾ ಪ್ರಾಮುಖ್ಯತೆ ಪಡೆದಿರುವ ವ್ಯಕ್ತಿಗಳು. ಸುಲಭದಲ್ಲಿ ಹಣ ಸಂಪಾದಿಸುತ್ತಾರೆ. ಪ್ರೀತಿಸಿದ ಹುಡುಗಿಯ ಬಗ್ಗೆ ತುಂಬಾ ಕೇರ್ ತೆಗೆದುಕೊಳ್ತಾರೆ. ಸ್ವಲ್ಪ ಕಷ್ಟಗಳನ್ನು ಎದುರಿಸಿದರೂ ಧೈರ್ಯ ಜಾಸ್ತಿ.


ಸೆಪ್ಟೆಂಬರ್ : ಈ ತಿಂಗಳಲ್ಲಿ ಜನಿಸಿದವರು ತುಂಬಾ ಬುದ್ಧಿವಂತರು. ಸೂಕ್ಷ್ಮ ಸ್ವಭಾವದವರು. ಇವರು ತಮ್ಮ ಭಾವನೆಗಳನ್ನು ಯಾರ ಬಳಿಯೂ ಹೇಳಿಕೊಳ್ಳೋದಿಲ್ಲ.

ಅಕ್ಟೋಬರ್ : ತುಂಬಾನೇ ಅದೃಷ್ಟವಂತರು. ಬಹುಬೇಗ ಗುರಿ ತಲುಪುತ್ತಾರೆ. ಎಮೋಷನ್ , ಎಲ್ಲರನ್ನು ಪ್ರೀತಿಸುತ್ತಾರೆ. ತಾನು ಇತರರನ್ನು ಪ್ರೀತಿಸಿದಂತೆ ಇತರರೂ ಸಹ ತಮ್ಮನ್ನು ಪ್ರೀತಿಸಬೇಕು ಎಂದು‌ಕೊಳ್ತಾರೆ.

ನವೆಂಬರ್ : ಈ ತಿಂಗಳಲ್ಲಿ ಹುಟ್ಟಿದವರ ವ್ಯಕ್ತಿತ್ವ ಬಹಳ ಸುಂದರವಾಗಿರುತ್ತದೆ. ಇವರು ತುಂಬಾ ಆಕರ್ಷಣೀಯರು. ಎಮೋಷನ್ ಗಳನ್ನು ಕಂಟ್ರೋಲ್ ಮಾಡಿಕೊಳ್ತಾರೆ. ತುಂಬಾ ರೊಮ್ಯಾಂಟಿಕ್ ಮೂಡ್ವ ಹೊಂದಿರುತ್ತಾರೆ.

ಡಿಸೆಂಬರ್ : ಇವರು ಹೆಚ್ಚು ಫಿಲೊಸೊಫಾರ್ಸ್ ಆಗಿರ್ತಾರಂತೆ. ಇವರಲ್ಲಿ ಸಹನೆ ತುಂಬಾ ಕಡಿಮೆ. ಹೊಗಳಿಕೆಯನ್ನು ಇಷ್ಟ ಪಡ್ತಾರೆ. ಹೊಗಳಿಕೆ ಇದ್ದರೆ ಮಾತ್ರ ಕೆಲಸ ಸಾಧ್ಯ. ನೆಗಿಟೀವ್ ಆಲೋಚನೆಗಳಿಂದಲೇ ಇರುತ್ತಾರೆ. ಇವರೊಂದಿಗೆ ಹೊಂದಿಕೊಳ್ಳೋದು ಕಷ್ಟ.

ಸಂಬಂಧಗಳಲ್ಲಿ ಜಗಳ ಕಾಮನ್ – ಅದಕ್ಕೆ ಪರಿಹಾರ?

ನೀವು ಯಾವ್ದೇ ಸಂಬಂಧವನ್ನು ತೆಗೆದುಕೊಳ್ಳಿ ಕೆಲವೊಮ್ಮೆ ಭಿನ್ನಾಭಿಪ್ರಾಯ , ಜಗಳ ಇದ್ದಿದ್ದೇ. ಪತಿ- ಸತಿಗಳ ನಡುವೆ ಕೂಡ ಜಗಳ ಕಾಮನ್. ಕೆಲವರು ನಾಲ್ಕು ಗೋಡೆಗಳ ನಡುವೆ ಜಗಳವನ್ನು ತಣ್ಣಗಾಗಿಸಿಕೊಳ್ಳುತ್ತಾರೆ. ಕೆಲವರ ಜಗಳ ಬೀದಿ ರಂಪಾಟವಾಗುತ್ತದೆ. ಜಗಳ ಇರಲಿ .ಅದು ಬೀದಿಗೆ ಬರಬಾರದು.. ಪರಸ್ಪರ ದೂಷಣೆ, ಮಾತು – ತಿರುಗೇಟು ಸಹಜ. ಅದು ಇಬ್ಬರ ನಡುವೆಯೇ ಬಗೆಹರಿಯಲಿ.

ಸಂಗಾತಿ ಜತೆಗೆ ಹೀಗೆ ಮಾತನಾಡುತ್ತಿರುವ ವೇಳೆ ನೀವು ಅವರಿಗೆ ಪ್ರತೀ ಸಲ ನೀವು ದೂಷಿಸಲ್ಪಡುತ್ತಿದ್ದೀರಿ ಎಂದು ಹೇಳಿ. ಇದರ ಬಗ್ಗೆ ಮಾತನಾಡಲು ನೀವು ಯಾವುದೇ ಹಿಂಜರಿಕೆ ತೋರಿಸಬೇಡಿ.

ಇಂತಹ ಪರಿಸ್ಥಿತಿ ಬಗ್ಗೆ ಮಾತನಾಡದೆ ಇದ್ದರೆ ಆಗ ಸಂಬಂಧದಲ್ಲಿ ಇದು ಹಾಗೆ ಉಳಿದುಕೊಳ್ಳುವುದು. ಸಂಗಾತಿಯು ನಿಮ್ಮ ಭಾವನೆಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಇದೇ ವೇಳೆ ಸಂಗಾತಿಯು ಏನು ಹೇಳುತ್ತಿರುವರು ಎಂದು ತಿಳಿಯಿರಿ ಹಾಗೂ ನಿಮ್ಮಲ್ಲಿನ ತಪ್ಪಿದ್ದರೆ, ನಡವಳಿಕೆ ಬದಲಾಯಿಸಿಕೊಳ್ಳಿ.

ಸಂಗಾತಿ ತುಂಬಾ ಒರಟಾಗಿ ಸಮಸ್ಯೆಯನ್ನು ಇತ್ಯರ್ಥ ಮಾಡಿದರೆ, ಅದು ಸಮಸ್ಯೆಯಾಗುವುದು. ಹೀಗಾಗಿ ಸಂಗಾತಿಗೆ ಸ್ವಲ್ಪ ಸೌಮ್ಯ ರೀತಿಯಿಂದ ಸಮಸ್ಯೆಯನ್ನು ತಿಳಿಸಲು ಹೇಳಿ.

ನೀವು ಯಾವಾಗಲೂ ದೂಷಿಸಲ್ಪಡುತ್ತಿದ್ದೀರಿ ಎಂದಾಗಿದ್ದರೆ, ಆಗ ಖಂಡಿತವಾಗಿಯೂ ನಿಮ್ಮಲ್ಲಿ ಏನೋ ಸಮಸ್ಯೆಯಿದೆ ಎಂದು ಹೇಳಬಹುದು. ಕೆಲವೊಂದು ಸಲ ವಿಚಾರಗಳು ಮೊದಲ ಸಲ ಬರುವುದು ಮತ್ತು ಇದನ್ನು ತಪ್ಪು ಎಂದು ಹೇಳಬಹುದು.

ಸಂಗಾತಿಯು ಹೇಳುವುದಕ್ಕಿಂತ ವಿರುದ್ಧವಾಗಿ ವರ್ತಿಸುತ್ತಿದ್ದೀರಿ ಎಂದಾಗಿದ್ದರೆ, ಆಗ ಇದನ್ನು ತುಂಬಾ ತಾಳ್ಮೆಯಿಂದ ಹೇಳುವಂತೆ ಹೇಳಿ. ಇದರ ಬಗ್ಗೆ ನೀವಿಬ್ಬರು ಮಾತನಾಡಿ.

ಛೇ, ಪತಿಯು ಪ್ರತೀ ಸಲ ತನ್ನನ್ನೇ ಯಾಕೆ ದೂಷಿಸುತ್ತಿರುವವರು ಎಂದು ನೀವು ಆಲೋಚನೆ ಮಾಡಬೇಕಾಗಿದೆ. ಇದು ನಿಮ್ಮನ್ನೇ ದೂಷಿಸುತ್ತಿರುವರೇ ಅಥವಾ ಬೇರೆ ವಿಚಾರವೇ ಎಂದು ತಿಳಿಯಿರಿ. ದೂಷಣೆ ಎನ್ನುವುದು ನೋವಿನ ಸಂಕೇತವಾಗಿರುವುದು.

ಯಾವುದೇ ವಿಚಾರಕ್ಕೆ ನೀವು ಕಾರಣವಲ್ಲದೆ ಇದ್ದರೆ ಆಗ ನಿಜವಾಗಿಯೂ ನಿಮ್ಮನ್ನು ದೂಷಿಸಲಾಗುತ್ತಿಲ್ಲ ಎಂದು ತಿಳಿಯಿರಿ. ಆಗ ಬೇರೆಯವರು ಇದರ ಬಗ್ಗೆ ನಾಚಿಕೆ ಪಡಬೇಕು. ನೀವು ಇದರ ಬಗ್ಗೆ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ಸಂಗಾತಿಯನ್ನು ಹೆಚ್ಚು ಪ್ರೀತಿಸಿ ಮತ್ತು ಅವರಿಗೆ ವಿಧೇಯರಾಗಿರಿ.

