ದ್ರಾವಿಡ್​ ಸಾಧಿಸಿದ್ದನ್ನು, ಧೋನಿ ಮಾಡದ್ದನ್ನು ಮಾಡಿದ ರಾಹುಲ್​​​..! ಅಷ್ಟೇ ಅಲ್ಲ ಮತ್ತೂ ಎರಡು ರೆಕಾರ್ಡ್..!

Date:

ಕೆ.ಎಲ್ ರಾಹುಲ್… ಟೀಮ್ ಇಂಡಿಯಾದ ಭರವಸೆಯ ಆಟಗಾರ.. ಬ್ಯಾಟಿಂಗ್​ನಲ್ಲಿ ಯಾವ್ದೇ ಕ್ರಮಾಂಕದಲ್ಲೂ ಆಪತ್ಬಾಂಧವರಾಗಿ ತಂಡಕ್ಕೆ ನೆರವಾಗಲ್ಲ ಕ್ಲಾಸಿಕ್ ಪ್ಲೇಯರ್…! ವಿಕೆಟ್​ ಕೀಪರ್ ಆಗಿಯೂ ಸಾಥ್ ನೀಡಿರುವ ಯುವ ಕ್ರಿಕೆಟ್ ತಾರೆ… ಭಾರತ ತಂಡದ ಮುಂದಿನ ನಾಯಕ ಎಂದೇ ಬಿಂಬಿತವಾಗಿರುವ ಇವರು ಕನ್ನಡಿಗರು ಎನ್ನುವುದು ಮತ್ತೊಂದು ಹೆಮ್ಮೆ.
ನ್ಯೂಜಿಲೆಂಡ್​ ವಿರುದ್ಧ 5 ಪಂದ್ಯಗಳ ಟಿ20 ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದ ಅವರು, 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಸೋತರೂ ವೈಯಕ್ತಿಕವಾಗಿ ಮೊದಲ ಮತ್ತು ಮೂರನೇ ಪಂದ್ಯದಲ್ಲಿ ಸಾಲೀಡ್ ಆಟ ಆಡಿದರು. 5 ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಅವರು ಮೊದಲ ಪಂದ್ಯದಲ್ಲಿ ಅಜೇಯ 88ರನ್, 3ನೇ ಮ್ಯಾಚಲ್ಲಿ 112ರನ್ ಮಾಡಿದರು. ಇನ್ನು ಮೂರನೇ ಮ್ಯಾಚಲ್ಲೂ ಭಾರತ ಸೋತರು ರಾಹುಲ್ ಮೂರು ದಾಖಲೆಗಳನ್ನು ಮಾಡಿದರು.
21 ವರ್ಷದ ಹಿಂದೆ ದ್ರಾವಿಡ್ ಸೃಷ್ಟಿಸಿದ ಇತಿಹಾಸ : ದಿ ವಾಲ್ ಖ್ಯಾತಿಯ ಕ್ರಿಕೆಟಿಗ, ಟೀಮ್ ಇಂಡಿಯಾದ ಮಾಜಿ ನಾಯಕ ಕನ್ನಡಿಗ ರಾಹುಲ್ ದ್ರಾವಿಡ್ 21 ವರ್ಷದ ಹಿಂದೆ ಸಾಧಿಸಿದ್ದನ್ನು ಕನ್ನಡಿಗರೇ ಆದ ರಾಹುಲ್ ಸಾಧಿಸಿದ್ದಾರೆ. 1999ರಲ್ಲಿ ಇಂಗ್ಲೆಂಡ್​ನಲ್ಲಿ ನಡೆದ ವಿಶ್ವಕಪ್​ನಲ್ಲಿ ಟೌಂಟೋನ್​ನಲ್ಲಿ ಶ್ರೀಲಂಕಾ ವಿರುದ್ಧ ದ್ರಾವಿಡ್ ಶತಕ (145) ಸಿಡಿಸಿದ್ದರು. ಅದು ಏಷ್ಯಾದಿಂದ ಹೊರಗಡೆ ಭಾರತೀಯ ವಿಕೆಟ್ ಕೀಪರ್ – ಬ್ಯಾಟ್ಸ್​ ಮನ್ ಬಾರಿಸಿದ ಮೊದಲ ಶತಕವಾಗಿತ್ತು. ದ್ರಾವಿಡ್​ಗೂ ಮೊದಲು ಹಾಗೂ ದ್ರಾವಿಡ್ ನಂತರ ಕೂಡ ಏಷ್ಯಾದಿಂದ ಆಚೆಗೆ ಯಾವೊಬ್ಬ ಭಾರತೀಯ ವಿಕೆಟ್ ಕೀಪರ್ ಕೂಡ ಶತಕ ಬಾರಿಸಿರಲಿಲ್ಲ. ಇದೀಗ ನ್ಯೂಜಿಲೆಂಡ್​ನಲ್ಲಿ ಕೆ.ಎಲ್ ರಾಹುಲ್ ಆ ಸಾಧನೆಯನ್ನು ಮಾಡಿದ್ದಾರೆ.
ನ್ಯೂಜಿಲೆಂಡ್​ನಲ್ಲಿ 5ನೇ ಕ್ರಮಾಂಕದಲ್ಲಿ ಶತಕ : ನ್ಯೂಜಿಲೆಂಡ್ ಅಂಗಳದಲ್ಲಿ 5ನೇ ಹಾಗೂ ಅದಕ್ಕಿಂತ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದು ಶತಕ ಸಿಡಿಸಿದ 2ನೇ ಭಾರತೀಯ ಆಟಗಾರ ಎಂಬ ಕೀರ್ತಿಗೂ ರಾಹುಲ್ ಪಾತ್ರರಾಗಿದ್ದಾರೆ. 2015ರ ವಿಶ್ವಕಪ್​​​ನಲ್ಲಿ ಸುರೇಶ್ ರೈನಾ ಜಿಂಬಾಬ್ವೆ ವಿರುದ್ಧ ಶತಕ ಸಿಡಿಸಿದ್ದರು.
ಏಕೈಕ ಬ್ಯಾಟ್ಸ್​ಮನ್ : ಇನ್ನು ನ್ಯೂಜಿಲೆಂಡ್ ವಿರುದ್ಧ 5ನೇ ಅಥವಾ ಅದಕ್ಕಿಂತ ಕೆಳಕ್ರಮಾಂಕದಲ್ಲಿ ಕ್ರೀಸಿಗಿಳಿದು ಸೆಂಚುರಿ ಸಿಡಿಸಿದ ಏಕೈಕ ಆಟಗಾರ ಎಂಬ ದಾಖಲೆಯೂ ಇದೀಗ ಕನ್ನಡ ಕೆ.ಎಲ್ ರಾಹುಲ್ ಅವರದ್ದಾಗಿದೆ.

