ನಿರ್ಮಾಪಕನ ವಿರುದ್ದ ಕೇಸ್ ದಾಖಲಿಸಿದ ಸಿಂಧೂ ಲೋಕನಾಥ್..
ಈ ಹಿಂದೆ ತನಗೆ ನೀಡಬೇಕಾದ 2 ಲಕ್ಷ ಹಣಕ್ಕೆ ಚೆಕ್ ನೀಡಿದ್ದು ಅದು ಬೌನ್ಸ್ ಆಗಿದೆ ಅಂತ ಸಿಂಧೂ ಲೋಕನಾಥ್ ನಿರ್ಮಾಪಕ ಚಂದ್ರಶೇಖರ್ ಅವರ ಮೇಲೆ ಆರೋಪ ಮಾಡಿದ್ರು.. ‘ಹೀಗೊಂದು ದಿನ‘ ಚಿತ್ರದಲ್ಲಿ ಅಭಿನಯಿಸಿದಕ್ಕೆ ನೀಡಬೇಕಾದ ಸಂಭಾವನೆ ವಿಚಾರವಾಗಿ ಇನ್ನು ಹಣ ನೀಡದೆ ಇರುವುದಕ್ಕೆ ಈ ಹಿಂದೆಯೆ ಈಕೆ ತನ್ನ ಆಕ್ರೋಶವನ್ನ ವ್ಯಕ್ತ ಪಡೆಸಿದ್ರು..
ಸದ್ಯ 2 ಲಕ್ಷಕ್ಕೆ ನಿರ್ಮಾಪಕರು ನೀಡಿದ 2 ಚೆಕ್ ಗಳು ಬೌನ್ಸ್ ಆಗಿದ್ದು, ಈ ಬಗ್ಗೆ ಕೇಸ್ ದಾಖಲಿಸಿ ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.. ಅಂದಹಾಗೆ ಸಿಂಧೂ ಲೋಕನಾಥ್ ನಟಿಸಿದ್ದ ಹೀಗೊಂದು ದಿನ ಚಿತ್ರ ಮಾರ್ಚ್ ನಲ್ಲಿ ತೆರೆ ಕಂಡಿತ್ತು.. ಸಂಭಾವನೆ ವಿಚಾರವಾಗಿ ಸ್ಪಷ್ಟನೆ ನೀಡಿರುವ ನಿರ್ಮಾಪಕ ಚಂದ್ರಶೇಖರ್ ಶೀಘ್ರದಲ್ಲಿ ಈ ಬಗ್ಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ..