ನಟ ದರ್ಶನ್‌, ಪವಿತ್ರಗೆ ಮತ್ತೆ ನಿರಾಸೆ: ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Date:

ನಟ ದರ್ಶನ್‌, ಪವಿತ್ರಗೆ ಮತ್ತೆ ನಿರಾಸೆ: ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್, ಪವಿತ್ರಾ ಹಾಗೂ ಇತರೆ ಕೆಲವರ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮತ್ತೊಮ್ಮೆ ಮುಂದೂಡಿದೆ. ಕಳೆದ ಕೆಲವು ದಿನಗಳಿಂದ ಹೈಕೋರ್ಟ್ನಲ್ಲಿ ವಾದ-ಪ್ರತಿವಾದ ನಡೆಯುತ್ತಿದೆ. ದರ್ಶನ್ ಪರವಾಗಿ ಹಿರಿಯ ಲಾಯರ್ ಸಿ.ವಿ. ನಾಗೇಶ್ ಅವರು ಇತ್ತೀಚೆಗೆ ಹೈಕೋರ್ಟ್ನಲ್ಲಿ ವಾದ ಮಂಡನೆ ಮಾಡಿದ್ದರು. ಇಂದು ಪವಿತ್ರಾ ಗೌಡ ಪರವಾಗಿ ಹಿರಿಯ ವಕೀಲ ಸೆಬಾಸ್ಟಿಯನ್ ಅವರು ವಾದಿಸಿದ್ದಾರೆ. ಪವಿತ್ರಾ ಗೌಡ ಅವರಿಗೆ ಕೊಲೆ ಮಾಡುವ ಉದ್ದೇಶ ಇರಲಿಲ್ಲ.
ಎಲ್ಲರೂ ಹೊಡೆದ ಕಾರಣದಿಂದ ರೇಣುಕಾಸ್ವಾಮಿ ಸಾವು ಸಂಭವಿಸಿರಬಹುದು ಎಂದು ವಾದ ಮಾಡಲಾಗಿದೆ. ಆರೋಪಿಗಳ ಪರವಾಗಿ ವಕೀಲರ ವಾದ ಮಂಡನೆ ಅಂತ್ಯವಾಗಿದೆ. ಡಿಸೆಂಬರ್ 6ರಂದು ಎಸ್ಪಿಪಿ ಪ್ರಸನ್ನ ಕುಮಾರ್ ಅವರು ವಾದ ಮಾಡಲಿದ್ದಾರೆ. ಆ ಬಳಿಕ ಜಾಮೀನಿಗೆ ಸಂಬಂಧಿಸಿದ ತೀರ್ಪನ್ನು ಹೈಕೋರ್ಟ್ ನೀಡಲಿದೆ. ಸದ್ಯಕ್ಕೆ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆಯನ್ನು ಡಿಸೆಂಬರ್ 6ಕ್ಕೆ ಮುಂದೂಡಿಕೆ ಮಾಡಲಾಗಿದೆ.

Share post:

Subscribe

spot_imgspot_img

Popular

More like this
Related

ಯುವಶಕ್ತಿ, ನಾರಿ ಶಕ್ತಿ, ರೈತರಿಗೆ ಆದ್ಯತೆ ನೀಡಿದ ಬಜೆಟ್: ಬಿ.ವೈ. ವಿಜಯೇಂದ್ರ ಶ್ಲಾಘನೆ

ಯುವಶಕ್ತಿ, ನಾರಿ ಶಕ್ತಿ, ರೈತರಿಗೆ ಆದ್ಯತೆ ನೀಡಿದ ಬಜೆಟ್: ಬಿ.ವೈ. ವಿಜಯೇಂದ್ರ...

ಏ.1ರಿಂದ ಹೊಸ ಕಾಯ್ದೆ ಜಾರಿ: ಅನಿವಾಸಿಗಳಿಗೆ MAT ವಿನಾಯಿತಿ, ಕನಿಷ್ಠ ತೆರಿಗೆ ದರದಲ್ಲಿ ರಿಲೀಫ್

ಏ.1ರಿಂದ ಹೊಸ ಕಾಯ್ದೆ ಜಾರಿ: ಅನಿವಾಸಿಗಳಿಗೆ MAT ವಿನಾಯಿತಿ, ಕನಿಷ್ಠ ತೆರಿಗೆ...

Budget 2026 Expectations: ಮಹಿಳೆ–ಯುವಕರ ಮೇಲೆ ಫೋಕಸ್, ಉದ್ಯೋಗಕ್ಕೆ ಹೊಸ ದಾರಿ

Budget 2026 Expectations: ಮಹಿಳೆ–ಯುವಕರ ಮೇಲೆ ಫೋಕಸ್, ಉದ್ಯೋಗಕ್ಕೆ ಹೊಸ ದಾರಿ ನವದೆಹಲಿ:...

ಕೇಂದ್ರ ಬಜೆಟ್ 2026–27: 7 ಹೈಸ್ಪೀಡ್ ರೈಲು ಕಾರಿಡಾರ್ ಘೋಷಣೆ – ಬೆಂಗಳೂರಿಗೆ ಬುಲೆಟ್ ರೈಲು

ಕೇಂದ್ರ ಬಜೆಟ್ 2026–27: 7 ಹೈಸ್ಪೀಡ್ ರೈಲು ಕಾರಿಡಾರ್ ಘೋಷಣೆ –...