ನಾಯ್ಡು, ಗೌಡ ಹೇಳಿಕೆಗೆ ಕೋಪಗೊಂಡ ಕಾಂಗ್ರೆಸ್ ಸಚಿವ ಜೆಡಿಎಸ್ ಮೇಲೆ ತಿರುಗಿ ಬಿದ್ದಿದ್ದಾರೆ..!

Date:

ಮಂಡ್ಯದ ರಾಜಕಾರಣ ದಿನದಿಂದ ದಿನಕ್ಕೆ ವರ್ಣರಂಜಿತವಾಗುತ್ತಿದ್ದು ಟೀಕೆ ಟಿಪ್ಪಣಿಗಳೂ ಸಹ ತಾರಕಕ್ಕೆ ಏರುತ್ತಿದೆ. ನಿನ್ನೆಯಷ್ಟೆ ಮಂಡ್ಯ ಸಂಸದ ಎಲ್ ಆರ್ ಶಿವರಾಮೇಗೌಡ ಅವರು ಸುಮಲತಾ ಅಂಬರೀಷ್ ಮಂಡ್ಯದ ಗೌಡ್ತಿ ಅಲ್ಲ ಅವರು ತೆಲುಗಿನ ನಾಯ್ಡು ಕುಟುಂಬದವರು ಅಂಬರೀಷ್ ರನ್ನು ಮದುವೆಯಾಗಿ ಬಂದ ಮಾತ್ರಕ್ಕೆ ಗೌಡ್ತಿ ಆಗುವುದಿಲ್ಲ ಎಂದು ಹೇಳಿಕೆಯನ್ನು ನೀಡಿದ್ದರು.


ಈ ಹೇಳಿಕೆಗೆ ಇದೀಗ ಟಾಂಗ್ ನೀಡಿರುವ ಕಾಂಗ್ರೆಸ್ ನ ಸಚಿವ ಎಂಟಿಬಿ ನಾಗರಾಜ್ ಜಾತಿ ವಿಚಾರ ಕೆದಕಿದ ವಿರುದ್ಧ ತಿರುಗಿಬಿದ್ದಿದ್ದಾರೆ.

ಸುಮಲತಾ ಮತ್ತು ಅಂಬರೀಷ್ ಮದುವೆಯಾಗಿ 28 ವರ್ಷ ಸಂಸಾರ ನಡೆಸಿದ್ದಾರೆ ಮದುವೆಯಾದ ಬಳಿಕ ಅಂಬರೀಷ್ ಜಾತಿಯೇ ಸುಮಲತಾಗೆ ಬರುತ್ತದೆ ಹೀಗಾಗಿ ಅವರು ಮಂಡ್ಯದ ಗೌಡ್ತಿಯೇ ಆಗುತ್ತಾರೆ ಎಂದು ಹೇಳಿದ್ದಾರೆ.

ಮತಯಾಚನೆಗೆ ಹೋಗುವಾಗ ರಾಜ್ಯ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಹೋಗಬೇಕು ಅದನ್ನು ಬಿಟ್ಟು ಜಾತಿಯನ್ನು ಮುಂದಿಟ್ಟುಕೊಂಡು ಪ್ರಚಾರ ಮಾಡಬಾರದು ಎಂದು ಎಂಟಿಬಿ ನಾಗರಾಜ್ ಹೇಳಿದ್ದಾರೆ.

Share post:

Subscribe

spot_imgspot_img

Popular

More like this
Related

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...