ಸ್ವಯಂ ಘೋಷಿತ ದೇವಮಾನವ, ರಾಮನಗರ ಜಿಲ್ಲೆಯ ಬಿಡದಿಯ ನಿತ್ಯಾನಂದಸ್ವಾಮಿ ವಿರುದ್ಧ ಮತ್ತೊಂದು ಅತ್ಯಾಚಾರ ಆರೋಪ ಕೇಳಿಬಂದಿದೆ.
ಕೆನಡಾ ಮೂಲದ ಯುವತಿಯೊಬ್ಬಳು ನಿತ್ಯಾನಂದ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ಮೇಲ್ ಮೂಲಕ ದೂರು ನೀಡಿದ್ದಾರೆ.
ನಾನು ಶಿವಾ – ನೀನು ಪಾರ್ವತಿ ಎಂದು ಲೈಂಗಿಕ ದೌರ್ಜನ್ಯ ನಡೆಸಿದ ನಿತ್ಯಾನಂದ? : ಇನ್ನು ನಿತ್ಯಾನಂದ ತಾನೊಬ್ಬ ದೈವೀಪುರಷ , ನಾನು ಶಿವ…ನೀನು ಪಾರ್ವತಿ ಎಂದು ನಿತ್ಯಾನಂದ ಕೆನಾಡ ಯುವತಿಯನ್ನು ರೇಪ್ ಮಾಡಿದ್ದಾನೆ ಎಂಬ ಆರೋಪವಿದೆ. ಸ್ವತಃ ಸಂತ್ರಸ್ತ ಯುವತಿ ಎಸ್ ಪಿಗೆ ಖುದ್ದು ಮಾಡಿರೋ ಇ -ಮೇಲಲ್ಲಿ ಈ ವಿಷಯವನ್ನು ತಿಳಿಸಿದ್ದಾಳೆ.
ಐಪಿಸಿ 376 (ಅತ್ಯಾಚಾರ) ಅಡಿಯಲ್ಲಿ ನಿತ್ಯಾನಂದನ ಮೇಲೆ ಪ್ರಕರಣ ದಾಖಲಿಸಿಕೊಳ್ಳಲು ಬಿಡದಿ ಪೊಲೀಸರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.