ಬುರುಡೆ ಚಿನ್ನಯ್ಯ 10 ದಿನಗಳ ಕಾಲ SIT ವಶಕ್ಕೆ – ಕೋರ್ಟ್ ಆದೇಶ

Date:

ಬುರುಡೆ ಚಿನ್ನಯ್ಯ 10 ದಿನಗಳ ಕಾಲ SIT ವಶಕ್ಕೆ – ಕೋರ್ಟ್ ಆದೇಶ

ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಬುರುಡೆ ಚಿನ್ನಯ್ಯ ಅಲಿಯಾಸ್ ಚೆನ್ನನನ್ನು 10 ದಿನಗಳ ಕಾಲ SIT ವಶಕ್ಕೆ ನೀಡುವಂತೆ ಬೆಳ್ತಂಗಡಿ ಕೋರ್ಟ್ ಆದೇಶ ಹೊರಡಿಸಿದೆ.

ಇಂದು ಬೆಳ್ತಂಗಡಿ ಕೋರ್ಟ್ ಎದುರು ಹಾಜರುಪಡಿಸಿದ ಚಿನ್ನಯ್ಯನನ್ನು ತನಿಖೆಗೆ ಅಗತ್ಯವಿರುವುದರಿಂದ 10 ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕೆಂದು SIT ಮನವಿ ಮಾಡಿತ್ತು. ಕೋರ್ಟ್ ಈ ಮನವಿಯನ್ನು ಅಂಗೀಕರಿಸಿದೆ.

ಮಾಹಿತಿಯ ಪ್ರಕಾರ, ತಾನು ಮೊದಲು ತಂದಿದ್ದ ತಲೆ ಬುರುಡೆಯ ಮೂಲವನ್ನು ಚಿನ್ನಯ್ಯ ಸ್ಪಷ್ಟಪಡಿಸದಿರುವುದೇ ಅವನನ್ನು ಬಂಧಿಸಲು ಕಾರಣವಾಗಿದೆ. ತಲೆ ಬುರುಡೆಯ ಮೂಲದ ಬಗ್ಗೆ ಚಿನ್ನಯ್ಯ ತನಿಖಾ ಅಧಿಕಾರಿಗಳಿಗೆ ಯಾವುದೇ ಸ್ಪಷ್ಟನೆ ನೀಡಲು ವಿಫಲನಾಗಿದ್ದಾನೆ.

ಇದೇ ವೇಳೆ, ಚಿನ್ನಯ್ಯಗೆ 2 ಲಕ್ಷ ರೂ. ನೀಡಿ ಸುಳ್ಳು ದೂರು ನೀಡುವಂತೆ ಒಂದು ಗ್ಯಾಂಗ್ ತರಬೇತಿ ನೀಡಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಆ ಗ್ಯಾಂಗ್ ಕೊಟ್ಟ ಬುರುಡೆಯನ್ನು ಕೋರ್ಟ್ ಹಾಗೂ ಪೊಲೀಸರಿಗೆ ಒಪ್ಪಿಸಲು ಚಿನ್ನಯ್ಯ ಸಿದ್ಧನಾಗಿದ್ದನೆಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

Share post:

Subscribe

spot_imgspot_img

Popular

More like this
Related

ಸಮಾಜದಲ್ಲಿ ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ FIR: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ಸಮಾಜದಲ್ಲಿ ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ FIR: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ಮಂಗಳೂರು:...

ನಡು ರಸ್ತೆಯಲ್ಲೇ ಹಲ್ಲೆ; ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಳಿಯನ ಮೇಲೆ ದಾಳಿ!

ನಡು ರಸ್ತೆಯಲ್ಲೇ ಹಲ್ಲೆ; ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಳಿಯನ ಮೇಲೆ...

ಕರ್ನಾಟಕದಲ್ಲಿ ವರುಣಾರ್ಭಟ: ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್​ ಘೋಷಣೆ

ಕರ್ನಾಟಕದಲ್ಲಿ ವರುಣಾರ್ಭಟ: ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್​ ಘೋಷಣೆ ಬೆಂಗಳೂರು: ರಾಜ್ಯದಾದ್ಯಂತ...

ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ!

ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ! ಬೆಂಗಳೂರು:...