No menu items!
8 C
Munich
Saturday, May 2, 2026

ಮಹಿಳೆ ಜೊತೆ ಮೋಜು ಮಸ್ತಿ ನಡೆಸಿ ಊರಿಗೆ ಮರಳಿದವ ಹೆಣವಾದ….!

Must read

ಅನೈತಿಕ ಸಂಬಂಧದಿಂದ ಹಲ್ಲೆಗೊಳಗಾದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.
ಕನಕಪುರ ತಾಲೂಕಿನ ಚಂಬಳಿ ದೊಡ್ಡಿ ಗ್ರಾಮದ ನಂಜಯ್ಯ ಮೃತ. ಈತ ಸ್ವಗ್ರಾಮದ ಮಹಿಳೆಯೊಬ್ಬಳ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಕಳೆದ ತಿಂಗಳು ಆಕೆಯನ್ನು ಹೊರಡಗೆ ಕರೆದೊಯ್ದಿದ್ದ. ಸುತ್ತಾಡಿ,‌ ಮೋಜು ಮಸ್ತಿ ನಡೆಸಿ ಆರು ದಿನಗಳ ಬಳಿಕ ಇಬ್ಬರು ಮನೆಗೆ ವಾಪಾಸ್ಸಾಗಿದ್ದರು.


ಇದರಿಂದ‌ ಕೋಪಗೊಂಡ ಮಹಿಳೆಯ ಪತಿ ಸ್ವಾಮಿ ಜೂನ್ 9 ರಂದು ನಂಜಯ್ಯಗೆ ದೊಣ್ಣೆಯಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದ. ನಂಜಯ್ಯನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಆತ ಸಾವನ್ನಪ್ಪಿದ್ದಾನೆ. ಕೋಡಿಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article