ಮಂಗಳ ಗ್ರಹದತ್ತ ತಿರುಪತಿ ತಿಮ್ಮಪ್ಪ – ಇದು ಸತ್ಯ ಸತ್ಯ ಸತ್ಯ..!

Date:

ದೇಶದ ಸುಪ್ರಸಿದ್ಧ ದೇವಾಲಯಗಳಲ್ಲಿ ಆಂದ್ರಪ್ರದೇಶದ ತಿರುಪತಿ ವೆಂಕಟೇಶ್ವರ ದೇವಾಲಯವೂ ಒಂದು. ತಿರುಪತಿ ವೆಂಕಟೇಶ…ತಿಮ್ಮಪ್ಪನಿಗೆ ಅಪಾರ ಸಂಖ್ಯೆಯ ಭಕ್ತಾದಿಗಳಿದ್ದಾರೆ. ತಿರುಪತಿ ತಿಮ್ಮಪ್ಪನ ಮೇಲೆ ಭಕ್ತಕೋಟಿಗೆ ವಿಶೇಷ ಪ್ರೀತಿ, ವಿಶೇಷ ಅಭಿಮಾನ, ಭಾರಿ ಗೌರವ. ಭಕ್ತರ ಇಷ್ಟಾರ್ಥಗಳನ್ನು ಸಿದ್ದಿಸಲೆಂದೇ ಇರುವ ತಿಮ್ಮಪ್ಪ ಮಂಗಳ‌ ಗ್ರಹಕ್ಕೆ ಹೋಗುತ್ತಿದ್ದಾರೆ.
ಅರೆ, ಏನಿದು ಎಂದ್ರಾ? ತಿಮ್ಮಪ್ಪನ ಹೆಸರು ಮಂಗಳನಲ್ಲಿ ಅಚ್ಚಾಗುತ್ತಿದೆ. ಇದೇನಿದು ತಲೆಗೆ ಹುಳಬಿಟ್ರಲಾ ಅಂತಿದ್ದೀರಾ?
ವಿಷಯ ಏನ್ ಗೊತ್ತಾ? ಅಮೆರಿಕಾದ ಬಾಹ್ಯಕಾಶ ಸಂಸ್ಥೆ ನಾಸಾ ಇದೆಯಲ್ಲಾ ಅದು 2020ರಲ್ಲಿ ಮಂಗಳ ಗ್ರಹಕ್ಕೆ ಉಡಾವಣೆ ಮಾಡುವ ರಾಕೆಟ್ ನಲ್ಲಿ ತಿರುಪತಿ ನಿವಾಸನ ಹೆಸರು ಹೋಗಲಿದೆ.


ಕೆಂಪುಗ್ರಹ ಮಂಗಳಕ್ಕೆ ನಾಸಾ ಉಡಾವಣೆ ಮಾಡಲಿದ್ದು, ರಾಕೆಟ್ ನ ರೋವರ್ ಒಳಗೆ ಒಂದು ಮೈಕ್ರೋ ಚಿಪ್ ಅಳವಡಿಸಲಾಗುತ್ತದೆ. ಈ ಚಿಪ್ ನಲ್ಲಿ ಸುಮಾರು 1 ಕೋಟಿ ಹೆಸರನ್ನು ನಮೂದಿಸಿ ಮಂಗಳಕ್ಕೆ ಕಳುಹಿಸುತ್ತಿದ್ದು, ತಿಮ್ಮಪ್ಪನ ಹೆಸರು ಕೂಡ ಇರಲಿದೆ.
ಮಂಗಳ ಗ್ರಹಕ್ಕೆ ನಿಮ್ಮ ಹೆಸರು ಕಳುಹಿಸಿ ಎಂದು ಸಂಸ್ಥೆ ವೆಬ್ ಸೈಟ್ ನಲ್ಲಿ ಹೇಳಿತ್ತು. ವಿಶ್ವದ ನಾನಾ ಕಡೆಗಳಿಂದ ಹೆಸರುಗಳು ಹೋಗಿದ್ದವು. ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ರಮಣ ರೆಡ್ಡಿ ತಿರುಪತಿ ವೆಂಕಟೇಶ್ವರ ಸ್ವಾಮಿ ಹೆಸರು ಕಳುಹಿಸಿದ್ದರು. ಅವರು ಹೇಳಿರುವ ಹೆಸರು ಮಂಗಳಕ್ಕೆ ಹೋಗಲಿದೆ ಎಂದು ನಾಸಾ ಸಂದೇಶ ಕಳಹಿಸಿದೆ. ರಮಣ ರೆಡ್ಡಿಯವರೇ ಈ ಬಗ್ಗೆ ಹೇಳಿದ್ದಾರೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...