Share post:

Subscribe

spot_imgspot_img

Popular

More like this
Related

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ

ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರ ಮಳೆಯಾಗಲಿದೆ: ಹವಾಮಾನ ಇಲಾಖೆ ಬೆಂಗಳೂರು:...

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ!

ತಪ್ಪಿಯೂ ಈ ತರಕಾರಿಗಳನ್ನು ಹಸಿಯಾಗಿ ತಿನ್ನಬೇಡಿ! ದಿನನಿತ್ಯದ ಆಹಾರದಲ್ಲಿ ತರಕಾರಿಗಳ ಬಳಕೆ ಅನಿವಾರ್ಯ....

ಬ್ರಹ್ಮಚಾರಿಣಿಯ ಪೂಜಾ ವಿಧಾನ !

ನವರಾತ್ರಿಯ ಎರಡನೇ ದಿನದಲ್ಲಿ ಬ್ರಹ್ಮಚಾರಿಣಿ ದೇವಿಯನ್ನು ಆರಾಧಿಸಲಾಗುತ್ತದೆ.ಇವರು ತಪಸ್ಸು, ಧೈರ್ಯ, ಶ್ರದ್ಧೆ...

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ

ಲೇಖಕಿ ಬಾನು ಮುಷ್ತಾಕ್ ಭಾಷಣ ಕೇಳಿ ಸಂತೋಷ ಆಗಿದೆ: ಛಲವಾದಿ ನಾರಾಯಣಸ್ವಾಮಿ ಬೆಂಗಳೂರು:-...