ದೇವೇಗೌಡ್ರಿಗೆ ಸಿದ್ದರಾಮಯ್ಯ ಸವಾಲು

Date:

ಸಿಎಂ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ತಿರಸ್ಕರಿಸಿದ್ದು ನಾನಲ್ಲ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಖರ್ಗೆ ಅವರ ಹೆಸರನ್ನು ಯಾರು ತಿರಸ್ಕರಿಸಿದರು ಎಂದು ಎಚ್ ಡಿ ದೇವೇಗೌಡರೇ ಹೇಳಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲೆಸೆದಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ಹುಟ್ಟೂರು ಸಿದ್ದರಾಮನ ಹುಂಡಿಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಪ.. ದೇವೇಗೌಡರ ಬಗ್ಗೆ ನಾನು ಪ್ರತಿಕ್ರಿಯೆ ನೀಡಬಾರದು ಎಂದು ಮಾರ್ಮಿಕವಾಗಿ ನುಡಿದರು.
ಸಿದ್ದರಾಮಯ್ಯ ಜೆಡಿಎಸ್ ಪಕ್ಷ ಕಟ್ಟಿಲ್ಲ ಎಂದು ಎಲ್ಲರೂ ಹೇಳುತ್ತಲೇ ಇದ್ದಾರೆ. ಹಾಗಿದ್ದರೆ 1999ರಲ್ಲಿ ಜೆಡಿಎಸ್ ಪಕ್ಷದ ಅಧ್ಯಕ್ಷರಾಗಿದ್ದವರು ಯಾರು ಎಂಬ ಪ್ರಶ್ನೆಗೆ ಒಮ್ಮೆ ಉತ್ತರಿಸಿ ಎಂದು ಸಿದ್ದರಾಮಯ್ಯ ಸವಾಲೆಸೆದರು. ಆಗ 6 ವರ್ಷಗಳ ಕಾಲ‌ ಜೆಡಿಎಸ್ ಅಧ್ಯಕ್ಷನಾಗಿದ್ದವನು ನಾನು. ಹಾಗಾದರೆ ನಾನು ಅಧ್ಯಕ್ಷನಾಗಿದ್ದು ವ್ಯರ್ಥನಾ ಎಂಬ ಪ್ರಶ್ನೆಗೆ ಜೆಡಿಎಸ್‌ನವರೇ ಉತ್ತರಿಸಬೇಕು ಎಂದು ತಿರುಗೇಟು ಕೊಟ್ಟ ಸಿದ್ದರಾಮಯ್ಯ, ಸಿಎಂ ಸ್ಥಾನಕ್ಕೆ ಖರ್ಗೆ ಹೆಸರು ತಿರಸ್ಕರಿಸಿದ್ದು ನಾನಂತೂ ಅಲ್ಲ ಎಂದರು.
ಕುರುಬ ಸಮುದಾಯಕ್ಕೆ ಎಸ್ ಟಿ ಮೀಸಲಾತಿ ನೀಡಬೇಕೆಂಬ ಹೋರಾಟದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇದಕ್ಕೆ ಹೋರಾಟ ಮಾಡುವ ಅಗತ್ಯವೇ ಇಲ್ಲ ಎಂದರು. ಈ ಹಿಂದೆ ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಶಿಫಾರಸು ಮಾಡಿದ್ದೆ. ಸಿಎಂ ಆಗಿದ್ದಾಗ ಕುಲಶಾಸ್ತ್ರ ಅಧ್ಯಯನಕ್ಕೆ ಶಿಫಾರಸು ಮಾಡಿದ್ದೆ. ಇದೀಗ ಈಶ್ವರಪ್ಪ, ಎಚ್. ವಿಶ್ವನಾಥ್ ಇಬ್ಬರೂ ಬಿಜೆಪಿಯಲ್ಲಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಅವರದ್ದೇ ಸರ್ಕಾರ ಇದೆ. ಕುಲಶಾಸ್ತ್ರ ಅಧ್ಯಯನದ ವರದಿ ಪಡೆದು ಅವರೇ ಶಿಫಾರಸು ಮಾಡಿಸಲಿ ಎಂದು ಸಿದ್ದರಾಮಯ್ಯ ಸವಾಲೆಸೆದಿದ್ದಾರೆ.

