ವಿಶ್ವೇಶ ತೀರ್ಥ ಶ್ರೀಗಳ ಬಗ್ಗೆ ದ ರಾ ಬೇಂದ್ರೆ ಏನಂತ ಬರೆದಿದ್ರು ಗೊತ್ತಾ?

Date:

ಯತಿಶ್ರೇಷ್ಠ, ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಗಳು ಕೃಷ್ಣೈಕ್ಯರಾಗಿರುವುದರಿಂದ ಭಕ್ತಕೋಟಿ ಶೋಕದ ಸಾಗರದಲ್ಲಿ ಮುಳುಗಿದೆ. 7ನೇ ವಯಸಲ್ಲೇ ಸನ್ಯಾನ ದೀಕ್ಷೆ ಸ್ವೀಕರಿಸಿ, ಧಾರ್ಮಿಕ, ಸಾಮಾಜಿ ಸೇವೆಯನ್ನೇ ಉಸಿರಾಗಿಸಿಕೊಂಡು ಬದುಕಿದ ಸಂತ ವಿಶ್ವೇಶ ತೀರ್ಥರು ಬೃಂದಾವನಸ್ತರಾಗಿದ್ದಾರೆ ಎಂಬ ಸುದ್ದಿ ಬರುತ್ತಿದ್ದಂತೆ ಎಲ್ಲರ ಮನದಲ್ಲೂ ನೀರವ ಮೌನ ಆವರಿಸಿ, ಅನಾಥ ಪ್ರಜ್ಞೆ ಎಲ್ಲರನ್ನೂ ಕಾಡುತ್ತಿದ. ಇಂಥಾ ಮಹಾನ್ ಸಂತರ ಬಗ್ಗೆ ವರಕವಿ ದ ರಾ ಬೇಂದ್ರೆ ಅದ್ಭುತ ಸಾಲುಗಳನ್ನು ಬರೆದಿದ್ದರು.
“ಸಜ್ಜನರನು ಕಾಪಾಡುವ ಸ್ವಾಮೀ ಪಾಡುವೆ ನಿನ್ನಾನಾಮಾ; ವಿಶ್ವಕ್ಕೂ ಸರಿ, ವಿಶ್ವನಿಗೂ ಸರಿ; ವಿಶ್ವೇಶ್ವರನಿಗೂ ಸರಿಯೇ” ಎಂದು ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದರ ಬಗ್ಗೆ ವರಕವಿ ದ ರಾ ಬೇಂದ್ರೆಯವರು ಬರೆದಿದ್ದರು. ಗುರು ಕುಲಕರ್ಣಿ ಎಂಬುವವರು ಟ್ವಿಟ್ಟರಲ್ಲಿ ಈ ಸಾಲುಗಳನ್ನು ಶೇರ್ ಮಾಡಿ ವಿಶ್ವ ಸಂತನಿಗೆ ನಮಿಸಿದ್ದಾರೆ.

೧೯೬೮ರಲ್ಲಿ ಪ್ರಕಟವಾದ ‘ನಿವೇದನ’, `ತತ್ವವಾದ’ ಎಂಬ ವಿಶೇಷ ಸಂಚಿಕೆಯಲ್ಲಿ ಶ್ರೀಗಳ ಬಗ್ಗೆ ದ ರಾ ಬೇಂದ್ರೆ ಬರೆದ ಸಾಲುಗಳು ಪ್ರಕಟವಾಗಿದ್ದವು. ಶ್ರೀ ವಿಶ್ವೇಶತೀರ್ಥರು ಗೆಳೆಯ ಹರಿದಾಸ ಭಟ್ಟರ ಮನೆಯಲ್ಲಿರುವಾಗ ಸ್ವಪ್ನದಲ್ಲಿ ಬಂದು ಅಂತ:ಕರಣದ ಮಾತನಾಡಿದರು. ಕನಕನ ಸೇವೆ ನನಗೂ ಉಡುಪಿಯಲ್ಲಿ ಸಂದಿತು. ಬಾಲ್ಯದಲ್ಲಿ ದಾಸ ಗೋವಿಂದಪ್ಪನವರಿAದ, ತಾರುಣ್ಯದಲ್ಲಿ ಗುರುವರ್ಯ ಮಧ್ವಾಚಾರ್ಯ ಕಟ್ಟಿಯವರಿಂದ ಸಾಗಿಬಂದ ಈ ಸತ್ಸಂಗಫಲವು ೭೩ರ ಈ ಮುಕ್ಕಟ್ಟಿನಲ್ಲಿ ಇಂಥ ಮಹನೀಯರ ಸ್ನೇಹದಿಂದ ಸಫಲವೆನಿಸಿತು. ಸ್ವಾಮಿಗಳು ಅಸಾಮಾನ್ಯರು, ಶ್ರೀ ಕೃಷ್ಣನಿಗೆ ಮಾನ್ಯರು; ಲೋಕಮಾನ್ಯರು ಶ್ರೀಗಳನ್ನು ನೆನೆದಿದ್ದಾರೆ ಗುರು ಕುಲರ್ಣಿ.

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...