ಗಂಡ ತುಂಬಾ ಲವ್ & ಕೇರ್ ತೋರ್ತಾನೆ ಅಂತ ಡಿವೋರ್ಸ್ ಕೇಳಿದ ಪುಣ್ಯಾತ್ಗಿತ್ತಿ..!

Date:

ಗಂಡ ದಿನ ಕುಡ್ಕೊಂಡು ಬಂದು ಹೊಡೀತಾನೆ.. ತುಂಬಾ ಹಿಂಸೆ ಕೊಡ್ತಾನೆ ಅಂತಲೋ, ಗಂಡನ ದುಡಿಮೆ ಸಂಸಾರಕ್ಕೆ ಸಾಕಾಗ್ತಿಲ್ಲ ಅಂತಾನೋ, ನಮ್ಮಿಬ್ರು ನಡುವೆ ಹೊಂದಾಣಿಕೆಯೇ ಬರ್ತಿಲ್ಲ ಅಂತಾನೋ ಅಥವಾ ಆತ ಬೇರೆಯವರೊಂದಿಗೆ ಅಕ್ರಮ ಸಂಬಂಧ ಇಟ್ಕೊಂಡಿದ್ದಾನೆ ಅಂತಲೋ ಮಹಿಳೆಯರು ವಿಚ್ಚೇದನ ಬಯಸುವುದು ಕಾಮನ್..! ಇನ್ನೂ ಅಮ್ಮಮ್ಮ ಅಂದ್ರೆ ತನ್ನ ಗಂಡನಿಗೆ ಪುರುಷತ್ವ ಇಲ್ಲ.. ಆತನಿಂದ ಲೈಂಗಿಕ ಸುಖ ಸಿಕ್ತಲ್ಲ ಅಂತ ಕೂಡ ಡಿವೋರ್ಸ್ ಪಡೆಯುವುದು ಸಹಜ..! ಆದರೆ, ಇಲ್ಲೊಬ್ಬಳು ಪುಣ್ಯಾತ್ಗಿತ್ತಿ ತನ್ನ ಗಂಡ ತುಂಬಾ ಪ್ರೀತಿಸ್ತಾನೆ.. ತುಂಬಾ ಅಂದ್ರೆ ತುಂಬಾ ಕಾಳಜಿ ತೋರ್ತಾನೆ ಎಂದೋ ವಿಚ್ಚೇದನ ಕೇಳಿ ಕೋರ್ಟ್ ಮೆಟ್ಟಿಲೇರಿದ್ದಾಳೆ..!


ಇದೇನ್ ನಿಜನಾ..? ಆಕೆಗೇನಾಗಿದೆ ಎಂದು ನಾವು-ನೀವು ನಮ್ ನಮ್ಮಲ್ಲಿ ಪ್ರಶ್ನೆ ಕೇಳಿಕೊಳ್ಳಬೇಕಷ್ಟೇ..! ಇದು ವಿಚಿತ್ರ ಸತ್ಯ.. ತನ್ನ ಗಂಡನ ಜೊತೆ ಸುಖವಾಗಿ ಸಂಸಾರ ನಡೆಸುತ್ತಿದ್ದೀನಿ, ಯಾವ್ದೇ ತೊಂದರೆ ಇಲ್ಲ ಎಂದು ಮಹಿಳೆ ವಿಚ್ಚೇದನ ಪಡೆಯಲು ಮುಂದಾಗಿದ್ದಾಳೆ..! ಇದು ನಡೆದಿರುವುದು ದುಬೈನಲ್ಲಿ.
ಒಂದು ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಜೋಡಿಯ ಕಥೆ ಇದು. ಗಂಡ ಅತಿಯಾಗಿ ಪ್ರೀತಿ ಮಾಡುತ್ತಾನೆ. ತುಂಬಾ ಕಾಳಜಿ ತೋರುತ್ತಾನೆ. ಅದನ್ನು ನಾನು ಸಹಿಸಿಕೊಳ್ಳಲಾರೆ. ನನಗದು ಸಾಧ್ಯವಾಗುತ್ತಿಲ್ಲ ವಿಚ್ಚೇದನ ಕೊಡಿ ಎಂದು ಮಹಿಳೆ ಕೋರ್ಟ್ ಮೊರೆ ಹೋಗಿದ್ದಾರೆ. ನ್ಯಾಯಾಧೀಶರು ಅಚ್ಚರಿಗೊಂಡು ಅಲ್ಲಮ್ಮಾ.. ಬೇರೆ ಏನಾದರೂ ಕಾರಣ ಇದೆಯಾ? ಸರಿಯಾಗಿ ಹೇಳಮ್ಮ..ಎಂದು ಕೇಳಿದ್ರೆ..ಇಲ್ಲ, ಇಷ್ಟೇ ಕಾರಣ..ನನ್ನ ಗಂಡ ನನ್ನ ಜೊತೆ ಒಂದೇ ಒಂದು ದಿನ ಜಗಳ ಆಡಿಲ್ಲ. ನನ್ನ ವಿರುದ್ಧ ಮಾತಾಡಲ್ಲ.. ಆಗಾಗ ಗಿಫ್ಟ್ ತಂದುಕೊಡ್ತಾರೆ. ಅವರ ಜೊತೆ ಜಗಳ ಮಾಡಲು ಅವಕಾಶವೇ ಸಿಗಲ್ಲ..ನಂಗೆ ನನ್ನ ಲೈಫ್​ನಲ್ಲಿ ವಿವಾದ ಇಲ್ಲದೇ ಇರುವುದು ಇಷ್ಟವಿಲ್ಲ. ಅವರು ಮನೆ ಕೆಲಸ ಅಡುಗೆ ಕೆಲಸದಲ್ಲೂ ಸಹಾಯ ಮಾಡ್ತಾರೆ. ಆದ್ದರಿಂದ ಆ ವಿಷಯದಲ್ಲೂ ಜಗಳ ಆಡಲು ಆಗಲ್ಲ ಅಂತ ಮಹಿಳೆ ಡಿವೋರ್ಸ್​ಗೆ ಅಪ್ಲೇ ಮಾಡಿದ್ದಾರೆ..!
ಈ ಬಗ್ಗೆ ಪತಿರಾಯ ನಾನು ಉತ್ತಮ ಗಂಡನಾಗಲು ಪ್ರಯತ್ನಿಸಿದೆನಷ್ಟೇ.. ಡಿವೋರ್ಸ್ ಅರ್ಜಿ ವಾಪಸ್ ಪಡಿ ಎಂದು ಹೆಂಡ್ತಿಗೆ ರಿಕ್ವೆಸ್ಟ್ ಮಾಡಿದ್ದಾನೆ. ಸದ್ಯ ಈ ನ್ಯೂಸ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ.

Share post:

Subscribe

spot_imgspot_img

Popular

More like this
Related

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಬೆಂಗಳೂರು: ನಿಷ್ಠಾವಂತ ರಾಜಕಾರಣಿಯಾಗಿದ್ದ...

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌ ಬೆಂಗಳೂರು:...

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್...

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ ವಿಜಯಪುರ: ವಿಜಯಪುರ ನಗರದಲ್ಲಿ ಮತ್ತೊಮ್ಮೆ ಭೂಕಂಪನದ...