ಒಂದೇ ತಿಂಗಳಲ್ಲಿ45 ಸಾವಿರ ಕೋಟಿ ರೂ ಡ್ರಾ? ಕೇಂದ್ರ ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟೋ ಪ್ರಯತ್ನವೇ…?

Date:

ನಿಮಗೂ ಇದು ಅನುಭಕ್ಕೆ ಬಂದಿರಬಹುದು…? ಬಹುತೇಕ ಎಟಿಎಂಗಳಲ್ಲಿ ಹಣ ಸಿಗ್ತಿಲ್ಲ. ‌ಇದರಿಂದ ಜನ ಹೈರಾಣಾಗಿದ್ದಾರೆ. ಆದರೆ ಕಳೆ್ ಒಂದೇ ತಿಂಗಳಲ್ಲಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದಲ್ಲಿ 45 ಸಾವಿರ ಕೋಟಿ ರೂ ಡ್ರಾ ಮಾಡಲಾಗಿದೆ. ಇದು ಉದ್ದೇಶಪೂರ್ವಕವಾಗಿ ರಾಜಕೀಯ ಪಕ್ಷಗಳು ಮಾಡುತ್ತಿರುವ ಕುತಂತ್ರ ಎನ್ನಲಾಗುತ್ತಿದೆ.


2ಸಾವಿರ ರೂ ಮುಖಬೆಲೆಯ ನೋಟುಗಳನ್ನು ಡ್ರಾ ಮಾಡಿ ಸಂಗ್ರಹಿಸಲಾಗುತ್ತಿದೆ‌ .‌ ಇದರಿಂದ ಎಟಿಎಂಗಳಲ್ಲಿ ಹಣದ ಅಭಾವ ಎದುರಾಗಿದೆ ಎಂದು ತಿಳಿದುಬಂದಿದೆ.
ಆದರೆ, ಇದರಿಂದ ಹೊರತಾಗಿ ದೇಶದ ಜಿಡಿಪಿ ಪ್ರಮಾಣಕ್ಕೆ ನೋಟಿನ ಶೇಕಡಾವಾರು ಪ್ರಮಾಣ ಕಡಿಮೆಯಾಗಿರುವುದೇ ನಗದು ಕೊರತೆಗೆ ಕಾರಣ ಎಂದು ತಿಳಿದುಬಂದಿದೆ. ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ದೇಶದ ಜಿಡಿಪಿಗೆ ಶೇ.11.60 ನಗದು ಲಭ್ಯವಿತ್ತು. ಆದರೆ ಈಗ 50 ಸಾವಿರ ಕೋಟಿ ರೂ ಹೆಚ್ಚಿನ ನೋಟು ಮಾರುಕಟ್ಟೆ ಯಲ್ಲಿದ್ದರೂ ನೋಟಿನ ಪ್ರಮಾಣ ಶೇ.10.70ರಷ್ಟಿದೆ. ವಾರಾಂತ್ಯದೊಳಗೆ ಈ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಆರ್​ಬಿಐ ಸ್ಪಷ್ಟಪಡಿಸಿದೆ. ಈಗಾಗಲೇ ಆರ್​ಬಿಐ ತಿಳಿಸಿದಂತೆ ಇನ್ನೊಂದು ತಿಂಗಳಲ್ಲಿ 500 ರೂ. ಮುಖಬೆಲೆಯ 75 ಸಾವಿರ ಕೋಟಿ ರೂ. ಮಾರುಕಟ್ಟೆಗೆ ಬರಲಿದೆ.

100, 200 ಹಂಚಿಕೆ ಹೆಚ್ಚಲಿ: ದೇಶದ ಆರ್ಥಿಕ ವ್ಯವಸ್ಥೆಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ 2 ಸಾವಿರ ರೂ ನೋಟು ಬಂದಿದೆ. ನಗದು ಸಮಸ್ಯೆ ಕಡಿಮೆ ಮಾಡಲು ಕೂಡಲೇ 100 ಹಾಗೂ 200 ರೂ ಮುಖಬೆಲೆಯ ನೋಟಿನ ಮುದ್ರಣ ಹಾಗೂ ಹಂಚಿಕೆ ಹೆಚ್ಚಿಸಬೇಕು ಎಂದು ಎಸ್​ಐಎಸ್ ಅಧ್ಯಕ್ಷ ರಿತುರಾಜ್ ಸಿನ್ಹಾ ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿನ ಎಟಿಎಂಗಳಿಗೆ ಹಣ ಪೂರೈಸುವ ಸಂಸ್ಥೆಗಳಲ್ಲಿ ಎಸ್​ಐಎಸ್ ಕೂಡ ಒಂದು. ಅವರು ಹೇಳುವಂತೆ ಕಳೆದೊಂದು ತಿಂಗಳಲ್ಲಿ ಎಟಿಎಂನಿಂದ ಬಿಡಿಸಿಕೊಳ್ಳುತ್ತಿರುವ ಸರಾಸರಿ ಮೊತ್ತವು 3 ಸಾವಿರ ರೂ.ಗಳಿಂದ 5 ಸಾವಿರ ರೂ.ಗಳಿಗೆ ಏರಿದೆ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...