ಟಗರು ನಂತ್ರ ಮತ್ತೆ ಒಂದಾಗ್ತಿದ್ದಾರೆ ಶಿವಣ್ಣ – ಡಾಲಿ ಧನಂಜಯ್..! ಇದೇ ನೋಡಿ ಹೊಸ ಸಿನಿಮಾ..!

Date:

ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜ್​​ ಕುಮಾರ್ ಅಭಿನಯದ ಟಗರು ಸಿನಿಮಾ ರಿಲೀಸ್ ಆಗಿ 2 ವರ್ಷ ಕಳೆದರೂ ಆ ಸಿನಿಮಾದ ಗುಟುರು ಇನ್ನೂ ನಿಂತಿಲ್ಲ. ದುನಿಯಾ ಸೂರಿ ಆ್ಯಕ್ಷನ್ ಕಟ್ ಹೇಳಿದ್ದ ಟಗರು ಸಿನಿಮಾ ಅಂದ ಕೂಡಲೇ ನೆನಪಾಗುವುದು ಬರೀ ಶಿವಣ್ಣ ಮಾತ್ರವಲ್ಲ.. ಶಿವಣ್ಣ ಜೊತೆ ಗುದ್ದಾಡಿದ ವಿಲನ್ ಧನಂಜಯ್ ಅಲಿಯಾಸ್ ಡಾಲಿ ಧನಂಜಯ್ ಕೂಡ! ಈ ಟಗರು ಸಿನಿಮಾ ಬಳಿಕ ನಟ ಧನಂಜಯ್ ಡಾಲಿ ಧನಂಜಯ್ ಎಂದೇ ಜನಜನಿತರಾಗಿದ್ದಾರೆ. ಅಲ್ಲದೆ ಆ ಸಿನಿಮಾ ಅವರಿಗೆ ದೊಡ್ಡ ಬ್ರೇಕ್ ಕೊಟ್ಟ ಸಿನಿಮಾ ಕೂಡ..
ಟಗರು ಸಿನಿಮಾದಲ್ಲಿನ ಡಾಲಿ ಧನಂಜಯ್ ನಟನೆ, ಮ್ಯಾನರಿಸಂಗೆ ಚಿತ್ರರಸಿಕರು, ಚಿತ್ರ ವಿಮರ್ಶಕರೂ ಕಳೆದೋಗಿದ್ದಾರೆ. ಆ ಮಟ್ಟಿಗೆ ಡಾಲಿಯಾಗಿ ಸೂಪರ್ ಡೂಪರ್ ಪರ್ಫಾರ್ಮ್​ ಮಾಡಿದ್ದರು ಧನಂಜಯ್. ಶಿವಣ್ಣ ಮತ್ತು ಧನಂಜಯ್ ಕಾಂಬಿನೇಷನ್​ಗೆ ಫಿದಾ ಆಗಿರುವ ಅಭಿಮಾನಿಗಳು ಮತ್ತೆ ಶಿವಣ್ಣ, ಧನಂಜಯ್ ಯಾವ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಾರೆ ಎಂದು ಕಾಯುತ್ತಿದ್ದಾರೆ. ಆ ದಿನವೂ ಈಗ ಹತ್ತಿರವಾಗಿದೆ..!
ತಮಿಳಲ್ಲಿ ಗೋಲಿ ಸೋಡ , 10 ಎನ್ರಾದುಕುಲ್ಲ ಮೊದಲಾದ ಸಿನಿಮಾಗಳನ್ನು ನಿರ್ದೇಶಿಸಿರುವ ಡೈರೆಕ್ಟರ್ ಕಮ್ ಛಾಯಾಗ್ರಾಹಕ ವಿಜಯ್ ಮಿಲ್ಟನ್ ಶಿವಣ್ಣ ಮತ್ತು ಡಾಲಿ ಧನಂಜಯ್​ ಅವರೊಡನೆ ಸಿನಿಮಾ ಮಾಡೋ ಪ್ಲ್ಯಾನ್ ಮಾಡಿದ್ದಾರೆ. ಸದ್ಯ ಧ್ರುವಾ ಸರ್ಜಾ ನಟನೆಯ ಪೊಗರು ಸಿನಿಮಾದಲ್ಲಿ ಛಾಯಾಗ್ರಾಹಕರಾಗಿ ಕೆಲಸ ವಿಜಯ್ ಮಿಲ್ಟನ್ ಈ ಸಿನಿಮಾದ ಕೆಲಸದ ನಂತರ ಶಿವಣ್ಣ – ಧನಂಜಯ್ ಸಿನಿಮಾದ ಕೆಲಸ ಕೈಗೆತ್ತಿಕೊಳ್ಳಲಿದ್ದಾರಂತೆ.
ದ್ರೋಣ ಸಿನಿಮಾ ರಿಲೀಸ್​ ಗೆ ಕಾಯುತ್ತಿರೋ ಶಿವಣ್ಣ ಭಜರಂಗಿ -2ನಲ್ಲಿ ಬ್ಯುಸಿ ಇದ್ದಾರೆ. ನಂತರ ರವಿ ಅರಸು ನಿರ್ದೇಶನದ ಆರ್ ಡಿ ಎಕ್ಸ್​ ಸಿನಿಮಾದಲ್ಲಿ ತೊಡಗಿಕೊಳ್ಳಲಿದ್ದಾರೆ. ಆ ಬಳಿಕ ವಿಜಯ್ ನಿರ್ದೇಶನದ ಸಿನಿಮಾ!

Share post:

Subscribe

spot_imgspot_img

Popular

More like this
Related

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..!

ಸಿನಿಮಾ ಟಿಕೆಟ್ 200 ರೂಪಾಯಿಗೆ ನಿಗದಿಪಡಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ..! ಬೆಂಗಳೂರು: ಮಲ್ಟಿಪ್ಲೆಕ್ಸ್...

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು

ಮಹೇಶ್ ಶೆಟ್ಟಿ ತಿಮರೋಡಿ 1 ವರ್ಷ ಗಡಿಪಾರು ಮಂಗಳೂರು: ರಾಷ್ಟ್ರೀಯ ಹಿಂದೂ ಜಾಗರಣ...

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....