ಸಮಸ್ಯೆ ಬಂದಾಗ ಇದರ ಬಗ್ಗೆ ಏನು ಮಾಡಬೇಕು ಎಂದು ಕೇಳಿ. ನಿಮ್ಮ ಮೇಲೆ ದೂಷಣೆ ಮಾಡುತ್ತಿರುವಾಗ ಅವರ ಕೋಪವನ್ನು ಬೇರೆ ಕಡೆಗೆ ತಿರುಗಿಸಿ.

ನಿಮ್ಮ ಮೇಲೆ ದೂಷಣೆ ಮಾಡುವ ಬದಲು ಇದಕ್ಕೆ ಏನಾದರೂ ಪರಿಹಾರವಿದೆಯಾ ಎಂದು ನೋಡಲು ಪ್ರಯತ್ನಿಸಿ. ಇದು ಒಳ್ಳೆಯ ತಂತ್ರವಾಗಲಿದೆ.

ನಿಮ್ಮ ಕಡೆಯಿಂದ ಎಲ್ಲವೂ ಸರಿಯಾಗಿಯೇ ಇದೆಯಾ ಎಂದು ನೀವು ತಿಳಿಯಿರಿ. ನಿಮ್ಮಿಂದ ಜವಾಬ್ದಾರಿಯಲ್ಲಿ ಯಾವುದೇ ಕೊರತೆ ಆಗುತ್ತಿದೆಯಾ ಎಂದು ಗಮನಿಸಿ. ಇದರಿಂದ ನಿಮ್ಮ ತಪ್ಪು ಎಷ್ಟಿದೆ ಮತ್ತು ಅದೇ ಸಂಗಾತಿಯ ತಪ್ಪು ಎಷ್ಟಿದೆ ಎಂದು ತಿಳಿಯಲು ನಿಮಗೆ ಸಾಧ್ಯವಾಗಲಿದೆ.

ಆದರೆ ನೀವು ಇದನ್ನು ಸರಿಯಾಗಿ ವಿಶ್ಲೇಷಣೆ ಮಾಡಿದರೆ ತುಂಬಾ ಒಳ್ಳೆಯದು. ತಪ್ಪು ಒಂದು ವೇಳೆ ನಿಮ್ಮದೇ ಆಗಿದ್ದರೆ, ಆಗ ನೀವು ಸಂಬಂಧವನ್ನು ಉಳಿಸುವ ದೃಷ್ಟಿಯಿಂದ ಇದರ ಜವಾಬ್ದಾರಿ ತೆಗೆದುಕೊಳ್ಳಿ.

ನಿಮ್ಮ ಜವಾಬ್ದಾರಿ ತೆಗೆದುಕೊಂಡ ಬಳಿ ಸಂಗಾತಿಗೆ ಅವರ ಪಾಲಿನ ಜವಾಬ್ದಾರಿ ತೆಗೆದುಕೊಳ್ಳಲು ಹೇಳಿ. ಸಂಬಂಧವೆನ್ನುವುದು ಒಂದು ತಂಡವಿದ್ದಂತೆ ಮತ್ತು ತಂಡವಾಗಿ ಇಬ್ಬರು ಪ್ರಯತ್ನಿಸಿದೆ ಇದ್ದರೆ ಆಗ ಖಂಡಿತ

 

Share post:

Subscribe

spot_imgspot_img

Popular

More like this
Related

ಹಿರಿಯ ನಟ, ನಿರ್ದೇಶಕ,ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ!

ಹಿರಿಯ ನಟ, ನಿರ್ದೇಶಕ,ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ನಿಧನ! ಹೃದಯಾಘಾತದಿಂದ ಹಿರಿಯ ರಂಗಭೂಮಿ...

ಕರ್ನಾಟಕದಲ್ಲಿ 6 ದಿನಗಳ ಭಾರೀ ಮಳೆಯ ಮುನ್ಸೂಚನೆ: ಕರಾವಳಿಯಲ್ಲಿ ಗಾಳಿ, ಮಳೆ ಅಬ್ಬರ

ಕರ್ನಾಟಕದಲ್ಲಿ 6 ದಿನಗಳ ಭಾರೀ ಮಳೆಯ ಮುನ್ಸೂಚನೆ: ಕರಾವಳಿಯಲ್ಲಿ ಗಾಳಿ, ಮಳೆ...

ಹಬ್ಬದ ಹೂವಿನ ಮರುಬಳಕೆ: ಎಸೆಯುವ ಬದಲು ಹೇಗೆಲ್ಲಾ ಮರು ಬಳಸಬಹುದು ಗೊತ್ತಾ..?

ಹಬ್ಬದ ಹೂವಿನ ಮರುಬಳಕೆ: ಎಸೆಯುವ ಬದಲು ಹೇಗೆಲ್ಲಾ ಮರು ಬಳಸಬಹುದು ಗೊತ್ತಾ..? ದಸರಾ,...

ನವರಾತ್ರಿ ಎಂಟನೇ ದಿನ – ಮಹಾಗೌರಿ !

ನವರಾತ್ರಿ ಎಂಟನೇ ದಿನ – ಮಹಾಗೌರಿ ! ದೇವಿಯ ಹಿನ್ನಲೆ ನವರಾತ್ರಿಯ ಎಂಟನೇ ದಿನ...