No menu items!
26.3 C
Munich
Thursday, June 18, 2026

ಅಪಘಾತದಲ್ಲಿ ಮೂವರ ದುರ್ಮರಣ

Must read

ಕೆಎಸ್ ಆರ್ ಟಿಸಿ ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ದುರ್ಮರಣವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಘಟಿಸಿದೆ.
ಸಿರಾ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ರ ಕಳ್ಳಂಬೆಳ್ಳ ಬಳಿ ಘಟನೆ ನಡೆದಿದ್ದು, ನಿಖಿತಾ (,27) , ಧನರಾಜ್ (45) ಮತ್ತು ಪರಮೇಶ್ವರ್ ನಾಯ್ಕ್ ಮೃತ ದುರ್ದೈವಿಗಳು. ಪರಮೇಶ್ವರ್ ನಾಯಕ್ ಕಾರವಾರದವರು , ನಿಖಿತಾ ಮತ್ತು ಧನರಾಜ್ ಬೆಂಗಳೂರು ಮೂಲದವರು ಎಂದು ಗುರುತಿಸಲಾಗಿದೆ.
ಎರಡು ಬಸ್ ಗಳು ಸಹ ಚಿತ್ರದುರ್ಗ ಕಡೆಯಿಂದ ಬೆಂಗಳೂರಿನತ್ತ ಬರುತ್ತಿದ್ದವು. ಈ ವೇಳೆ ಕಳ್ಳಂಬೆಳ್ಳ ಬಳಿ ಖಾಸಗಿ ಬಸ್ ಕೆಎಸ್ ಆರ್ ಟಿಸಿ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. 10 ಮಂದಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕಳ್ಳಂಬೆಳ್ಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article