Ind vs Aus : ವ್ಯರ್ಥವಾಯ್ತು ರಾಹುಲ್–ಬುಮ್ರಾ ಹೋರಾಟ..!!
ಇಂದು ವಿಶಾಖಪಟ್ಟಣಂನಲ್ಲಿ ಚುಟುಕು ಕ್ರಿಕೆಟ್ ನ ಕಿಕ್ ಸಖತ್ತಾಗೆ ಇತ್ತು.. ಕೊನೆ ಬಾಲ್ ನವರೆಗೂ ಎರಡು ತಂಡಗಳು ಗೆಲುವಿಗಾಗಿ ಸೆಣಸಿದ್ವು.. ಆದರೆ ಕೊನೆಯ ಒಂದು ಓವರ್ ನಲ್ಲಿ ಬೇಕಾದ 13 ರನ್ ಗಳನ್ನ ಬಿಟ್ಟುಕೊಡುವ ಮೂಲಕ ಟೀಮ್ ಇಂಡಿಯಾ ಕೊನೆ ಬಾಲ್ ನಲ್ಲಿ ಸೋಲನ್ನ ಒಪ್ಪಿಕೊಂಡಿತು.. ಹೌದು ಉಮೇಶ್ ಯಾದವ್ 6 ಬಾಲ್ ಗೆ 13 ರನ್ ನೀಡಿ ತಂಡದ ಸೋಲಿಗೆ ಕಾರಣವಾದ್ರು…
ಇನ್ನು ಕೆ.ಎಲ್.ರಾಹುಲ್ ಅರ್ಧ ಶತಕದ ನೆರವಿನಿಂದ 127 ರನ್ ಗಳ ಸಾಧಾರಣ ಗುರಿ ನೀಡದ ಭಾರತ, ಆಸ್ಟ್ರೇಲಿಯಾವನ್ನ ಕಟ್ಟಿಹಾಕುವ ಪ್ರಯತ್ನ ಮಾಡಿತ್ತು.. ಮ್ಯಾಕ್ಸ್ ವೆಲ್ ವಿಕೆಟ್ ಪಡೆಯುವ ಮೂಲಕ ಮತ್ತೆ ವಿಜಯಲಕ್ಷ್ಮಿ ಭಾರತದ ಪರವಾಗಿತ್ತು.. ಅದರಲ್ಲು 19ನೇ ಓವರ್ ಬೌಲಿಂಗ್ ಮಾಡಿದ ಬುಮ್ರಾ ಗೆಲುವನ್ನ ಭಾರತದ ಕಡೆ ತಿರುಗಿಸಿದ್ರು ಜೊತೆಗೆ ಮೂರು ವಿಕೆಟ್ ಪಡೆದುಕೊಂಡು ಗಮನ ಸೆಳೆದ್ರು..
ಆದರೆ ಕೊನೆ ಓವರ್ ನ ಮ್ಯಾಜಿಕ್ ನಲ್ಲಿ ಟೀಮ್ ಇಂಡಿಯಾ ಆಸೀಸ್ ಬ್ಯಾಟ್ಸಮನ್ ಗಳನ್ನ ಕಟ್ಟಿ ಹಾಕುವಲ್ಲಿ ವಿಫಲವಾಯ್ತು.. ಹೀಗಾಗೆ ಮೊದಲ ಟಿ-20 ಪಂದ್ಯವನ್ನ ಗೆಲ್ಲುವ ಮೂಲಕ ಆಸ್ಟ್ರೇಲಿಯಾ ಭಾರತದಲ್ಲಿ ನಡೆಯುತ್ತಿರುವ ಕ್ರಿಕೆಟ್ ಸರಣಿಯಲ್ಲಿ ಶುಭಾರಂಭ ಮಾಡಿದೆ..