5 ವರ್ಷದ ಬಳಿಕ ಕಿಚ್ಚ ಸುದೀಪ್ ಕಮ್ ಬ್ಯಾಕ್! ಏನಿದು ‘ಪೈಲ್ವಾನ್’ ಕುರಿತ ನ್ಯೂಸ್…!?

Date:

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೇವಲ ಒಬ್ಬ ನಟ ಮಾತ್ರವಲ್ಲ. ಅವರೊಬ್ಬ ನಿರ್ದೇಶಕ, ನಿರ್ಮಾಪಕ…ಕಿರುತೆರೆ ನಿರೂಪಕ….ಕ್ರಿಕೆಟಿಗ!
ಆದರೆ, ಕಳೆದ 5 ವರ್ಷಗಳಿಂದ ಮರೆಯಾಗಿದ್ದ ನಿರ್ದೇಶಕ ಸುದೀಪ್ ಮತ್ತೆ ಬರ್ತಿದ್ದಾರೆ.
ಮೈ ಆಟೋಗ್ರಾಫ್ ನಿರ್ದೇಶನದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡ ಸುದೀಪ್ , ವೀರಮದಕರಿ, ಜಸ್ಟ್ ಮಾತ್ ಮಾತಲ್ಲಿ , ಕೆಂಪೇಗೌಡ , ಮಾಣಿಕ್ಯ ಹೀಗೆ ಒಂದಿಷ್ಟು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಆದರೆ, ಮಾಣಿಕ್ಯ ನಂತರ ಸುದೀಪ್ ಯಾವುದೇ ಸಿನಿಮಾ ನಿರ್ದೇಶಿಸಿಲ್ಲ. ಈಗ ಮತ್ತೆ ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ.


5 ವರ್ಷದ ಬಳಿಕ ಸುದೀಪ್ ಡೈರೆಕ್ಷನ್ ಕ್ಯಾಪ್ ತೊಡ್ತಿರೋದು ಅಭಿಮಾನಿಗಳಿಗೆ ಸಂತಸ ತಂದಿದೆ.
ಸದ್ಯ ಸುದೀಪ್ ಕೋಟಿಗೊಬ್ಬ 3 , ದಬಾಂಗ್ 3 ನಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾಗಳ ಬಳಿಕ ಮತ್ತೆ ಒಂದೆರಡು ಸಿನಿಮಾಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಸಿನಿಮಾಗಳ ಬಳಿಕ ತಮ್ಮ ನಿರ್ದೇಶನದ ಸಿನಿ ಕೆಲಸ ಶುರುಮಾಡಲಿದ್ದಾರೆ. ಈಗಾಗಲೇ ಸುದೀಪ್ ಸಿನಿಮಾ ಕಥೆಯನ್ನು ಬರೆದಿಟ್ಟುಕೊಂಡಿದ್ದಾರಂತೆ‌. ಮೈ ಆಟೋಗ್ರಾಫ್ ಸಿನಿಮಾದ ಸೀಕ್ವೆಲ್ ಇದಾಗಿದೆ ಎಂದು ತಿಳಿದು ಬಂದಿದ್ದು, ಸ್ವಮೇಕ್ ಚಿತ್ರವಾಗಿರಲಿದೆಯಂತೆ.


ಒಟ್ಟಿನಲ್ಲಿ ಈ ಹಿಂದೆ ಅನೇಕಬಾರಿ ಸುದೀಪ್ ನಿರ್ದೇಶನ ಮಾಡುವ ಬಗ್ಗೆ ಮಾತುಗಳು ಕೇಳಿಬಂದಿತ್ತು. ಆದರೆ, ಸುದೀಪ್ ಬೇರೆ ಬೇರೆ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದರಿಂದ ನಿರ್ದೇಶನದತ್ತ ಮುಖ ಮಾಡಿರಲಿಲ್ಲ. ಈಗ ವಾಪಸ್ ಆಗೋದು ಪಕ್ಕಾ ಆಗಿದೆ‌.

Share post:

Subscribe

spot_imgspot_img

Popular

More like this
Related

ಚಳಿಗಾಲದಲ್ಲಿ ತಪ್ಪದೆ ಈ 3 ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ! ಯಾವುವು ಗೊತ್ತಾ..?

ಚಳಿಗಾಲದಲ್ಲಿ ತಪ್ಪದೆ ಈ 3 ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ! ಯಾವುವು ಗೊತ್ತಾ..? ಚಳಿಗಾಲದಲ್ಲಿ ಹೃದಯ...

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ: ಬಿ.ವೈ. ವಿಜಯೇಂದ್ರ

ಸಿದ್ದರಾಮಯ್ಯ ಸರ್ಕಾರ ಹಿಂದೂ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ: ಬಿ.ವೈ. ವಿಜಯೇಂದ್ರ ಬೆಂಗಳೂರು: ಮುಖ್ಯಮಂತ್ರಿ...

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ ಬೇಡ – ಡಿ.ಕೆ. ಶಿವಕುಮಾರ್

ಕೋಗಿಲು ಅಕ್ರಮ ಒತ್ತುವರಿ ಪ್ರಕರಣ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ಹಸ್ತಕ್ಷೇಪ...

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ ಗಂಭೀರ

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ...