ಧರ್ಮಸ್ಥಳದ ಮಂಜುನಾಥನ ಆಣೆ ಮಾಡಿದ ಯಶ್ ಹೆಣ್ಮಕ್ಕಳ ಸುದ್ದಿ ಬಂದ್ರೆ ಹುಷಾರ್ ಎಂದ್ರು..!

Date:

ಮಂಡ್ಯದಲ್ಲಿ ಸುಮಲತಾ ಸಮಾವೇಶದಲ್ಲಿ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್ ಸಿಎಂ ಮತ್ತು ಎದುರಾಳಿ ನಾಯಕರಿಗೆ ಮಾತಿನ ಚಾಟಿ ಬೀಸಿದರು.
ನನ್ನ ವಿಷಯದಲ್ಲಿ ಸುಳ್ಳು ಹೇಳುತ್ತಿದ್ದಾರೆ. ನಾನು ಅವರ ಪಕ್ಷವನ್ನು ಕಳ್ಳರ ಪಕ್ಷ ಎಂದಿದ್ದೇನೆ ಅಂತೆ. ನಾನು ಹಾಗೆ ಹೇಳಿಲ್ಲ. ಧರ್ಮಸ್ಥಳ ಮಂಜುನಾಥನ ಮೇಲೆ ಆಣೆ. ನಾನು ಹಾಗೆ ಹೇಳಿದ್ದೇನೆ ಎಂದು ತೋರಿಸದರೆ ಕರ್ನಾಟಕವನ್ನೇ ಬಿಟ್ಟು ಹೋಗುತ್ತೇನೆ. ಹೋಗುತ್ತೇನೆ ಎಂದರೆ ಹೋಗುತ್ತೇನೆ. ಹೋಗ್ತೀನಿ ಎಂದು ಹೇಳಿ ಹೋಗದೇ ಇರುವುದಿಲ್ಲ ಎಂದು ಟಾಂಗ್ ಕೊಟ್ಟರು.
ದರ್ಶನ್, ಅಭಿ, ಸುಮಲತಾ ಅವರೆಲ್ಲಾ ಹೇಳಿದ್ದೆಲ್ಲಾ ನುಂಗಿಕೊಂಡು ಸುಮ್ಮನಿದ್ದರು. ನನ್ನ ರಕ್ತ ಸುಮ್ಮನಿರಬೇಕಲ್ಲಾ? ಕುದಿಯುತ್ತೆ. ಈಗಲೂ ಹೇಳುತ್ತೇನೆ ನಮ್ಮ ಮನೆ ಹೆಣ್ಣು ಮಕ್ಕಳ ಸುದ್ದಿ ಬಂದರೆ ಸುಮ್ಮನಿರಲ್ಲ. ಅದು ಯಾರೇ ಆಗಿರಲಿ. ಯಾವ ಸ್ಥಾನದಲ್ಲೇ ಇರಲಿ ಎಂದರು.
ಜಾತಿ ಬಗ್ಗೆ ಮಾತಾದ್ತಾರೆ,, ವರ್ಜಿನಲ್ ಮಂಡ್ಯದ ಗೌಡ ಅಭಿ ಎಂದು ಹೇಳಿದರು. ಇಂಥಾ ರಾಜಕೀಯ ಎಲ್ಲೂನೋಡಿಲ್ಲ. ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಚುನಾವಣೆಗೆ ಸ್ಪರ್ಧಿಸಬಹುದು. ನಿಮ್ಮ ಊರ ಸೊಸೆ ಸುಮಲತಾಕ್ಕ ನಿಂತಿದ್ದಕ್ಕೆ ಎಂಥೆಂಥಾ ಮಾತಾಡ್ತಾರೆ ಎಂದರು.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...