ಟಗರು ನಂತ್ರ ಮತ್ತೆ ಒಂದಾಗ್ತಿದ್ದಾರೆ ಶಿವಣ್ಣ – ಡಾಲಿ ಧನಂಜಯ್..! ಇದೇ ನೋಡಿ ಹೊಸ ಸಿನಿಮಾ..!

Date:

ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್​​ ಕುಮಾರ್ ಅಭಿನಯದ ಟಗರು ಸಿನಿಮಾ ರಿಲೀಸ್ ಆಗಿ 2 ವರ್ಷ ಕಳೆದರೂ ಆ ಸಿನಿಮಾದ ಗುಟುರು ಇನ್ನೂ ನಿಂತಿಲ್ಲ. ದುನಿಯಾ ಸೂರಿ ಆ್ಯಕ್ಷನ್ ಕಟ್ ಹೇಳಿದ್ದ ಟಗರು ಸಿನಿಮಾ ಅಂದ ಕೂಡಲೇ ನೆನಪಾಗುವುದು ಬರೀ ಶಿವಣ್ಣ ಮಾತ್ರವಲ್ಲ.. ಶಿವಣ್ಣ ಜೊತೆ ಗುದ್ದಾಡಿದ ವಿಲನ್ ಧನಂಜಯ್ ಅಲಿಯಾಸ್ ಡಾಲಿ ಧನಂಜಯ್ ಕೂಡ! ಈ ಟಗರು ಸಿನಿಮಾ ಬಳಿಕ ನಟ ಧನಂಜಯ್ ಡಾಲಿ ಧನಂಜಯ್ ಎಂದೇ ಜನಜನಿತರಾಗಿದ್ದಾರೆ. ಅಲ್ಲದೆ ಆ ಸಿನಿಮಾ ಅವರಿಗೆ ದೊಡ್ಡ ಬ್ರೇಕ್ ಕೊಟ್ಟ ಸಿನಿಮಾ ಕೂಡ..
ಟಗರು ಸಿನಿಮಾದಲ್ಲಿನ ಡಾಲಿ ಧನಂಜಯ್ ನಟನೆ, ಮ್ಯಾನರಿಸಂಗೆ ಚಿತ್ರರಸಿಕರು, ಚಿತ್ರ ವಿಮರ್ಶಕರೂ ಕಳೆದೋಗಿದ್ದಾರೆ. ಆ ಮಟ್ಟಿಗೆ ಡಾಲಿಯಾಗಿ ಸೂಪರ್ ಡೂಪರ್ ಪರ್ಫಾರ್ಮ್​ ಮಾಡಿದ್ದರು ಧನಂಜಯ್. ಶಿವಣ್ಣ ಮತ್ತು ಧನಂಜಯ್ ಕಾಂಬಿನೇಷನ್​ಗೆ ಫಿದಾ ಆಗಿರುವ ಅಭಿಮಾನಿಗಳು ಮತ್ತೆ ಶಿವಣ್ಣ, ಧನಂಜಯ್ ಯಾವ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಾರೆ ಎಂದು ಕಾಯುತ್ತಿದ್ದಾರೆ. ಆ ದಿನವೂ ಈಗ ಹತ್ತಿರವಾಗಿದೆ..!
ತಮಿಳಲ್ಲಿ ಗೋಲಿ ಸೋಡ , 10 ಎನ್ರಾದುಕುಲ್ಲ ಮೊದಲಾದ ಸಿನಿಮಾಗಳನ್ನು ನಿರ್ದೇಶಿಸಿರುವ ಡೈರೆಕ್ಟರ್ ಕಮ್ ಛಾಯಾಗ್ರಾಹಕ ವಿಜಯ್ ಮಿಲ್ಟನ್ ಶಿವಣ್ಣ ಮತ್ತು ಡಾಲಿ ಧನಂಜಯ್​ ಅವರೊಡನೆ ಸಿನಿಮಾ ಮಾಡೋ ಪ್ಲ್ಯಾನ್ ಮಾಡಿದ್ದಾರೆ. ಸದ್ಯ ಧ್ರುವಾ ಸರ್ಜಾ ನಟನೆಯ ಪೊಗರು ಸಿನಿಮಾದಲ್ಲಿ ಛಾಯಾಗ್ರಾಹಕರಾಗಿ ಕೆಲಸ ವಿಜಯ್ ಮಿಲ್ಟನ್ ಈ ಸಿನಿಮಾದ ಕೆಲಸದ ನಂತರ ಶಿವಣ್ಣ – ಧನಂಜಯ್ ಸಿನಿಮಾದ ಕೆಲಸ ಕೈಗೆತ್ತಿಕೊಳ್ಳಲಿದ್ದಾರಂತೆ.
ದ್ರೋಣ ಸಿನಿಮಾ ರಿಲೀಸ್​ ಗೆ ಕಾಯುತ್ತಿರೋ ಶಿವಣ್ಣ ಭಜರಂಗಿ -2ನಲ್ಲಿ ಬ್ಯುಸಿ ಇದ್ದಾರೆ. ನಂತರ ರವಿ ಅರಸು ನಿರ್ದೇಶನದ ಆರ್ ಡಿ ಎಕ್ಸ್​ ಸಿನಿಮಾದಲ್ಲಿ ತೊಡಗಿಕೊಳ್ಳಲಿದ್ದಾರೆ. ಆ ಬಳಿಕ ವಿಜಯ್ ನಿರ್ದೇಶನದ ಸಿನಿಮಾ!

Share post:

Subscribe

spot_imgspot_img

Popular

More like this
Related

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್ ತಿರಗೇಟು

ನವಿಲು ನೋಡಿ ಕೆಂಬೂತ ಪುಕ್ಕ ಕಿತ್ತುಕೊಂಡಂತೆ ಆಡಬೇಡಿ: ಛಲವಾದಿಗೆ ಡಿ.ಕೆ. ಶಿವಕುಮಾರ್...

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್’ಗೆ HDK ಪತ್ರ

ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು: ಧರ್ಮೇಂದ್ರ ಪ್ರಧಾನ್'ಗೆ HDK ಪತ್ರ ನವದೆಹಲಿ:...

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು!

ಪಬ್‌ನಲ್ಲಿ ಆರ್ಯನ್ ಖಾನ್ ದುರ್ವರ್ತನೆ ಆರೋಪ: ತನಿಖೆ ಮುಂದುವರಿಸಿದ ಪೊಲೀಸರು! ಬೆಂಗಳೂರು: ಬಾಲಿವುಡ್...

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ

ಕರ್ನಾಟಕದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ ಬೆಂಗಳೂರು:...