ತಂಡ ಸೇರುತ್ತಿರುವ ಈ ಕನ್ನಡಿಗ ಕ್ರಿಕೆಟಿಗನಿಂದ ಟೀಮ್ ಇಂಡಿಯಾಗೆ ಸಿಗುತ್ತ ಬಲ..!??
ಇಂದು ಪರ್ತ್ ನಡೆದ ಆಸ್ಟ್ರೇಲಿಯಾ ವಿರುದ್ಧದ 2 ನೇ ಟೆಸ್ಟ್ ನಲ್ಲಿ ಭಾರತ ಹೀನಾಯ ಸೋಲು ಕಂಡಿದೆ.. ಇಂದು ಮೊದಲ ಸೆಷನ್ ನಲ್ಲೇ ಕೇವಲ 24 ರನ್ ಗಳಿಸುವಷ್ಟರಲ್ಲು ಇನ್ನೂಳಿದ 5 ವಿಕೆಟ್ ಕಳೆದುಕೊಳ್ಳುವ ಮೂಲಕ 146 ರನ್ ಗಳ ಅಂತರದಿಂದ ಸೋಲುಕಂಡಿದೆ..
ಭಾರತ ತಂಡದ ಬ್ಯಾಟ್ಸಮನ್ ಗಳ ವೈಫಲ್ಯವೇ ಈ ಸೋಲಿಗೆ ಕಾರಣವಾಗಿದೆ.. ತಂಡದಲ್ಲಿ ಆರಂಭಿಕರಾದ ಮುರುಳಿ ವಿಜಯ್ ಹಾಗೆ ಕೆ.ಎಲ್.ರಾಹುಲ್ ವಿಫಲರಾಗಿದ್ದಾರೆ.. ಮತ್ತೊಂದು ಕಡೆ ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳಲಾಗದೆ ಎಂಗ್ ಕ್ರಿಕೆಟರ್ ಪೃಥ್ವಿ ಶಾ ತವರು ನೆಲಕ್ಕೆ ವಾಪಸ್ ಬರುತ್ತಿದ್ದಾರೆ…
ಹೀಗಾಗೆ ಮಯಾಂಕ್ ಅಗರ್ವಾಲ್ ಅವರನ್ನ ಈ ಸ್ಥಾನಕ್ಕೆ ಆಯ್ಕೆ ಮಾಡಿದೆ.. ಕನ್ನಡಿಗ ಮಾಯಂಕ್ ಆದ್ರು ಆರಂಭಿಕ ಆಟಗಾರನಾಗಿ ಆಸ್ಟ್ರೇಲಿಯಾ ನೆಲದಲ್ಲಿ ರನ್ ಗಳಿಸುತ್ತಾರ ಅನ್ನೋದನ್ನ ಕಾದು ನೋಡಬೇಕಿದೆ..