ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರವನ್ನು ಮಾಡುತ್ತಿರುವ ದರ್ಶನ್ ಮಂಡ್ಯದಲ್ಲಿ ವಿಸೇಷ ಹೇಳಿಕೆಯೊಂದನ್ನ ನೀಡಿದ್ದಾರೆ. ಹೌದು ಪ್ರಚಾರದ ಸಮಯದಲ್ಲಿ ಮಾತನಾಡಿದ ಅವರು ದರ್ಶನ್ ಅಲ್ಲ ದರ್ಶನ್ ಅಂತವರು ಯಾರೇ ಬಂದರೂ ಇನ್ನೂ ನೂರು ವರ್ಷಗಳ ಕಾಲ ಈ ನಾಲ್ಕು ಹೆಸರುಗಳನ್ನು ಅಳಿಸುವುದಕ್ಕೆ ಯಾವುದೇ ಕಾರಣಕ್ಕೂ ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇನ್ನೂ ನೂರು ವರ್ಷವಾದರೂ ಡಾ.ರಾಜ್ ಕುಮಾರ್, ಶಂಕರ್ ನಾಗ್, ವಿಷ್ಣು ವರ್ಧನ್ ಮತ್ತು ಅಂಬರೀಶ್ ಹೆಸರು ಅಳಿಸುವುದಕ್ಕೆ ಸಾಧ್ಯವಿಲ್ಲ. ಕೆಲವರು ಜನರಿಗೆ ಏನಾದರೂ ಕೊಟ್ಟು ಏನು ಬೇಕಾದರೂ ಪಡೆದುಕೊಳ್ಳಬಹುದು ಆದರೆ ನಿಮ್ಮ ಮನಸ್ಸಿನಲ್ಲಿರುವ ಅಭಿಮಾನವನ್ನು, ಪ್ರೀತಿಯನ್ನು, ಅಭಿಮಾನವನ್ನು ಅಳಿಸಲು ಯಾವುದೇ ಕಾರಣಕ್ಕೂ ಯಾರಿಂದಲೂ ಸಾಧ್ಯವಿಲ್ಲ. ಎಂದು ಹೇಳುವ ಮೂಲಕ ಅಂಬರೀಷ್ ಅಪ್ಪಾಜಿಗೆ ಅವಕಾಶ ಕೊಟ್ಟಿದ್ರಿ. ಈಗ ಸುಮಲತಾ ಅಮ್ಮನಿಗೂ ಅವಕಾಶ ಕೊಡಿ ಎಂದು ಮತದಾರರಲ್ಲಿ ಕೇಳಿಕೊಂಡಿದ್ದಾರೆ.
ಸುಮಲತಾ ಅಮ್ಮನ ಕ್ರಮಸಂಖ್ಯೆ 20 ಅವರಿಗೆ ವೋಟ್ ಹಾಕಿ ನಿಮ್ಮ ಸೇವೆ ಮಾಡುವ ಅವಕಾಶ ಮಾಡಿಕೊಡಿ ನಿಮ್ಮ ಪ್ರೀತಿ ಸದಾ ಅವರ ಮೇಲೆ ಇರಲಿ ನಾನು ಇನ್ನೊಂದು ಸಲ ಹೇಳುತ್ತೇನೆ ಕ್ರಮ ಸಂಖ್ಯೆ 20 ಯಾಕಂದ್ರೆ ನಂಬರ್ ಗಳಲ್ಲಿ ಗೊಂದಲ ಇದೆ. ಹೀಗಾಗಿ ಯುವಕರು ವಯಸ್ಸಾದವರನ್ನು ಕರೆದುಕೊಂಡು ಹೋಗಿ ಮತ ಹಾಕಿಸಬೇಕು ದಯವಿಟ್ಟು ಅಮ್ಮನಿಗೆ ಮತ ನೀಡಿ ಎಂದು ದರ್ಶನ್ ಕೈ ಮುಗಿದು ಮನವಿ ಮಾಡಿಕೊಂಡಿದರು