ಮೋದಿ ಸಂಪುಟದ 42 ಸಚಿವ ವಿರುದ್ಧ ಕ್ರಿಮಿನಲ್ ಕೇಸ್ ಗಳಿವೆ!

Date:

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟ ಪ್ರಸ್ತುತ 78 ಸಚಿವರಿಗೆ ವಿಸ್ತರಣೆಯಾಗಿದೆ. ಸಂಪುಟದಲ್ಲಿ ಗರಿಷ್ಠ 81 ಸಚಿವರನ್ನು ಹೊಂದಲು ಅವಕಾಶವಿದೆ. ಬುಧವಾರ ಸಂಪುಟ ವಿಸ್ತರಣೆ ಮೂಲಕ 43 ಸಚಿವರು ಸೇರ್ಪಡೆಯಾಗಿದ್ದರು. ಇವರಲ್ಲಿ 36 ಹೊಸ ಮುಖಗಳಾಗಿದ್ದರೆ, ಉಳಿದ ಏಳು ಮಂದಿ ರಾಜ್ಯ ಖಾತೆಯಿಂದ ಬಡ್ತಿ ಪಡೆದವರಾಗಿದ್ದರು.
ಆದರೆ ಸಚಿವ ಸಂಪುಟದಲ್ಲಿರುವ ಒಟ್ಟು 78 ಸಚಿವರ ಪೈಕಿ 33 ಮಂದಿ, ಅಂದರೆ ಶೇ 42ರಷ್ಟು ಸಚಿವರು ತಮ್ಮ ವಿರುದ್ಧ ಅಪರಾಧ ಪ್ರಕರಣ ಹೊಂದಿದ್ದಾರೆ. ಅದರಲ್ಲಿಯೂ 24 ಸಚಿವರ ವಿರುದ್ಧ ಕೊಲೆ, ಕೊಲೆ ಪ್ರಯತ್ನ ಮತ್ತು ದರೋಡೆಯಂತಹ ಗಂಭೀರ ಪ್ರಕರಣಗಳಿವೆ ಎಂದು ಪ್ರಜಾಪ್ರಭುತ್ವ ಸುಧಾರಣೆಗಳಿಗಾಗಿ ಸಂಸ್ಥೆ (ಎಡಿಆರ್) ಎಂಬ ಚುನಾವಣಾ ಹಕ್ಕಿನ ಗುಂಪು ಪ್ರಕಟಿಸುವ ವರದಿ ತಿಳಿಸಿದೆ.
2019ರ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ನಾಮಪತ್ರಗಳ ಸಲ್ಲಿಕೆ ವೇಳೆ ನೀಡಿದ್ದ ಅಫಿಡವಿಟ್ ಪರಿಶೀಲಿಸಿ ಎಡಿಆರ್ ಈ ವರದಿ ನೀಡಿದೆ.


ಅಷ್ಟೇ ಅಲ್ಲ, ನೂತನ ಸಚಿವ ಸಂಪುಟದಲ್ಲಿ ಶೇ 90ರಷ್ಟು (70 ಸಚಿವರು) ಮಂದಿ ಕೋಟ್ಯಧಿಪತಿಗಳು. ಇವರೆಲ್ಲ ತಮ್ಮ ಸಂಪತ್ತು 1 ಕೋಟಿ ರೂಪಾಯಿಗೂ ಅಧಿಕವಿದೆ ಎಂದು ಘೋಷಿಸಿದ್ದವರು. ಜ್ಯೋತಿರಾದಿತ್ಯ ಸಿಂಧಿಯಾ (379 ಕೋಟಿ ರೂ), ಪಿಯೂಷ್ ಗೋಯಲ್ (95), ನಾರಾಯಣ ರಾಣೆ (87 ಕೋಟಿ ರೂ) ಮತ್ತು ರಾಜೀವ್ ಚಂದ್ರಶೇಖರ್ (64 ಕೋಟಿ ರೂ)- ಅತ್ಯಧಿಕ ಸಂಪತ್ತು ಹೊಂದಿರುವ ನಾಲ್ವರು ಸಚಿವರಾಗಿದ್ದಾರೆ.
