ಶಿವಣ್ಣಗೆ ಕವಚ ಕಳಚಿಟ್ಟು ಬನ್ನಿ ಎಂದು ಸವಾಲು ಹಾಕಿದ ಬಾವ ಕುಮಾರ ಬಂಗಾರಪ್ಪ..!

Date:

ನಟ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಅವರಿಗೆ ಅವರ ಬಾವ ಹಾಗೂ ಬಿಜೆಪಿ ಶಾಸಕ ಆಗಿರೋ ಕುಮಾರ ಬಂಗಾರಪ್ಪ ಅವರು ಸವಾಲು ಹಾಕಿದ್ದಾರೆ.
ಸಿನಿಮಾ ಹೆಸರು ಹೇಳಿಕೊಂಡು ರಾಜಕೀಯಕ್ಕೆ ಬರುವುದು ಬೇಡ. ಬರುವ ಆಸೆ ಇದ್ದರೆ ನೇರವಾಗಿ ಬರಲಿ ಎಂದಿದ್ದಾರೆ. ಕವಚ ಸಿನಿಮಾದ ಹೆಸರನ್ನು ಬಳಸಿಕೊಂಡು ಟಾಂಗ್ ನೀಡಿದ ಕುಮಾರ ಬಂಗಾರಪ್ಪ, ಶಿವರಾಜ್​ಕುಮಾರ್ ‘ಕವಚ’ ತೆಗೆದಿಟ್ಟು ರಾಜಕೀಯಕ್ಕೆ ಬರಲಿ. ಚುನಾವಣೆಗೆ ಕವಚ ಹೆಸರಲ್ಲಿ ಬರುವುದು ಬೇಡ ಎಂದು ಹೇಳಿದ್ದಾರೆ.
ರಾಜ್​ಕುಮಾರ್ ಕುಟುಂಬದವರು ರಾಜಕೀಯದಿಂದ ದೂರ ಎಂದು ಹೇಳುವ ಶಿವಣ್ಣ ಸಿನಿಮಾ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಹಿಂದೆ ಕಾಂಗ್ರೆಸ್ ಅನ್ನು ಇಟ್ಟುಕೊಮಡು ಮುಂದೆ ಕವಚ ಇಟ್ಟುಕೊಂಡಿದ್ದಾರೆ. 5 ವರ್ಷ ಶಿವಮೊಗ್ಗ ಕಂಡಿರಲಿಲ್ಲ. ಎಲೆಕ್ಷನ್ ಮುಗಿದ ಮೇಲೆ ಮತ್ತೆ ಶಿವಮೊಗ್ಗ ನೆನಪಿರಲ್ಲ ಎಂದರು. ಶಿವಣ್ಣ ಅವರಲ್ಲದೆ ಕುಮಾರ ಬಂಗಾರಪ್ಪ ತನ್ನ ಸಹೋದರಿ ಗೀತಾ ಅವರ ವಿರುದ್ಧ ಕೂಡ ಗುಡುಗಿದರು.

Share post:

Subscribe

spot_imgspot_img

Popular

More like this
Related

ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು: ನಿಖಿಲ್ ಕುಮಾರಸ್ವಾಮಿ

ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು:...

ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಮನದಾಳದ ಮಾತು…

ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಮನದಾಳದ ಮಾತು…. ಬೆಂಗಳೂರು: ಅರವಿಂದ ವೆಂಕಟೇಶ ರೆಡ್ಡಿ...

10ನೇ ಬಾರಿಗೆ ಬಿಹಾರ CM ಆಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕಾರ!

10ನೇ ಬಾರಿಗೆ ಬಿಹಾರ CM ಆಗಿ ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕಾರ! ಬಿಹಾರ:...

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಟಿಪ್ಸ್‌ ಫಾಲೋ ಮಾಡಿ..!

ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ಟಿಪ್ಸ್‌ ಫಾಲೋ ಮಾಡಿ..! ಚಳಿಗಾಲ (Winter)...