ನಿಮ್ಮ ಫೋಟೋ ಶೂಟ್’ಗಾಗಿ ವಿದ್ಯಾರ್ಥಿಗಳ ಬಲಿ ತೆಗೆದುಕೊಂಡಿದ್ದಾರೆ: ಆರ್.ಅಶೋಕ್ ಕಿಡಿ

Date:

ನಿಮ್ಮ ಫೋಟೋ ಶೂಟ್’ಗಾಗಿ ವಿದ್ಯಾರ್ಥಿಗಳ ಬಲಿ ತೆಗೆದುಕೊಂಡಿದ್ದಾರೆ: ಆರ್.ಅಶೋಕ್ ಕಿಡಿ

ಬೆಂಗಳೂರು: ನಿಮ್ಮ ಫೋಟೋ ಶೂಟ್’ಗಾಗಿ ವಿದ್ಯಾರ್ಥಿಗಳ ಬಲಿ ತೆಗೆದುಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಿಮ್ಮ ಫೋಟೋ ಶೂಟ್ಗಾಗಿ ವಿದ್ಯಾರ್ಥಿಗಳ ಬಲಿ ತೆಗೆದುಕೊಂಡಿದ್ದಾರೆ. ಘಟನೆ ಆದ ಬಳಿಕ ಸಿಎಂ ಎಲ್ಲಿ ಹೋಗಿದ್ದರು ಎಂಬುದೇ ಗೊತ್ತಿಲ್ಲ.
ಡಿಸಿ ತನಿಖೆಗೆ ನಾವು ಒಪ್ಪಲ್ಲ. ಸಾವಿಗೆ ನ್ಯಾಯ ಕೊಡಿ. ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು. ಈ ಹೊಣೆಯನ್ನು ರಾಜ್ಯ ಸರ್ಕಾರ, ಸಿಎಂ, ಡಿಸಿಎಂ ಹೊತ್ತು. ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಕೆಎಸ್ಸಿಎ ನಲ್ಲಿ 12 ಗೇಟ್ ಇತ್ತು. ನೀವು ಗೇಟ್ ತೆಗೆದಿದ್ದು 2 ಮಾತ್ರ. ಡಿಕೆ ಶಿವಕುಮಾರ್ ನಿಮಗೆ ಕಾರಿನ ಕಿಟಕಿಯಿಂದ ಬಾವುಟ ಹಿಡಿದು, ತಲೆ ಹೊರಗೆ ಹಾಕಲು ಪರ್ಮಿಷನ್ ಕೊಟ್ಟವರು ಯಾರು?. ನೀವು ಯಾರ ಮೇಲೆ ಕೇಸ್ ಹಾಕುತ್ತೀರ?. ಯಾರನ್ನು ಬಂಧಿಸುತ್ತೀರ?. ಸ್ಥಳದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲು ವೈದ್ಯರೇ ಇಲ್ಲ.
ಆಂಬ್ಯುಲೆನ್ಸ್ ಕೂಡ ಇರಲಿಲ್ಲ. ಮೊದಲು ಮೃತಪಟ್ಟಿದ್ದು ಪೂರ್ಣಚಂದ್ರ ಸಂಜೆ 3.45ಕ್ಕೆ. ಅಷ್ಟೊತ್ತಿಗೆ ಇಲ್ಲಿ ಕಾರ್ಯಕ್ರಮವೇ ಆರಂಭವಾಗಿರಲಿಲ್ಲ. ಎರಡನೇ ಡೆತ್ ಆಗಿದ್ದು ಸಂಜೆ 4.38ಕ್ಕೆ, ಇನ್ನೊಂದು ಡೆತ್ ಆಗಿರುವುದು ಸಂಜೆ 4.45ಕ್ಕೆ.
ಎಲ್ಲಾ ಐಎಎಸ್, ಐಪಿಎಸ್, ಮಿನಿಸ್ಟರ್ ಪಟಾಲಂ ಮಕ್ಕಳು, ಮೊಮ್ಮಕಳೊಂದಿಗೆ ಫೋಟೋ ಶೂಟ್ನಲ್ಲಿ ಬಿಜಿಯಾಗಿದ್ದರು. ಅವರ ಮಕ್ಕಳು, ಮೊಮ್ಮಕ್ಕಳನ್ನು ಕರೆತಂದು ಫೋಟೋ ಶೂಟ್ ಮಾಡಿಸಿದ್ದಾರೆ. ಕೊಹ್ಲಿಯ ಬಟ್ಟೆ ಎಳೆಯುವುದೊಂದು ಬಾಕಿ ಇತ್ತು ಎಂದು ಟೀಕಿಸಿದರು.

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...