ಸುಶೀಲ್ ಕುಮಾರ್ ಗೆ ಮರಣ ದಂಡನೆ ವಿಧಿಸಿ : ಸಾಗರ್ ತಾಯಿ

Date:

ಸೋನಿಪತ್: ಕುಸ್ತಿಪಟು ಸಾಗರ್​ ರಾಣಾ ಕೊಲೆಗೆ ಸಂಬಂಧಿಸಿದಂತೆ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು 18 ದಿನಗಳ ನಂತರ ಪೊಲೀಸರು ಬಂಧಿಸಿದ್ದಾರೆ.

ಈಗಾಗಲೇ ನ್ಯಾಯಾಲಯ ಅವರನ್ನು 6 ದಿನಗಳ ಪೊಲೀಸ್ ಕಸ್ಟಡಿಗೆ ವಿಚಾರಣೆಗಾಗಿ ಒಪ್ಪಿಸಿದೆ. ಈ ಸಂದರ್ಭದಲ್ಲಿ ‘ಈಟಿವಿ ಭಾರತ’ ಜೊತೆಗೆ ಮಾತನಾಡಿರುವ ಮೃತ ಕುಸ್ತಿಪಟುವಿನ ತಂದೆ ಹಾಗೂ ನಿವೃತ್ತ ದೆಹಲಿ ಪೊಲೀಸ್​ ಅಧಿಕಾರಿಯಾರಿಯಾಗಿರುವ ಆಶೋಕ್ ಧಾಂಖರ್- “ನಮಗೆ ನ್ಯಾಯ ಸಿಗಬೇಕು, ದೆಹಲಿ ಪೊಲೀಸರ ಮೇಲೆ ವಿಶ್ವಾಸವಿದೆ.” ಎಂದಿದ್ದಾರೆ.

ಸಾಗರ್ ತಾಯಿ ಸವಿತಾ ಧಾಂಖರ್ ಮಾತನಾಡಿ, “ಆರೋಪಿ ಸುಶೀಲ್ ಕುಮಾರ್​ಗೆ ಮರಣದಂಡನೆ ಶಿಕ್ಷೆಯಾಗಬೇಕು. ಜೊತೆಗೆ ಸುಶೀಲ್​ ಪಡೆದಿರುವ ಎಲ್ಲಾ ಮೆಡಲ್ ಮತ್ತು ಗೌರವಾನ್ವಿತ ಪ್ರಶಸ್ತಿಗಳನ್ನು ವಾಪಸ್​ ಪಡೆಯಬೇಕು. ಸ್ಟೇಡಿಯಂನಿಂದ ಮತ್ತು ಕುಸ್ತಿ ಕ್ರೀಡಾ ವಿಭಾಗದಿಂದ ಸುಶೀಲ್ ಕುಮಾರ್​ರನ್ನು ತೆಗೆದು ಹಾಕಬೇಕು.” ಎಂದು ಹೇಳಿದ್ದಾರೆ.

ಪೊಲೀಸರ ವರದಿ ಪ್ರಕಾರ ಮೇ 4 ರಂದು ಸುಶೀಲ್ ಕುಮಾರ್ ಮತ್ತು ಅವರ ಸಹಚರರು ಛತ್ರಸಾಲ್​ ಸ್ಟೇಡಿಯಂಗೆ ಸಾಗರ್ ಮತ್ತು ಅವರ ಸ್ನೇಹಿತರನ್ನು ಕರೆತಂದು ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಸಾಗರ್ ಮೃತಪಟ್ಟರೆ, ಸ್ನೇಹಿತರು ಗಾಯಗೊಂಡಿದ್ದರು. ಸಾಗರ್​ ಮೃತಪಟ್ಟ ನಂತರ ಸುಶೀಲ್ ಕುಮಾರ್ ನಾಪತ್ತೆಯಾಗಿದ್ದರು. ಕೊನೆಗೆ ಮೇ 23ರಂದು ದೆಹಲಿ ಪೊಲೀಸರಿಂದ ಬಂಧನವಾಗಿದ್ದರು.​

 

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...