ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಮದುವೆ ನಿಶ್ಚಿತಾರ್ಥ.. ‌ರಾಜಕೀಯ ನಾಯಕರು ಭಾಗಿ..

Date:

ಬೆಳಗಾವಿ ಗ್ರಾಮೀಣ‌ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ನಿಶ್ಚಿತಾರ್ಥ ನೆರವೇರಿದೆ.‌ ಶಿವಮೊಗ್ಗ ಜಿಲ್ಲೆ ಭದ್ರಾವತಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಬಿ.ಕೆ. ಸಂಗಮೇಶ್ ಸಹೋದರ ಬಿ.ಕೆ. ಶಿವಕುಮಾರ್ ಪುತ್ರಿ ಹಿತಾ ಜೊತೆಗೆ ಮೃಣಾಲ್ ಸಪ್ತಪದಿ ತುಳಿಯಲಿದ್ದು, ಇಂದು ಶಾಸ್ತ್ರೋಕ್ತವಾಗಿ ಮದುವೆ ನಿಶ್ಚಿತಾರ್ಥ ನೆರೆವೇರಿದೆ.

ಶಿವಮೊಗ್ಗದ ನವುಲೆಯ ಸರ್ಜಿ ಕನ್ವೆಷನಲ್ ಹಾಲ್ ನಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಮತ್ತು ಶಿವಕುಮಾರ್ ಪುತ್ರಿ ಹಿತಾ ಅವರ ಎಂಗೇಜ್ ಮೆಂಟ್ ನಡೆಯಿತು. ಇಂದು ಮಧ್ಯಾಹ್ನ 11 ಗಂಟೆಗೆ ನಿಶ್ಚಿತಾರ್ಥ ನಡೆದಿದೆ.ಗಣಪತಿ ಮತ್ತು ಉಮಾಮಹೇಶ್ವರ ಕಳಶಪೂಜೆ, ಮಡ್ಲಕ್ಕಿ ಶಾಸ್ತ್ರ ಮೊದಲಾದ ‌ಸಂಪ್ರದಾಯಗಳು ಶಾಸ್ತ್ರೋಕ್ತವಾಗಿ ನಡೆದು ಸುಮಾರು 1 ಗಂಟೆಯ ವೇಳೆಗೆ ಉಂಗುರ ಬದಲಾವಣೆ ಶಾಸ್ತ್ರ ನಡೆದಿದ್ದು, ನವೆಂಬರ್ ತಿಂಗಳಲ್ಲಿ ವಿವಾಹ ನಡೆಯಲಿದೆ.

ಇನ್ನೂ, ಮದುವೆ ನಿಶ್ಚಿತಾರ್ಥದಲ್ಲಿ ಪಕ್ಷ ಭೇದ ಮರೆತು ಅಲ್ಲಿ ರಾಜಕೀಯ ನಾಯಕರ ದಂಡೇ ನೆರೆದಿತ್ತು. ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್‌ ಈಶ್ವರಪ್ಪ, ಮಾಜಿ ಸಚಿವ ಕಾಂಗ್ರೆಸ್‌ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ, ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಭಾಗಿಯಾಗಿ ಶುಭಾಶಯ ಕೋರಿದ್ರು.

ಬಾಲ್ಯ ವಿವಾಹದ ವಿರುದ್ಧ ಹೋರಾಡಿದ ಗಟ್ಟಿಗಿತ್ತಿ ..!

ಮಳೆಗಾಲದಲ್ಲಿ ತ್ವಚೆಯ ರಕ್ಷಣೆಗೆ ಮನೆಮದ್ದು..

ಈ ಆಹಾರ ಪದಾರ್ಥಗಳು ಸಿಗರೇಟಿಗಿಂತಲೂ ಡೇಂಜರ್ ..!

ಡಿಯರ್ ಸತ್ಯ ಟೀಸರ್ ರಿಲೀಸ್ ‌ಮಾಡಿದ ಸ್ಯಾಂಡಲ್ ವುಡ್ ಲೀಡರ್..

ಮಳೆಗಾಲದಲ್ಲಿ ಮಕ್ಕಳ ಆರೈಕೆ ಹೀಗಿರಲಿ..

ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ.. ಸಾಂಸ್ಕೃತಿಕ ನಗರಿಯ ಸುಬ್ಬರಾಯನ ಕೆರೆಯ ಇತಿಹಾಸ..

ನಿದ್ರಾಹೀನತೆಯಿಂದ ಬಳಲುತ್ತಿದ್ದೀರಾ? ಹೀಗೆ ಮಾಡಿ

ಅಚ್ಚರಿಯಲ್ಲೇ ಅಚ್ಚರಿ ..ಅತೀ ಹೆಚ್ಚು ಮನುಷ್ಯರನ್ನು ಕೊಲ್ಲುವ ಜೀವಿ ಯಾವ್ದು ಗೊತ್ತಾ..?

ಇದು ಸತ್ತವರ ಹೋಟೆಲ್ ..!

Share post:

Subscribe

spot_imgspot_img

Popular

More like this
Related

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ ಗಂಭೀರ

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ...

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...