30 ವರ್ಷದ ಹಿಂದೆ ತಾಯಿ ಅದೆಂಥಾ ತಪ್ಪು ಮಾಡಿದ್ದಕ್ಕೆ ಕುಟುಂಬಕ್ಕೆ ಇಂದು ಇದೆಂಥಾ ಶಿಕ್ಷೆ..!

Date:

ತಾಯಿ ಮಾಡಿದ ತಪ್ಪಿಗೆ ಮಕ್ಕಳು ಇಂದು ಶಿಕ್ಷೆ ಅನುಭವಿಸುತ್ತಿದ್ದಾರೆ. ಅದೂ ಆ ತಾಯಿ ತಪ್ಪು ಮಾಡಿದ್ದು ಇಂದು -ನಿನ್ನೆ ಅಲ್ಲ. 30 ವರ್ಷದ ಹಿಂದೆ.
ತಾಯಿ ಅಂದು ಮಾಡಿರ ಆ ತಪ್ಪಿಗೆ ಇಂದು ಆಕೆಯ ಕುಟುಂಬದ ಮಕ್ಕಳು ಹೆತ್ತ ತಾಯಿಯನ್ನೇ ಮಾತಾಡಿಸುವಂತಿಲ್ಲ. ಅವಳು ಸತ್ತರೂ ಹೋಗುವಂತಿಲ್ಲ. ಯಾವ್ದೇ ಶುಭಸಮಾರಂಭಗಳಿಗೆ ಅವರಿಗೆ ಪ್ರವೇಶ ಇಲ್ಲ.‌
ಇದು ಚಾಮರಾಜನಗರದ ಕುಟುಂಬವೊಂದರ ಪರಿಸ್ಥಿತಿ. ಅವರ ಕುಟುಂಬಕ್ಕೆ ಹೀಗೆ ಊರವರು ಸಾಮಾಜಿಕ ಬಹಿಷ್ಕಾರ ಹಾಕಲು ಕಾರಣ ತಾಯಿಯ ಆ ತಪ್ಪು.
ಇದು ಪುಟ್ಟಸ್ವಾಮಿ ಎನ್ನುವವರ ಕುಟುಂಬದ ಸ್ಥಿತಿ. ಪುಟ್ಟಸ್ವಾಮಿ ಅವರ ತಾಯಿ 30 ವರ್ಷದ ಹಿಂದೆ‌ ಗಂಡನನ್ನು ಬಿಟ್ಟು ಮತ್ತೊಬ್ಬನನ್ನು ಮದ್ವೆ ಆಗಿ ಓಡಿ ಹೋಗಿದ್ದರಂತೆ. ಈ ಕಾರಣಕ್ಕೆ ಮಕ್ಕಳೀಗ ಶಿಕ್ಷೆ ಅನುಭವಿಸುತ್ತಿದ್ದಾರೆ.ಆ ಮಹಿಳೆಯ ಹಿರಿಯ ಮಗ ನಾಗೆಂದ್ರ ಕುಟುಂಬದವರು ದಂಡ ಕಟ್ಟಿ ಕುಲ ಸೇರಿಕೊಂಡಿದ್ದಾರೆ.‌ ಪುಟ್ಟಸ್ವಾಮಿ ಕುಟುಂಬಕ್ಕೆ ದಂಡ ಕಟ್ಟಲಾಗದೆ ಬಹಿಷ್ಕಾರದ ಶಿಕ್ಷೆ ಎದುರಿಸಬೇಕಾಗಿದೆ…ಪುಟ್ಟಸ್ವಾಮಿ ಕುಟುಂಬ ಕೂಲಿ ಮಾಡಿ ಬದುಕು ಸವೆಸುತ್ತಿರುವ ಬಡ ಕುಟುಂಬವಾಗಿದೆ.

Share post:

Subscribe

spot_imgspot_img

Popular

More like this
Related

ಸಮಾಜದಲ್ಲಿ ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ FIR: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ಸಮಾಜದಲ್ಲಿ ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ FIR: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ಮಂಗಳೂರು:...

ನಡು ರಸ್ತೆಯಲ್ಲೇ ಹಲ್ಲೆ; ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಳಿಯನ ಮೇಲೆ ದಾಳಿ!

ನಡು ರಸ್ತೆಯಲ್ಲೇ ಹಲ್ಲೆ; ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಳಿಯನ ಮೇಲೆ...

ಕರ್ನಾಟಕದಲ್ಲಿ ವರುಣಾರ್ಭಟ: ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್​ ಘೋಷಣೆ

ಕರ್ನಾಟಕದಲ್ಲಿ ವರುಣಾರ್ಭಟ: ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್​ ಘೋಷಣೆ ಬೆಂಗಳೂರು: ರಾಜ್ಯದಾದ್ಯಂತ...

ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ!

ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ! ಬೆಂಗಳೂರು:...