ಸುಮಲತಾ ಪರ ಪ್ರಚಾರಕ್ಕೆ ಇಳಿದಿರುವ ದರ್ಶನ್ , ಯಶ್ ಬಗ್ಗೆ ನಿಖಿಲ್ ಏನಂದ್ರು?

admin
1 Min Read

ಮಂಡ್ಯ ಲೋಕಸಭಾ ಕಣ ಸ್ಟಾರ್ ವಾರ್ ಗೆ ವೇದಿಕೆ ಆಗಿರುವುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಷಯ.
ಕಾಂಗ್ರೆಸ್ – ಜೆಡಿಎಸ್ ನ ಅಭ್ಯರ್ಥಿಯಾಗಿ ಸಿಎಂ‌ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ.
ಇನ್ನೂಂದು ಕಡೆ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಅವರು ಸ್ಪರ್ಧಿಸುತ್ತಿದ್ದಾರೆ‌. ನಾಳೆ ಅವರು ನಾಮಪತ್ರ ಸಲ್ಲಿಸುತ್ತಿದ್ದಾರೆ.
ಸುಮಲತಾ ಪರ ನಟರಾದ ದರ್ಶನ್ ಮತ್ತು ಯಶ್ ನಿಂತಿದ್ದಾರೆ‌ . ನಿನ್ನೆ ಸುದ್ದಿಗೋಷ್ಠಿಯಲ್ಲೂ ಅವರಿಬ್ಬರು ಜೊತೆಗಿದ್ದರು…
ದರ್ಶನ್ ಮತ್ತು ಯಶ್ ಅವರು ಸುಮಲತಾ ಪರ ಪ್ರಚಾರ ಮಾಡುತ್ತಿರುವ ಬಗ್ಗೆ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಅವರಿಗೆ ಒಳ್ಳೆಯದು ಮಾಡಲಿ.‌ ನಂಗೆ ಭಯವಿಲ್ಲ. ನನ್ನ ಜೊತೆಗಿರುವ ಕಾರ್ಯಕರ್ತರೇ ನನ್ನ ಸೈನಿಕರು. ಅವರಿರುವಾಗ ನಾನು ಯಾರಿಗೂ ಹೆದರ ಬೇಕಿಲ್ಲ ಎಂದಿದ್ದಾರೆ.

Share This Article
Leave a Comment