ಒಂದೇ ತಿಂಗಳಲ್ಲಿ45 ಸಾವಿರ ಕೋಟಿ ರೂ ಡ್ರಾ? ಕೇಂದ್ರ ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟೋ ಪ್ರಯತ್ನವೇ…?

Date:

ನಿಮಗೂ ಇದು ಅನುಭಕ್ಕೆ ಬಂದಿರಬಹುದು…? ಬಹುತೇಕ ಎಟಿಎಂಗಳಲ್ಲಿ ಹಣ ಸಿಗ್ತಿಲ್ಲ. ‌ಇದರಿಂದ ಜನ ಹೈರಾಣಾಗಿದ್ದಾರೆ. ಆದರೆ ಕಳೆ್ ಒಂದೇ ತಿಂಗಳಲ್ಲಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದಲ್ಲಿ 45 ಸಾವಿರ ಕೋಟಿ ರೂ ಡ್ರಾ ಮಾಡಲಾಗಿದೆ. ಇದು ಉದ್ದೇಶಪೂರ್ವಕವಾಗಿ ರಾಜಕೀಯ ಪಕ್ಷಗಳು ಮಾಡುತ್ತಿರುವ ಕುತಂತ್ರ ಎನ್ನಲಾಗುತ್ತಿದೆ.


2ಸಾವಿರ ರೂ ಮುಖಬೆಲೆಯ ನೋಟುಗಳನ್ನು ಡ್ರಾ ಮಾಡಿ ಸಂಗ್ರಹಿಸಲಾಗುತ್ತಿದೆ‌ .‌ ಇದರಿಂದ ಎಟಿಎಂಗಳಲ್ಲಿ ಹಣದ ಅಭಾವ ಎದುರಾಗಿದೆ ಎಂದು ತಿಳಿದುಬಂದಿದೆ.
ಆದರೆ, ಇದರಿಂದ ಹೊರತಾಗಿ ದೇಶದ ಜಿಡಿಪಿ ಪ್ರಮಾಣಕ್ಕೆ ನೋಟಿನ ಶೇಕಡಾವಾರು ಪ್ರಮಾಣ ಕಡಿಮೆಯಾಗಿರುವುದೇ ನಗದು ಕೊರತೆಗೆ ಕಾರಣ ಎಂದು ತಿಳಿದುಬಂದಿದೆ. ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ದೇಶದ ಜಿಡಿಪಿಗೆ ಶೇ.11.60 ನಗದು ಲಭ್ಯವಿತ್ತು. ಆದರೆ ಈಗ 50 ಸಾವಿರ ಕೋಟಿ ರೂ ಹೆಚ್ಚಿನ ನೋಟು ಮಾರುಕಟ್ಟೆ ಯಲ್ಲಿದ್ದರೂ ನೋಟಿನ ಪ್ರಮಾಣ ಶೇ.10.70ರಷ್ಟಿದೆ. ವಾರಾಂತ್ಯದೊಳಗೆ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಆರ್​ಬಿಐ ಸ್ಪಷ್ಟಪಡಿಸಿದೆ. ಈಗಾಗಲೇ ಆರ್​ಬಿಐ ತಿಳಿಸಿದಂತೆ ಇನ್ನೊಂದು ತಿಂಗಳಲ್ಲಿ 500 ರೂ. ಮುಖಬೆಲೆಯ 75 ಸಾವಿರ ಕೋಟಿ ರೂ. ಮಾರುಕಟ್ಟೆಗೆ ಬರಲಿದೆ.

100, 200 ಹಂಚಿಕೆ ಹೆಚ್ಚಲಿ: ದೇಶದ ಆರ್ಥಿಕ ವ್ಯವಸ್ಥೆಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ 2 ಸಾವಿರ ರೂ ನೋಟು ಬಂದಿದೆ. ನಗದು ಸಮಸ್ಯೆ ಕಡಿಮೆ ಮಾಡಲು ಕೂಡಲೇ 100 ಹಾಗೂ 200 ರೂ ಮುಖಬೆಲೆಯ ನೋಟಿನ ಮುದ್ರಣ ಹಾಗೂ ಹಂಚಿಕೆ ಹೆಚ್ಚಿಸಬೇಕು ಎಂದು ಎಸ್​ಐಎಸ್ ಅಧ್ಯಕ್ಷ ರಿತುರಾಜ್ ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿನ ಎಟಿಎಂಗಳಿಗೆ ಹಣ ಪೂರೈಸುವ ಸಂಸ್ಥೆಗಳಲ್ಲಿ ಎಸ್​ಐಎಸ್ ಕೂಡ ಒಂದು. ಅವರು ಹೇಳುವಂತೆ ಕಳೆದೊಂದು ತಿಂಗಳಲ್ಲಿ ಎಟಿಎಂನಿಂದ ಬಿಡಿಸಿಕೊಳ್ಳುತ್ತಿರುವ ಸರಾಸರಿ ಮೊತ್ತವು 3 ಸಾವಿರ ರೂ.ಗಳಿಂದ 5 ಸಾವಿರ ರೂ.ಗಳಿಗೆ ಏರಿದೆ.

Share post:

Subscribe

spot_imgspot_img

Popular

More like this
Related

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

ಶಾಸಕ ಹೆಚ್.ವೈ.ಮೇಟಿ ರವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಬೆಂಗಳೂರು: ನಿಷ್ಠಾವಂತ ರಾಜಕಾರಣಿಯಾಗಿದ್ದ...

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌

ಲಿಫ್ಟ್‌ ನಲ್ಲಿ ನೆಲಕ್ಕೆ ಬಡಿದು ನಾಯಿಮರಿ ಕೊಲೆ ಮಾಡಿದ್ದ ಮನೆಕೆಲಸದಾಕೆಯ ಅರೆಸ್ಟ್.!‌ ಬೆಂಗಳೂರು:...

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ

ಕಾಂಗ್ರೆಸ್​​ ಹಿರಿಯ ಶಾಸಕ ಹೆಚ್​.ವೈ. ಮೇಟಿ ಇನ್ನಿಲ್ಲ ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್...

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ

ವಿಜಯಪುರದಲ್ಲಿ ಮತ್ತೆ ಭೂಕಂಪನ; ಭೀತಿಯಲ್ಲಿ ಜನತೆ ವಿಜಯಪುರ: ವಿಜಯಪುರ ನಗರದಲ್ಲಿ ಮತ್ತೊಮ್ಮೆ ಭೂಕಂಪನದ...