‘ಯಾರಪ್ಪನಿಂದಲೂ ನನ್ನ ಬಂಧಿಸಲಾಗಲ್ಲ’ : ಬಾಬಾ ರಾಮ್ ದೇವ್

Date:

ಹರಿದ್ವಾರ: ಪತಂಜಲಿ ಆಯುರ್ವೇದ ಸಮೂಹದ ಸ್ಥಾಪಕ ಹಾಗೂ ಯೋಗಗುರು ಬಾಬಾ ರಾಮ್‌ದೇವ್ ಮತ್ತು ಭಾರತೀಯ ವೈದ್ಯಕೀಯ ಸಂಸ್ಥೆ ನಡುವಿನ ಸಂಘರ್ಷ ಮುಂದುವರಿದಿದೆ. ಅಲೋಪಥಿ ವೈದ್ಯಕೀಯ ಪದ್ಧತಿಯಿಂದ ಕೋವಿಡ್ ಚಿಕಿತ್ಸೆ ಪಡೆದವರೇ ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿದ್ದಾರೆ ಎಂಬ ಹೇಳಿಕೆ ನೀಡಿದ್ದ ಬಾಬಾ ರಾಮ್‌ದೇವ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಐಎಂಎ ಆಗ್ರಹಿಸಿದೆ.


ಈ  ಮಧ್ಯೆ, ರಾಮ್‌ದೇವ್ ಅವರ ಮತ್ತೊಂದು ವಿಡಿಯೋ ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿನ ‘#ರಾಮ್‌ದೇವ್ ಅವರನ್ನು ಬಂಧಿಸಿ’ ಎಂಬ ಹ್ಯಾಷ್‌ಟ್ಯಾಗ್ ಟ್ರೆಂಡ್ ಬಗ್ಗೆ ಕೆಲವು ವ್ಯಕ್ತಿಗಳ ಜತೆ ಮಾತನಾಡುವ ಸಂದರ್ಭದಲ್ಲಿ ರಾಮ್‌ದೇವ್, ತಮ್ಮನ್ನು ‘ಯಾರಪ್ಪನಿಂದಲೂ ಬಂಧಿಸಲು ಸಾಧ್ಯವಿಲ್ಲ’ ಎಂದು ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಏನಾದರೂ ಆಗಲಿ, ಸ್ವಾಮಿ ರಾಮ್‌ದೇವ್ ಅವರನ್ನು ಬಂಧಿಸಲು ಅವರ ಅಪ್ಪನಿಗೂ ಸಾಧ್ಯವಾಗುವುದಿಲ್ಲ’ ಎಂದು ರಾಮ್‌ದೇವ್ ಹೇಳಿಕೊಂಡಿದ್ದಾರೆ.
ಅವರು, ‘ಕಳ್ಳ ರಾಮ್‌ದೇವ್’, ‘ಮಹಾಕಳ್ಳ ರಾಮ್‌ದೇವ್’, ‘ರಾಮ್‌ದೇವ್‌ನನ್ನು ಬಂಧಿಸಿ’ ಮತ್ತೂ ಇನ್ನಷ್ಟು ಟ್ರೆಂಡ್‌ಗಳನ್ನು ಸೃಷ್ಟಿಸುತ್ತಲೇ ಇರುತ್ತಾರೆ. ಅವರು ಅದನ್ನು ಮಾಡಿಕೊಂಡಿರಲಿ. ನಮ್ಮ ಜನರು ಅಂತಹ ಟ್ರೆಂಡ್‌ಗಳನ್ನು ನಡೆಸುವುದನ್ನು ರೂಢಿಮಾಡಿಕೊಂಡಿದ್ದಾರೆ. ನಮ್ಮ ಟ್ರೆಂಡ್ ಯಾವಾಗಲೂ ಎತ್ತರಕ್ಕೆ ತಲುಪಲಿದೆ” ಎಂದು ರಾಮ್‌ದೇವ್ ಹೇಳಿರುವುದು ವೈರಲ್ ಆಗಿದೆ.

Share post:

Subscribe

spot_imgspot_img

Popular

More like this
Related

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ – ನಾಪತ್ತೆಯಾದ ಮೂವರಿಗೆ ಶೋಧ

ಚಿತ್ರದುರ್ಗದಲ್ಲಿ ಬಸ್ ಭೀಕರ​​ ಅಪಘಾತ: 6 ಜನರ ಮೃತದೇಹ ಪತ್ತೆ -...

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ ತಿಳಿಯಿರಿ

ಮತ್ತಷ್ಟು ಹೆಚ್ಚಿದ ಚಿನ್ನ & ಬೆಳ್ಳಿಯ ದರ, ಇಂದಿನ ಬೆಲೆ ವಿವರ...

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ ಘೋಷಣೆ

ಚಿತ್ರದುರ್ಗ ಬಸ್ ಅಪಘಾತ: ಮೃತರ ಕುಟುಂಬಕ್ಕೆ ಕೇಂದ್ರದಿಂದ ₹2 ಲಕ್ಷ ಪರಿಹಾರ...

ಖಾಸಗಿ ಬಸ್–ಕಂಟೇನರ್ ಲಾರಿ ಡಿಕ್ಕಿ; 9 ಮಂದಿ ಸಜೀವ ದಹನ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ–48ರಲ್ಲಿ...