ತಂಡದಲ್ಲಿ ಪಂತ್ ಇದ್ದರೂ ಕನ್ನಡಿಗ ರಾಹುಲ್ ಕೀಪಿಂಗ್ ಮಾಡಿದ್ದು ಏಕೆ ಗೊತ್ತಾ?

admin
By admin
1 Min Read

2019ರಲ್ಲಿ ಇಂಗ್ಲೆಂಡ್​ನಲ್ಲಿ ನಡೆದ ಏಕದಿನ ವಿಶ್ವಕಪ್ ಬಳಿಕ ಮಾಜಿ ಕ್ಯಾಪ್ಟನ್, ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ತಂಡದಿಂದ ದೂರ ಉಳಿದ ಮೇಲೆ ಖಾಯಂ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಆಗಿ ಮೂರೂ ಮಾದರಿಯ ಕ್ರಿಕೆಟ್​ನಲ್ಲಿ ಸ್ಥಾನ ಪಡೆದವರು ಯುವ ಆಟಗಾರ ರಿಷಭ್ ಪಂತ್.
ಬ್ಯಾಟಿಂಗ್​​ನಲ್ಲಿ ಪದೇ ಪದೇ ವೈಪಲ್ಯ ಅನುಭವಿಸಿದ್ರೂ ಒಂದಿಷ್ಟು ಅವಕಾಶಗಳನ್ನು ಪಂತ್​​ಗೆ ಕಲ್ಪಿಸಲಾಗಿದೆ. ನಿನ್ನೆಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲೂ ಪಂತ್ ಆಡುವ 11ರ ಬಳಗದಲ್ಲಿದ್ರು. ಬ್ಯಾಟಿಂಗ್ ಕೂಡ ಮಾಡಿದ್ರು. ಆದರೆ, ವಿಕೆಟ್​ ಕೀಪಿಂಗ್ ಮಾಡಿದ್ದು ಮಾತ್ರ ಕೆ.ಎಲ್ ರಾಹುಲ್!


ಬ್ಯಾಟಿಂಗ್ ಮಾಡುವಾಗ ಪ್ಯಾಟ್ ಕುಮಿನ್ಸ್ ಬೌಲಿಂಗ್​ನಲ್ಲಿ ಬಲವಾದ ಹೊಡೆತಕ್ಕೆ ಮುಂದಾದಾಗ ಬಾಲ್ ಬ್ಯಾಟ್​ಗೆ ವಂಚಿಸಿ ಬ್ಯಾಟಿನ ಮೇಲ್ಭಾಗಕ್ಕೆ ತಗುಲಿ ಹೆಲ್ಮೆಟ್​​​​​​ಗೆ ಬಡಿಯಿತು, ಆ ವೇಳೆ ಪಂತ್ ಗಾಯಗೊಂಡರು, ಬಳಿಕ ಬ್ಯಾಟಿಂಗ್​ಗೆ ಇಳಿಯಲಿಲ್ಲ. ಪಂತ್ 28ರನ್ ಮಾಡಿ ಪೆವಿಲಿಯನ್ ಸೇರಿದರು. ಭಾರತ 225ರನ್​ ಗಳಿಗೆ ಆಲೌಟ್ ಆಯ್ತು. 256 ರನ್​ ಗುರಿಯನ್ನು ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೆ ತಲುಪಿತು.

Share This Article