ಲಾಕ್ ಡೌನ್ ಸಂದರ್ಭದಲ್ಲಿ ನನ್ನ ಕನಸನ್ನ ನನಸು ಮಾಡಿಕೊಂಡೆ.

ಸ್ಯಾಂಡಲ್ ವುಡ್ ನ ಸ್ಟಾರ್ ಕಾಮಿಡಿ ನಟ ಅಂತ ಹೇಳಿದರೆ ಚಿಕ್ಕಣ್ಣ ಹೆಸರು ಮೊದಲು ಬರುತ್ತೆ, ಮೊದಲು ಕಿರುತೆರೆ ಕಾಮಿಡಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಚಿಕ್ಕಣ್ಣ ಇದೀಗ ಬೃಹದಾಕಾರವಾಗಿ ಚಿತ್ರರಂಗದಲ್ಲಿ ತಮ್ಮ ಹೆಸರನ್ನು ಉಳಿಸಿಕೊಂಡಿದ್ದಾರೆ. ಅಧ್ಯಕ್ಷ ಚಿತ್ರದ ಮೂಲಕ ಹೆಚ್ಚು ಹೆಸರು ಗಳಿಸಿದ ಚಿಕ್ಕಣ್ಣ ಈಗ ಎಲ್ಲಾ ಸ್ಟಾರ್ ನಟರ ಚಿತ್ರದಲ್ಲಿ ಚಿಕ್ಕಣ್ಣ ಇದ್ದೇ ಇರ್ತಾರೆ ಹಾಗೆ ಚಿಕ್ಕಣ್ಣ ಅವರ ವೈಯಕ್ತಿಕ ಜೀವನದಲ್ಲಿ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು, ಕೆಲವು ತಿಂಗಳಿನಿಂದ ಚಿತ್ರರಂಗ corona ಬೀತಿ ಇಂದ ಸರ್ಕಾರದ ಅದೇಶದ ಮೇಲೆ ಸ್ತಬ್ದ ವಾಗಿತ್ತು ಆ ಸಂದರ್ಭದಲ್ಲಿ ಚಿಕ್ಕಣ್ಣ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಮೂಲತಹ ರೈತ ಕುಟುಂಬದಿಂದ ಬಂದಿದ್ದ ಕಂತ ಚಿಕ್ಕಣ್ಣ ಅವರಿಗೆ ತಮ್ಮದೇ ಆದ ಒಂದು ಫಾರ್ಮಹೌಸ್ ಮಾಡಬೇಕೆಂಬ ಆಸೆ ಇತ್ತು, ಹಾಗೆಯೇ ತಾವು ಮೈಸೂರಿನಲ್ಲಿ ಎರಡು ವರ್ಷದ ಹಿಂದೆ ಖರೀದಿಸಿದ ಒಂದು ಜಾಗದಲ್ಲಿ ಲಾಕ್ಡೌನ್ ಸಂದರ್ಭದಲ್ಲಿ ಹೈನುಗಾರಿಕೆ ಹಾಗೂ ಕೃಷಿ ಮಾಡುವ ಕನಸನ್ನ ನನಸು ಮಾಡಿಕೊಂಡಿದ್ದಾರೆ. ನಾಟಿ ಕೋಳಿ ಹಾಗೂ ಕುರಿ ಫಾರ್ ಮಾಡಿರುವ ಚಿಕ್ಕಣ್ಣನಿಗೆ ಮೊದಲಿಂದಲೂ ಇದರ ಮೇಲೆ ಆಸಕ್ತಿ ಇತ್ತು ಎಂದು ಸ್ವತಹ ಚಿಕ್ಕಣ್ಣ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಹೇಳಿದ್ದಾರೆ ಚಾಮುಂಡೇಶ್ವರಿ ಮೇಕೆ ಮತ್ತು ಕೋಳಿ ಫಾರ್ಮ್ ಎಂಬ ಹೆಸರನ್ನು ಚಿಕ್ಕಣ್ಣ ಈ ಜಾಗಕ್ಕೆ ಇಟ್ಟಿದ್ದಾರೆ.ಸಿಲ್ವರ್ ತೇಗ ರಕ್ತಚಂದನ ಮುಂತಾದ ಗಿಡಗಳನ್ನು ತಮ್ಮ ಫಾರ್ಮ್ ನಲ್ಲಿ ಚಿಕ್ಕಣ್ಣ ಬೆಳೆಸಿದ್ದಾರೆ.

