ಇಬ್ಬರನ್ನು ಬಲಿ ಪಡೆದ ನರ ಹಂತಕ ಚಿರತೆ ಸೆರೆಗೆ ಅರಣ್ಯ ಇಲಾಖೆ ಪ್ಲ್ಯಾನ್

0
83

ತಿ.ನರಸೀಪುರದಲ್ಲಿ ಇಬ್ಬರನ್ನು ಬಲಿ ಪಡೆದ ನರ ಹಂತಕ ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದಾರೆ. ಚಿರತೆ ಸೆರೆ ಹಿಡಿಯಲು ಸುಮಾರು 120 ಜನರನ್ನ ಒಳಗೊಂಡ 13 ನಿಯೋಜಿತ ಕಾರ್ಯಪಡೆಯಿಂದ ಕಾರ್ಯಾಚರಣೆ ನಡೆದಿದೆ.

ಚಿರತೆ ಸೆರೆ ಕಾರ್ಯಾಚರಣೆಗೆ ಮೈಸೂರು ಮತ್ತು ಬಂಡೀಪುರದಿಂದ ತಂಡಗಳು ಆಗಮಿಸಿದ್ದು, ಪ್ರತಿ ತಂಡದಲ್ಲಿ ಓರ್ವ ಶೂಟರ್ ಇದ್ದಾರೆ. ಇನ್ನ 13 ಕಾರ್ಯಪಡೆ ಜೊತೆ ವೈದ್ಯರ ತಂಡವೂ ಕೆಲಸ ನಿರ್ವಹಿಸುತ್ತಿದ್ದು, ಎಲ್ಲಾ ತಂಡಕ್ಕೆ ಅಗತ್ಯ ಸೌಲಭ್ಯ ವಿತರಣೆ ಮಾಡಲಾಗಿದೆ. ಅಲ್ದೆ ಚಿರತೆ ಚಲನವಲನ ಸೆರೆಗೆ ಸುಮಾರು 20 ಡ್ರೋನ್ ಕ್ಯಾಮೆರಾ ಬಳಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here