2019ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದು ಸಂಪುಟ ರಚಿಸಿದಾಗ 56 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದರು. ಆಗ ಅಪರಾಧ ಪ್ರಕರಣಗಳನ್ನು ಘೋಷಿಸಿಕೊಂಡಿದ್ದ ಸಚಿವರ ಸಂಖ್ಯೆ ಶೇ 39ರಷ್ಟಿತ್ತು. ಈಗ ಈ ಪ್ರಮಾಣ ಶೇ 3ರಷ್ಟು ಹೆಚ್ಚಾಗಿದೆ. ಆ ಸಂಪುಟದಲ್ಲಿಯೂ ಕೋಟ್ಯಧಿಪತಿಗಳಿಗೆ ಕಡಿಮೆ ಇರಲಿಲ್ಲ. ಆಗ ಶೇ 91ರಷ್ಟು ಕೋಟ್ಯಧಿಪತಿಗಳಿದ್ದರು.
2019ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಅಧಿಕಾರಕ್ಕೆ ಬಂದು ಸಂಪುಟ ರಚಿಸಿದಾಗ 56 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದರು. ಆಗ ಅಪರಾಧ ಪ್ರಕರಣಗಳನ್ನು ಘೋಷಿಸಿಕೊಂಡಿದ್ದ ಸಚಿವರ ಸಂಖ್ಯೆ ಶೇ 39ರಷ್ಟಿತ್ತು. ಈಗ ಈ ಪ್ರಮಾಣ ಶೇ 3ರಷ್ಟು ಹೆಚ್ಚಾಗಿದೆ. ಆ ಸಂಪುಟದಲ್ಲಿಯೂ ಕೋಟ್ಯಧಿಪತಿಗಳಿಗೆ ಕಡಿಮೆ ಇರಲಿಲ್ಲ. ಆಗ ಶೇ 91ರಷ್ಟು ಕೋಟ್ಯಧಿಪತಿಗಳಿದ್ದರು.
ಒಟ್ಟಾರೆ ಲೆಕ್ಕಾಚಾರದಲ್ಲಿ ಪ್ರತಿ ಸಚಿವರ ಸರಾಸರಿ ಸಂಪತ್ತಿನ ಮೌಲ್ಯ 16.24 ಕೋಟಿ ರೂ ಇದೆ. ಅತ್ಯಂತ ಕಡಿಮೆ ಸಂಪತ್ತು ಹೊಂದಿರುವ ಸಚಿವರೆಂದರೆ, ತ್ರಿಪುರಾದ ಪ್ರತಿಮಾ ಭೌಮಿಕ್ (6 ಲಕ್ಷ ರೂ), ಪಶ್ಚಿಮ ಬಂಗಾಳದ ಜಾನ್ ಬರ್ಲಾ (14 ಲಕ್ಷ ರೂ), ರಾಜಸ್ಥಾನದ ಕೈಲಾಶ್ ಚೌಧರಿ (24 ಲಕ್ಷ ರೂ), ಒಡಿಶಾದ ಬಿಶ್ವೇಶ್ವರ್ ತುಡು (27 ಲಕ್ಷ ರೂ) ಮತ್ತು ಮಹಾರಾಷ್ಟ್ರದ ಎಂ. ಮುರಳೀಧರನ್ (27 ಲಕ್ಷ ರೂ).
ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ರಾಜೀವ್ ಚಂದ್ರಶೇಖರ್ 64 ಕೋಟಿ ರೂ ಸಂಪತ್ತು ಹೊಂದಿದ್ದಾರೆ. ನೂತನವಾಗಿ ಸಚಿವರಾದ ಶೋಭಾ ಕರಂದ್ಲಾಜೆ ಅವರು ತಮ್ಮ ಸಂಪತ್ತು ಸುಮಾರು 10 ಕೋಟಿ ರೂ ಇರುವುದಾಗಿ 2019ರಲ್ಲಿ ಚುನಾವಣೆಗೂ ಮುನ್ನ ಘೋಷಿಸಿಕೊಂಡಿದ್ದರು. ಹಾಗೆಯೇ ಬೀದರ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿ ಈಗ ಸಚಿವರಾದ ಭಗವಾನ್ ಖೂಬಾ ಅವರು 5.66 ಕೋಟಿ ರೂ ಆಸ್ತಿ ಘೋಷಿಸಿಕೊಂಡಿದ್ದರು. ಚಿತ್ರದುರ್ಗದ ಎ. ನಾರಾಯಣಸ್ವಾಮಿ ಅವರ ಘೋಷಿತ ಸಂಪತ್ತಿನ ಮೌಲ್ಯ 9.62 ಕೋಟಿ ರೂ. ಮೋದಿ ಸರಕಾರದಲ್ಲಿ ಸಚಿವರಾಗಿ ಮುಂದುವರಿದಿರುವ ಪ್ರಲ್ಹಾದ ಜೋಶಿ ಅವರು 11.14 ಕೋಟಿ ಸಂಪತ್ತು ಹೊಂದಿರುವುದಾಗಿ ಹೇಳಿಕೊಂಡಿದ್ದರು. ಇನ್ನು ಕರ್ನಾಟಕಕ್ಕೆ ಸೇರಿದವರಲ್ಲವಾದರೂ, ರಾಜ್ಯಸಭೆಗೆ ಇಲ್ಲಿಂದ ಆಯ್ಕೆಯಾಗಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಂಪತ್ತಿನ ಮೌಲ್ಯ 2.63 ಕೋಟಿ ರೂ.
ಶೋಭಾ ಅವರ ವಿರುದ್ಧ ಮೂರು ಅಪರಾಧ ಪ್ರಕರಣಗಳು ಬಾಕಿ ಇವೆ. ಭಗವಾನ್ ಖೂಬಾ ವಿರುದ್ಧ ಒಂದು ಪ್ರಕರಣವಿದೆ. ರಾಜೀವ್ ಚಂದ್ರಶೇಖರ್ ವಿರುದ್ಧ ನಾಲ್ಕು ಮತ್ತು ಪ್ರಲ್ಹಾದ್ ಜೋಶಿ ವಿರುದ್ಧ ಒಂದು ಪ್ರಕರಣಗಳು ದಾಖಲಾಗಿವೆ. ಎ. ನಾರಾಯಣಸ್ವಾಮಿ ಹಾಗೂ ನಿರ್ಮಲಾ ಸೀತಾರಾಮನ್ ವಿರುದ್ಧ ಯಾವುದೇ ಪ್ರಕರಣಗಳಿಲ್ಲ. ಇವು ನಾಮಪತ್ರ ಸಲ್ಲಿಸುವಾಗ ನೀಡಿರುವ ಅಂಕಿ ಅಂಶವಾಗಿವೆ.
ನೂತನ ಸಚಿವರ ಶೈಕ್ಷಣಿಕ ಅರ್ಹತೆಯನ್ನು ಗಮನಿಸಿದಾಗ; 21 ಸಚಿವರು ಸ್ನಾತಕೋತ್ತರ ಪದವಿಧರರು, 9 ಮಂದಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. 17 ಮಂದಿ ಪದವಿ ಹಾಗೂ ವೃತ್ತಿಪರ ಪದವಿ ಪಡೆದಿದ್ದಾರೆ. ಇಬ್ಬರು ಸಚಿವರು ಎಂಟನೇ ತರಗತಿ ಮಾತ್ರ ಪಾಸ್ ಮಾಡಿದ್ದರೆ, ಮೂವರು ಹತ್ತನೇ ತರಗತಿ ಹಾಗೂ ಏಳು ಮಂದಿ 9ನೇ ತರಗತಿವರೆಗೆ ಓದಿದ್ದಾರೆ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...