ಫಾರ್ಮ್ ಮಾಡುವ ಕನಸು ನನ್ನ ತಂದೆ ಅವರದ್ದು ಹಾಗೂ ನನಗೆ ಇನ್ಸ್ಪಿರೇಷನ್ ಅಂದ್ರೆ ದರ್ಶನ್ ಸರ್ ಅವರು, ದರ್ಶನ್ ಸರ್ ಫಾರ್ಮಿಗೆ ಎಷ್ಟು ಸಲ ಹೋದ್ರು ಇನ್ನಷ್ಟು ನೋಡಬೇಕು ಅನ್ನೋ ಆಸೆ ಬರುತ್ತೆ ಅದನ್ನು ನೋಡಿ ನನಗೂ ಸಹ ಮಾಡಬೇಕೆಂಬ ಆಸೆ ಬಂತು ಹಾಗಾಗಿ ಚಿಕ್ಕದಾಗಿ ಶುರುಮಾಡಿದ್ದೇನೆ ಎಂದು ಚಿಕ್ಕಣ್ಣ ಹೇಳಿದ್ದಾರೆ. ಹಾಗೆ ಮುಂದೆ ತನ್ನದೇಯಾದ ಒಂದು ಕನಸಿನ ಮನೆಯನ್ನು ಕಟ್ಟಬೇಕೆಂಬ ಬಯಕೆ ಇದೆ ಎಂದು ಚಿಕ್ಕಣ್ಣ ಹೇಳಿಕೊಂಡಿದ್ದಾರೆ.

Share post:

Subscribe

spot_imgspot_img

Popular

More like this
Related

ಸಚಿವರಿಗೆ ವಿಪಕ್ಷ ನಾಯಕರ ಮಾತನ್ನು ಆಲಿಸಿ, ಸಮಸ್ಯೆಗೆ ಸ್ಪಂದಿಸುವ ವ್ಯವಧಾನ ಇಲ್ಲ: ವಿಜಯೇಂದ್ರ

ಸಚಿವರಿಗೆ ವಿಪಕ್ಷ ನಾಯಕರ ಮಾತನ್ನು ಆಲಿಸಿ, ಸಮಸ್ಯೆಗೆ ಸ್ಪಂದಿಸುವ ವ್ಯವಧಾನ ಇಲ್ಲ:...

Gold Price Today: ಚಿನ್ನದ ದರದಲ್ಲಿ ಭಾರಿ ಕುಸಿತ; ಬೆಂಗಳೂರಿನಲ್ಲಿ ಇಂದು ಎಷ್ಟಿದೆ ದರ?

Gold Price Today: ಚಿನ್ನದ ದರದಲ್ಲಿ ಭಾರಿ ಕುಸಿತ; ಬೆಂಗಳೂರಿನಲ್ಲಿ ಇಂದು...

ಬೆಂಗಳೂರಿನಲ್ಲಿ ತೀವ್ರ ಕುಸಿತ ಕಂಡ ಗಾಳಿಯ ಗುಣಮಟ್ಟ: ಹೆಚ್ಚಿದ ಆರೋಗ್ಯ ಸಮಸ್ಯೆ

ಬೆಂಗಳೂರಿನಲ್ಲಿ ತೀವ್ರ ಕುಸಿತ ಕಂಡ ಗಾಳಿಯ ಗುಣಮಟ್ಟ: ಹೆಚ್ಚಿದ ಆರೋಗ್ಯ ಸಮಸ್ಯೆ ಬೆಂಗಳೂರು:...

ನಿಂಬೆ ಬಳಸಿದ ನಂತರ ಸಿಪ್ಪೆ ಎಸೆಯಬೇಡಿ, ಪ್ರಯೋಜನ ಸಾಕಷ್ಟಿವೆ!

ನಿಂಬೆ ಬಳಸಿದ ನಂತರ ಸಿಪ್ಪೆ ಎಸೆಯಬೇಡಿ, ಪ್ರಯೋಜನ ಸಾಕಷ್ಟಿವೆ! ನಿಂಬೆಹಣ್ಣು ಕೇವಲ ರಸಕ್ಕಾಗಿ...