ಸುಶೀಲ್ ಕುಮಾರ್ ಗೆ ಮರಣ ದಂಡನೆ ವಿಧಿಸಿ : ಸಾಗರ್ ತಾಯಿ

Date:

ಸೋನಿಪತ್: ಕುಸ್ತಿಪಟು ಸಾಗರ್​ ರಾಣಾ ಕೊಲೆಗೆ ಸಂಬಂಧಿಸಿದಂತೆ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು 18 ದಿನಗಳ ನಂತರ ಪೊಲೀಸರು ಬಂಧಿಸಿದ್ದಾರೆ.

ಈಗಾಗಲೇ ನ್ಯಾಯಾಲಯ ಅವರನ್ನು 6 ದಿನಗಳ ಪೊಲೀಸ್ ಕಸ್ಟಡಿಗೆ ವಿಚಾರಣೆಗಾಗಿ ಒಪ್ಪಿಸಿದೆ. ಈ ಸಂದರ್ಭದಲ್ಲಿ ‘ಈಟಿವಿ ಭಾರತ’ ಜೊತೆಗೆ ಮಾತನಾಡಿರುವ ಮೃತ ಕುಸ್ತಿಪಟುವಿನ ತಂದೆ ಹಾಗೂ ನಿವೃತ್ತ ದೆಹಲಿ ಪೊಲೀಸ್​ ಅಧಿಕಾರಿಯಾರಿಯಾಗಿರುವ ಆಶೋಕ್ ಧಾಂಖರ್- “ನಮಗೆ ನ್ಯಾಯ ಸಿಗಬೇಕು, ದೆಹಲಿ ಪೊಲೀಸರ ಮೇಲೆ ವಿಶ್ವಾಸವಿದೆ.” ಎಂದಿದ್ದಾರೆ.

ಸಾಗರ್ ತಾಯಿ ಸವಿತಾ ಧಾಂಖರ್ ಮಾತನಾಡಿ, “ಆರೋಪಿ ಸುಶೀಲ್ ಕುಮಾರ್​ಗೆ ಮರಣದಂಡನೆ ಶಿಕ್ಷೆಯಾಗಬೇಕು. ಜೊತೆಗೆ ಸುಶೀಲ್​ ಪಡೆದಿರುವ ಎಲ್ಲಾ ಮೆಡಲ್ ಮತ್ತು ಗೌರವಾನ್ವಿತ ಪ್ರಶಸ್ತಿಗಳನ್ನು ವಾಪಸ್​ ಪಡೆಯಬೇಕು. ಸ್ಟೇಡಿಯಂನಿಂದ ಮತ್ತು ಕುಸ್ತಿ ಕ್ರೀಡಾ ವಿಭಾಗದಿಂದ ಸುಶೀಲ್ ಕುಮಾರ್​ರನ್ನು ತೆಗೆದು ಹಾಕಬೇಕು.” ಎಂದು ಹೇಳಿದ್ದಾರೆ.

ಪೊಲೀಸರ ವರದಿ ಪ್ರಕಾರ ಮೇ 4 ರಂದು ಸುಶೀಲ್ ಕುಮಾರ್ ಮತ್ತು ಅವರ ಸಹಚರರು ಛತ್ರಸಾಲ್​ ಸ್ಟೇಡಿಯಂಗೆ ಸಾಗರ್ ಮತ್ತು ಅವರ ಸ್ನೇಹಿತರನ್ನು ಕರೆತಂದು ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಸಾಗರ್ ಮೃತಪಟ್ಟರೆ, ಸ್ನೇಹಿತರು ಗಾಯಗೊಂಡಿದ್ದರು. ಸಾಗರ್​ ಮೃತಪಟ್ಟ ನಂತರ ಸುಶೀಲ್ ಕುಮಾರ್ ನಾಪತ್ತೆಯಾಗಿದ್ದರು. ಕೊನೆಗೆ ಮೇ 23ರಂದು ದೆಹಲಿ ಪೊಲೀಸರಿಂದ ಬಂಧನವಾಗಿದ್ದರು.​

 

Share post:

Subscribe

spot_imgspot_img

Popular

More like this
Related

ಕಾಂಟ್ರವರ್ಸಿಗೆ ಬ್ರೇಕ್ ಹಾಕಿದ ರಶ್ಮಿಕಾ – ವಿಜಯ್ !

ಕಾಂಟ್ರವರ್ಸಿಗೆ ಬ್ರೇಕ್ ಹಾಕಿದ ರಶ್ಮಿಕಾ - ವಿಜಯ್ ! ನಟಿ ರಶ್ಮಿಕಾ ಮಂದಣ್ಣ...

ಕೆಪಿಎಸ್ ಶಾಲೆಗಳಿಗೆ ‘ಮ್ಯಾಗ್ನೆಟ್’ ರೂಪಾಂತರ: ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು: ಕೃಷ್ಣ ಬೈರೇಗೌಡ 

ಕೆಪಿಎಸ್ ಶಾಲೆಗಳಿಗೆ ‘ಮ್ಯಾಗ್ನೆಟ್’ ರೂಪಾಂತರ: ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು:...

ಗ್ಯಾರಂಟಿ ಹೊರತು ಅಭಿವೃದ್ಧಿ ಕಾಣುತ್ತಿಲ್ಲ: ಕೇಂದ್ರ ಸಚಿವ H. D. ಕುಮಾರಸ್ವಾಮಿ ಟೀಕೆ

ಗ್ಯಾರಂಟಿ ಹೊರತು ಅಭಿವೃದ್ಧಿ ಕಾಣುತ್ತಿಲ್ಲ: ಕೇಂದ್ರ ಸಚಿವ H. D. ಕುಮಾರಸ್ವಾಮಿ...

ಮಧ್ಯಾಹ್ನ ಮಲಗುವವರಿಗೂ ಎಚ್ಚರಿಕೆ: ಮಧುಮೇಹದ ಅಪಾಯ ಹೆಚ್ಚಬಹುದು!

ಮಧ್ಯಾಹ್ನ ಮಲಗುವವರಿಗೂ ಎಚ್ಚರಿಕೆ: ಮಧುಮೇಹದ ಅಪಾಯ ಹೆಚ್ಚಬಹುದು! ಹೆಚ್ಚಿನವರಿಗೆ ಮಧ್ಯಾಹ್ನ ಚಿಕ್ಕನಿದ್ರೆ ಅಥವಾ...