ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕುರುಕ್ಷೇತ್ರ ರಿಲೀಸ್ ಗೆ ರೆಡಿಯಾಗಿದೆ. ನಾಗಣ್ಣ ನಿರ್ದೇಶನದ ಈ ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್, ಅರ್ಜುನ್ ಸರ್ಜಾ, ಕ್ರೇಜಿಸ್ಟಾರ್ ರವಿಚಂದ್ರನ್, ಶಶಿಕುಮಾರ್, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ದೊಡ್ಡ ತಾರಾಗಣವೇ ಇದೆ.
ಈಗಾಗಲೇ ಕುರುಕ್ಷೇತ್ರ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಈ ನಡುವೆ ಮುನಿರತ್ನ ಮತ್ತು ದರ್ಶನ್ ನಡುವೆ ನಡೆದ ಡೀಲ್ ಒಂದು ಬಹಿರಂಗವಾಗಿದೆ. ಹೌದು , ಇತ್ತೀಚೆಗೆ ನಡೆದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಸ್ವತಃ ಡಿ.ಬಾಸ್ ಅವರೇ ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
2007ರಲ್ಲಿ ಉಪೇಂದ್ರ ಮತ್ತು ದರ್ಶನ್ ನಟನೆಯ ಅನಾಥರು ಸಿನಿಮಾ ರಿಲೀಸ್ ಆಗಿತ್ತು. ಸಾಧುಕೋಕಿಲಾ ನಿರ್ದೇಶನದ ಆ ಸಿನಿಮಾಕ್ಕೆ ಬಂಡವಾಳ ಹಾಕಿದ್ದವರು ಮುನಿರತ್ನ. ಆ ಅನಾಥರು ಸಿನಿಮಾ ಟೈಮ್ನಲ್ಲಿ ಮುನಿರತ್ನ ಕುರುಕ್ಷೇತ್ರ ಸಿನಿಮಾವನ್ನು ಮಾಡುವ ಬಗ್ಗೆ ಮಾತಾಡಿದ್ದರಂತೆ. ಆಗ ದರ್ಶನ್ ಮಾಡಿ ಸರ್, ನಿಮ್ಮಂಥಾ ನಿರ್ಮಾಪಕರಿಂದ ಸಾಧ್ಯ ಎಂದಿದ್ದರಂತೆ.
ಕೊನೆಗೂ ಆ ಕಾಲ ಕೂಡಿ ಬಂದಿದ್ದು, ಸಿನಿಮಾ ರಿಲೀಸ್ಗೆ ರೆಡಿಯಾಗಿದೆ. ಸಿನಿಮಾ ತನಗೆ ಇಷ್ಟವಾಗ ಹೊರತು ರಿಲೀಸ್ ಆಗ್ಬಾರ್ದು ಅಂತಿದ್ದ ಮುನಿರತ್ನ ಪೋಸ್ಟ್ ಪ್ರೊಡಕ್ಷನ್ ವರ್ಕ್ಗೆ ತುಂಬಾ ಸಮಯ ತೆಗೆದುಕೊಂಡಿದ್ದರು, ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ.
ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.